<p><strong>ಹಾವೇರಿ</strong>: 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ತಯಾರಿ ಅಂತಿಮ ಹಂತದಲ್ಲಿ ಇದ್ದು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಾವೇರಿ ಜಿಲ್ಲಾಡಳಿತದ ಜೊತೆಗೂಡಿ ಅದ್ಭುತವಾಗಿ ಸಿದ್ದತೆ ಮಾಡುತ್ತಿದೆ. ಈ ಬಾರಿಯ ಸಮ್ಮೇಳನದಲ್ಲಿ ಸಾಕಷ್ಟು ಸರಳೀಕೃತ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಈಗಾಗಲೆ ನಾಡಿನ ಮೂಲೆ ಮೂಲೆಯಿಂದ ಕನ್ನಡಿಗರು ಸಮ್ಮೇಳನಕ್ಕೆ ಆಗಮಿಸುತ್ತಿದ್ದು ಎಲ್ಲ ಕನ್ನಡಿಗರು ಹುಮ್ಮಸದ ಉತ್ಸಾಹವನ್ನು ತೋರುತ್ತಿದ್ದಾರೆ. ಈಗಾಗಲೇ ಪದಾಧಿಕಾರಿಗಳ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ ಸಮ್ಮೇಳನ ನಡೆಯುವ ಸಮಯದಲ್ಲಿಯೂ ಯಾವುದೇ ನೋಂದಣಿಗೆ ಅವಕಾಶ ಇರುವುದಿಲ್ಲ ಎಂದು ಮಹೇಶ ಜೋಶಿ ಸ್ಪಷ್ಟಪಡಿಸಿದ್ದಾರೆ.</p>.<p>ಸರಕಾರಿ ನೌಕರರು ಸಮ್ಮೇಳನಕ್ಕೆ ಭಾಗವಹಿಸುವವರು ಅವರ ಕಚೇರಿಯ ಹಿರಿಯ ಅಧಿಕಾರಿಗಳಿಂದ ಅಧಿಕೃತ ಪತ್ರ ತಂದು ತಮ್ಮ ಪರಿಚಯ ಪತ್ರವನ್ನು ಸಮಮ್ಮೇಳನ ನಡೆಯುವ ಸ್ಥಳದಲ್ಲಿ ಇರುವ ಸ್ವಾಗತ ಕಚೇರಿಯಲ್ಲಿ ಇರುವ ಸಿಬ್ಬಂದಿಗಳಿಗೆ ತೋರಿಸಿದ ಸರಕಾರಿ ಸಿಬ್ಬಂದಿಗಳಿಗೆ 'ಅನ್ಯಕಾರ್ಯ ನಿಮಿತ್ತ' ( ಓ.ಓ.ಡಿ) ಪ್ರಮಾಣ ಪತ್ರವನ್ನು ನೀಡಲಾಗುವುದು.</p>.<p>ಈ ಕುರಿತು ಸರಕಾರಿ ಆದೇಶ ಹೊರಡಿಸಲಾಗಿದ್ದು ಇದರ ಲಾಭವನ್ನು ಸರಕಾರಿ ಸಿಬ್ಬಂದಿಗಳು ಪಡೆದುಕೊಳ್ಳಲು ಕನ್ನಡ ಸಾಹಿತ್ಯ ಪರಿಷತ್ತು ಕೋರಿಕೊಂಡಿದೆ.</p>.<p>ಖಾಸಗಿ ಸಂಸ್ಥಗಳಲ್ಲಿ, ಕಾರ್ಖಾನೆಗಳು ಸೇರಿದಂತೆ ಇತರ ಕಡೆಗಲ್ಲಿ ಕೆಲಸ ಮಾಡುವ ಕನ್ನಡಿಗರು, ಭಾಷಾಭಿಮಾನಿಗಳು, ಸಾಹಿತ್ಯಾಭಿಮಾನಿಗಳು 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ವಿಶೇಷ ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಭಾಗವಸಲು ಇಷ್ಟಪಟ್ಟಲ್ಲಿ ಅಂಥವರಿಗೆ ವೇತನ ಸಹಿತ ರಜಾ ನೀಡಬೇಕು ಎಂದು ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.