<p><strong>ತಡಸ (ದುಂಡಶಿ):</strong> ದುಂಡಶಿ ಹೋಬಳಿಯಲ್ಲಿ ಸತತವಾಗಿ ಒಂದು ವಾರದಿಂದ ಸುರಿಯುತ್ತಿದೆ. ಮಳೆ ಜಾಸ್ತಿಯಾದ ಪರಿಣಾಮ ಜೋಳಕ್ಕೆ ತಾಮ್ರ ರೋಗ ಹಾಗೂ ಕೆಂಪು ಬಂದಿದ್ದು, ಜೋಳ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಇದು ಬೇಸರಕ್ಕೆ ಕಾರಣವಾಗಿದೆ.</p>.<p>2025ರ ಮುಂಗಾರು ಹಂಗಾಮಿನಲ್ಲಿ ಜೂನ್ ತಿಂಗಳಲ್ಲಿ ಇಲ್ಲಿಯವರೆಗೆ ಸರಾಸರಿ 201.8 ಮಿ.ಮೀಟರ್ ವಾಡಿಕೆ ಮಳೆ ಆಗುತ್ತಿತ್ತು. ಆದರೆ, ಈಗ 262.0 ಮಿಲಿಮೀಟರ್ ಮಳೆಯಾಗಿದ್ದು, ಶೇಕಡಾ 30% ರಷ್ಟು ಹೆಚ್ಚು ಮಳೆಯಾಗಿದೆ. ಮೆಕ್ಕೆಜೋಳ, ಶೇಂಗಾ, ಸೋಯಾಬೀನ್ ಬೆಳೆಗಳ ಬಿತ್ತನೆ ಶೇಕಡಾ 90% ರಷ್ಟು ಮುಕ್ತಾಯಗೊಂಡಿದ್ದು ಬೆಳೆಗಳು ವಿವಿಧ ಬೆಳವಣಿಗೆ ಹಂತದಲ್ಲಿ ಹಾನಿಗೊಂಡಿದೆ.</p>.<p>ಕಳೆದ ವರ್ಷವೂ ಭಾರಿ ಪ್ರಮಾಣದ ಮಳೆಯಿಂದ ರೈತರು ಬೆಳೆ ಹಾನಿ ಅನುಭವಿಸಿದ್ದು ಈ ವರ್ಷವೂ ಅಪಾರ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಗೆ ರೈತರು ಹಾಕಿರುವ ಬೆಳೆ ಹಾಳಾಗಿದೆ. ಸಾಲ ಸೊಲ ಮಾಡಿ ಹಾಕಿರುವ ಹಣವು ಸಿಗದಂತಾಗಿ ಬಡ್ಡಿ ಕಟ್ಟುವ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.</p>.<p>’ಒಂದು ಎಕರೆ ಭೂಮಿ ಹಸನು ಮಾಡಿ ಬೀಜ ಗೊಬ್ಬರ ಹಾಕಿ ಮತ್ತು ಒಂದು ತಿಂಗಳ ನಂತರ 6- 8 ಬಾರಿ ಗೊಬ್ಬರ ಹಾಕಿ ಒಂದು ಎಕರೆಗೆ ₹35 ರಿಂದ ₹40 ಸಾವಿರ ಖರ್ಚು ಮಾಡಿದ್ದೇನೆ. ಪ್ರತಿ ವರ್ಷವೂ ಬೆಳೆಯು ಕೈಗೆ ಬರದಂತಾಗಿದೆ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ರೈತ ಕೇಶಪ್ಪ ಹೇಳಿದರು.</p>.<p>’ಸತತವಾಗಿ ಸುರಿಯುತ್ತಿರುವ ಮಳೆಗೆ ರೈತರೆಲ್ಲರೂ ಚಿಂತೆಗೀಡಾಗಿದ್ದು ಸ್ಥಳೀಯ ಶಾಸಕರಾಗಲಿ ಜನಪ್ರತಿನಿಧಿಗಳಾಗಲಿ ಇನ್ನೂವರೆಗೆ ರೈತರ ಬೆಳೆ ವೀಕ್ಷಣೆ ಮಾಡಲು ಬಾರದೇ ಇರುವುದು ರೈತರ ಆತ್ಮಸ್ಥೈರ್ಯಕ್ಕೆ ಕಳೆದುಕೊಳ್ಳಲು ಕಾರಣವಾಗುತ್ತಿದೆ’ ಎಂದು ಈರಣ್ಣ ಹೇಳಿದರು.