ರಾಣೆಬೆನ್ನೂರು: ತಾಲ್ಲೂಕಿನ ತುಮ್ಮಿನಕಟ್ಟಿ ವ್ಯಾಪ್ತಿಯ ಮಾಳನಾಯಕನಹಳ್ಳಿ ಗ್ರಾಮದ ಶಫಿವುಲ್ಲಾ ದಸ್ತಗೀರಸಾಬ ಮಮ್ಮಣಗೇರಿ( 56) ಮೇ 24 ರಂದು ಮಧ್ಯಾಹ್ನ ಮನೆಯಿಂದ ಹೊರಗೆ ಹೋಗುವಾಗ ಮನೆಯ ಮುಂದೆ ಹುಚ್ಚುನಾಯಿಯೊಂದು ಬಲ ತೊಡೆಗೆ ಕಚ್ಚಿ ಮೃತಪಟ್ಟ ಘಟನೆ ನಡೆದಿದೆ. ಮೃತನ ಪುತ್ರ ಸೊಹೇಬ ಶಫಿಉಲ್ಲಾ ಮಮ್ಮಣಗೇರಿ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಚ್ಚು ನಾಯಿ ಕಡಿದ ಕೂಡಲೇ ತುಮ್ಮಿನಕಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಉಪಚಾರಕ್ಕೆ ದಾವಣಗೆರೆ ಸಿಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.