</p>.<p>ಈ ಕುರಿತು ಕಾರ್ಮಿಕ ಇಲಾಖೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ ಅವರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮನವಿ ಮಾಡಿಕೊಂಡಿತ್ತು. ನಾಡಿನ ಎಲ್ಲಾ ಖಾಸಗಿ ಕಾರ್ಖಾನೆ, ಸಂಘ ಸಂಸ್ಥೆಗಳು, ಕೇಂದ್ರದ ಸಾಮ್ಯದಲ್ಲಿ ಇರುವ ಕಾರ್ಖಾನೆಗಳು, ಸಿಬ್ಬಂದಿ ಸಮ್ಮೇಳನದಲ್ಲಿ ಭಾಗವಹಿಸಬೇಕು.</p>.<p>ಅಂಥವರಿಗೆ ಅವಕಾಶ ಕಲ್ಪಿಸಲು ಹಿನ್ನೆಲೆಯಲ್ಲಿ ವೇತನ ಸಹಿತ ರಜಾ ಘೋಷಣೆ ಮಾಡುವಂತೆ ಆದೇಶ ಮಾಡಿಕೊಂಡಿತ್ತು. ಪರಿಷತ್ತಿನ ಮನವಿಯನ್ನು ಮನ್ನಿಸಿದ ಕಾರ್ಮಿಕ ಇಲಾಖೆ ಕನ್ನಡದ ಅಕ್ಷರ ಜಾತ್ರೆಯಲ್ಲಿ ಭಾಗವಹಿಸುವವರಿಗೆ ವೇತನ ಸಹಿತ ರಜಾ ನೀಡುವಂತೆ ಆದೇಶ ಹೊರಡಿಸಿ ಕನ್ನಡಾಭಿಮಾನವನ್ನು ತೋರಿಸಿದ್ದಾರೆ ಎಂದು ಮಹೇಶ ಜೋಶಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ</strong>: 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ತಯಾರಿ ಅಂತಿಮ ಹಂತದಲ್ಲಿ ಇದ್ದು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಾವೇರಿ ಜಿಲ್ಲಾಡಳಿತದ ಜೊತೆಗೂಡಿ ಅದ್ಭುತವಾಗಿ ಸಿದ್ದತೆ ಮಾಡುತ್ತಿದೆ. ಈ ಬಾರಿಯ ಸಮ್ಮೇಳನದಲ್ಲಿ ಸಾಕಷ್ಟು ಸರಳೀಕೃತ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಈಗಾಗಲೆ ನಾಡಿನ ಮೂಲೆ ಮೂಲೆಯಿಂದ ಕನ್ನಡಿಗರು ಸಮ್ಮೇಳನಕ್ಕೆ ಆಗಮಿಸುತ್ತಿದ್ದು ಎಲ್ಲ ಕನ್ನಡಿಗರು ಹುಮ್ಮಸದ ಉತ್ಸಾಹವನ್ನು ತೋರುತ್ತಿದ್ದಾರೆ. ಈಗಾಗಲೇ ಪದಾಧಿಕಾರಿಗಳ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ ಸಮ್ಮೇಳನ ನಡೆಯುವ ಸಮಯದಲ್ಲಿಯೂ ಯಾವುದೇ ನೋಂದಣಿಗೆ ಅವಕಾಶ ಇರುವುದಿಲ್ಲ ಎಂದು ಮಹೇಶ ಜೋಶಿ ಸ್ಪಷ್ಟಪಡಿಸಿದ್ದಾರೆ.</p>.