</p>.<p>’ಈಗಾಗಲೇ ಬಿತ್ತಿರುವ ಬೆಳೆಯು ಸಂಪೂರ್ಣ ಹಾನಿಯಾಗಿದ್ದು ಸರ್ಕಾರ ರೈತರಿಗೆ ಪ್ರತಿ ಎಕರೆಗೆ 10 ಸಾವಿರದಂತೆ ಪರಿಹಾರ ನೀಡಬೇಕು. ಇಲ್ಲವಾದರೆ ತಾಲ್ಲೂಕು ಮಟ್ಟದಲ್ಲಿ ಉಗ್ರ ಹೋರಾಟ ಮಾಡುವುದಾಗಿ’ ದುಂಡಶಿ ಹೋಬಳಿಯ ರೈತರು ಎಚ್ಚರಿಸಿದ್ದಾರೆ.</p>.<p>’ಸತತ ಮಳೆಗೆ ಗೋವಿನ ಜೋಳ ಬೆಳೆಯು ಕೆಂಪು ಹಳದಿ ಬಣ್ಣಕ್ಕೆ ತಿರುಗಿದ್ದು, ಇದಕ್ಕೆ ನೀರಿನಲ್ಲಿ ಕರಗುವ 19:19:19 /ಪೊಟ್ಯಾಷ್ 0:0:50/13:0:45 ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 1.5 ಗ್ರಾಂ ಬೆರೆಸಿ ಬೆಳೆಗಳ ಎಲೆಗಳ ಮೇಲೆ ಸಿಂಪರಣೆ ಮಾಡುವುದರಿಂದ ಬೆಳೆಗಳು ಬೇಗನೆ ಚೇತರಿಸಿಕೊಳ್ಳುತ್ತವೆ’ ಎಂದು ಶಿಗ್ಗಾವಿ ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ ಗೆಜ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಡಸ (ದುಂಡಶಿ):</strong> ದುಂಡಶಿ ಹೋಬಳಿಯಲ್ಲಿ ಸತತವಾಗಿ ಒಂದು ವಾರದಿಂದ ಸುರಿಯುತ್ತಿದೆ. ಮಳೆ ಜಾಸ್ತಿಯಾದ ಪರಿಣಾಮ ಜೋಳಕ್ಕೆ ತಾಮ್ರ ರೋಗ ಹಾಗೂ ಕೆಂಪು ಬಂದಿದ್ದು, ಜೋಳ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಇದು ಬೇಸರಕ್ಕೆ ಕಾರಣವಾಗಿದೆ.</p>.<p>2025ರ ಮುಂಗಾರು ಹಂಗಾಮಿನಲ್ಲಿ ಜೂನ್ ತಿಂಗಳಲ್ಲಿ ಇಲ್ಲಿಯವರೆಗೆ ಸರಾಸರಿ 201.8 ಮಿ.ಮೀಟರ್ ವಾಡಿಕೆ ಮಳೆ ಆಗುತ್ತಿತ್ತು. ಆದರೆ, ಈಗ 262.0 ಮಿಲಿಮೀಟರ್ ಮಳೆಯಾಗಿದ್ದು, ಶೇಕಡಾ 30% ರಷ್ಟು ಹೆಚ್ಚು ಮಳೆಯಾಗಿದೆ. ಮೆಕ್ಕೆಜೋಳ, ಶೇಂಗಾ, ಸೋಯಾಬೀನ್ ಬೆಳೆಗಳ ಬಿತ್ತನೆ ಶೇಕಡಾ 90% ರಷ್ಟು ಮುಕ್ತಾಯಗೊಂಡಿದ್ದು ಬೆಳೆಗಳು ವಿವಿಧ ಬೆಳವಣಿಗೆ ಹಂತದಲ್ಲಿ ಹಾನಿಗೊಂಡಿದೆ.</p>.