<p>ಸರಕಾರಿ ನೌಕರರು ಸಮ್ಮೇಳನಕ್ಕೆ ಭಾಗವಹಿಸುವವರು ಅವರ ಕಚೇರಿಯ ಹಿರಿಯ ಅಧಿಕಾರಿಗಳಿಂದ ಅಧಿಕೃತ ಪತ್ರ ತಂದು ತಮ್ಮ ಪರಿಚಯ ಪತ್ರವನ್ನು ಸಮಮ್ಮೇಳನ ನಡೆಯುವ ಸ್ಥಳದಲ್ಲಿ ಇರುವ ಸ್ವಾಗತ ಕಚೇರಿಯಲ್ಲಿ ಇರುವ ಸಿಬ್ಬಂದಿಗಳಿಗೆ ತೋರಿಸಿದ ಸರಕಾರಿ ಸಿಬ್ಬಂದಿಗಳಿಗೆ 'ಅನ್ಯಕಾರ್ಯ ನಿಮಿತ್ತ' ( ಓ.ಓ.ಡಿ) ಪ್ರಮಾಣ ಪತ್ರವನ್ನು ನೀಡಲಾಗುವುದು.</p>.<p>ಈ ಕುರಿತು ಸರಕಾರಿ ಆದೇಶ ಹೊರಡಿಸಲಾಗಿದ್ದು ಇದರ ಲಾಭವನ್ನು ಸರಕಾರಿ ಸಿಬ್ಬಂದಿಗಳು ಪಡೆದುಕೊಳ್ಳಲು ಕನ್ನಡ ಸಾಹಿತ್ಯ ಪರಿಷತ್ತು ಕೋರಿಕೊಂಡಿದೆ.</p>.<p>ಖಾಸಗಿ ಸಂಸ್ಥಗಳಲ್ಲಿ, ಕಾರ್ಖಾನೆಗಳು ಸೇರಿದಂತೆ ಇತರ ಕಡೆಗಲ್ಲಿ ಕೆಲಸ ಮಾಡುವ ಕನ್ನಡಿಗರು, ಭಾಷಾಭಿಮಾನಿಗಳು, ಸಾಹಿತ್ಯಾಭಿಮಾನಿಗಳು 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ವಿಶೇಷ ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಭಾಗವಸಲು ಇಷ್ಟಪಟ್ಟಲ್ಲಿ ಅಂಥವರಿಗೆ ವೇತನ ಸಹಿತ ರಜಾ ನೀಡಬೇಕು ಎಂದು ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.</p>.<p>ಈ ಕುರಿತು ಕಾರ್ಮಿಕ ಇಲಾಖೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ ಅವರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮನವಿ ಮಾಡಿಕೊಂಡಿತ್ತು. ನಾಡಿನ ಎಲ್ಲಾ ಖಾಸಗಿ ಕಾರ್ಖಾನೆ, ಸಂಘ ಸಂಸ್ಥೆಗಳು, ಕೇಂದ್ರದ ಸಾಮ್ಯದಲ್ಲಿ ಇರುವ ಕಾರ್ಖಾನೆಗಳು, ಸಿಬ್ಬಂದಿ ಸಮ್ಮೇಳನದಲ್ಲಿ ಭಾಗವಹಿಸಬೇಕು.</p>.<p>ಅಂಥವರಿಗೆ ಅವಕಾಶ ಕಲ್ಪಿಸಲು ಹಿನ್ನೆಲೆಯಲ್ಲಿ ವೇತನ ಸಹಿತ ರಜಾ ಘೋಷಣೆ ಮಾಡುವಂತೆ ಆದೇಶ ಮಾಡಿಕೊಂಡಿತ್ತು. ಪರಿಷತ್ತಿನ ಮನವಿಯನ್ನು ಮನ್ನಿಸಿದ ಕಾರ್ಮಿಕ ಇಲಾಖೆ ಕನ್ನಡದ ಅಕ್ಷರ ಜಾತ್ರೆಯಲ್ಲಿ ಭಾಗವಹಿಸುವವರಿಗೆ ವೇತನ ಸಹಿತ ರಜಾ ನೀಡುವಂತೆ ಆದೇಶ ಹೊರಡಿಸಿ ಕನ್ನಡಾಭಿಮಾನವನ್ನು ತೋರಿಸಿದ್ದಾರೆ ಎಂದು ಮಹೇಶ ಜೋಶಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>