<p>ಕಳೆದ ವರ್ಷವೂ ಭಾರಿ ಪ್ರಮಾಣದ ಮಳೆಯಿಂದ ರೈತರು ಬೆಳೆ ಹಾನಿ ಅನುಭವಿಸಿದ್ದು ಈ ವರ್ಷವೂ ಅಪಾರ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಗೆ ರೈತರು ಹಾಕಿರುವ ಬೆಳೆ ಹಾಳಾಗಿದೆ. ಸಾಲ ಸೊಲ ಮಾಡಿ ಹಾಕಿರುವ ಹಣವು ಸಿಗದಂತಾಗಿ ಬಡ್ಡಿ ಕಟ್ಟುವ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.</p>.<p>’ಒಂದು ಎಕರೆ ಭೂಮಿ ಹಸನು ಮಾಡಿ ಬೀಜ ಗೊಬ್ಬರ ಹಾಕಿ ಮತ್ತು ಒಂದು ತಿಂಗಳ ನಂತರ 6- 8 ಬಾರಿ ಗೊಬ್ಬರ ಹಾಕಿ ಒಂದು ಎಕರೆಗೆ ₹35 ರಿಂದ ₹40 ಸಾವಿರ ಖರ್ಚು ಮಾಡಿದ್ದೇನೆ. ಪ್ರತಿ ವರ್ಷವೂ ಬೆಳೆಯು ಕೈಗೆ ಬರದಂತಾಗಿದೆ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ರೈತ ಕೇಶಪ್ಪ ಹೇಳಿದರು.</p>.<p>’ಸತತವಾಗಿ ಸುರಿಯುತ್ತಿರುವ ಮಳೆಗೆ ರೈತರೆಲ್ಲರೂ ಚಿಂತೆಗೀಡಾಗಿದ್ದು ಸ್ಥಳೀಯ ಶಾಸಕರಾಗಲಿ ಜನಪ್ರತಿನಿಧಿಗಳಾಗಲಿ ಇನ್ನೂವರೆಗೆ ರೈತರ ಬೆಳೆ ವೀಕ್ಷಣೆ ಮಾಡಲು ಬಾರದೇ ಇರುವುದು ರೈತರ ಆತ್ಮಸ್ಥೈರ್ಯಕ್ಕೆ ಕಳೆದುಕೊಳ್ಳಲು ಕಾರಣವಾಗುತ್ತಿದೆ’ ಎಂದು ಈರಣ್ಣ ಹೇಳಿದರು.</p>.<p>’ಈಗಾಗಲೇ ಬಿತ್ತಿರುವ ಬೆಳೆಯು ಸಂಪೂರ್ಣ ಹಾನಿಯಾಗಿದ್ದು ಸರ್ಕಾರ ರೈತರಿಗೆ ಪ್ರತಿ ಎಕರೆಗೆ 10 ಸಾವಿರದಂತೆ ಪರಿಹಾರ ನೀಡಬೇಕು. ಇಲ್ಲವಾದರೆ ತಾಲ್ಲೂಕು ಮಟ್ಟದಲ್ಲಿ ಉಗ್ರ ಹೋರಾಟ ಮಾಡುವುದಾಗಿ’ ದುಂಡಶಿ ಹೋಬಳಿಯ ರೈತರು ಎಚ್ಚರಿಸಿದ್ದಾರೆ.</p>.<p>’ಸತತ ಮಳೆಗೆ ಗೋವಿನ ಜೋಳ ಬೆಳೆಯು ಕೆಂಪು ಹಳದಿ ಬಣ್ಣಕ್ಕೆ ತಿರುಗಿದ್ದು, ಇದಕ್ಕೆ ನೀರಿನಲ್ಲಿ ಕರಗುವ 19:19:19 /ಪೊಟ್ಯಾಷ್ 0:0:50/13:0:45 ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 1.5 ಗ್ರಾಂ ಬೆರೆಸಿ ಬೆಳೆಗಳ ಎಲೆಗಳ ಮೇಲೆ ಸಿಂಪರಣೆ ಮಾಡುವುದರಿಂದ ಬೆಳೆಗಳು ಬೇಗನೆ ಚೇತರಿಸಿಕೊಳ್ಳುತ್ತವೆ’ ಎಂದು ಶಿಗ್ಗಾವಿ ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ ಗೆಜ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>