ಹಾವೇರಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ್ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ, ಮಾಹಿತಿಯನ್ನುನವದೆಹಲಿಯ ಸಫಾಯಿ ಕರ್ಮಚಾರಿ ರಾಷ್ಟ್ರೀಯ ಆಯೋಗಕ್ಕೆ ಕಳಿಸಬೇಕು ಎಂದು ಆಗ್ರಹಿಸಿ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಜಿಲ್ಲಾ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತದ ಭವನದ ಮುಂಭಾಗಬುಧವಾರ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ 2019ರಿಂದ ಕೈಗೊಂಡಿರುವ ಸಮೀಕ್ಷೆ ಇದುವರೆಗೂ ಪೂರ್ಣಗೊಂಡಿಲ್ಲ. ಅಧಿಕಾರಿಗಳು ಸಮೀಕ್ಷೆ ಮಾಡುವಲ್ಲಿ ನಿರ್ಲಕ್ಷ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಸುಭಾಸ್ ಬೆಂಗಳೂರು ಮಾತನಾಡಿ, ನಗರ ಪ್ರದೇಶಗಳಾದ ರಾಣೇಬೆನ್ನೂರಲ್ಲಿ 10, ಸವಣೂರಲ್ಲಿ 4, ಶಿಗ್ಗಾವಿಯಲ್ಲಿ 5 ಹಾಗೂ ಹಾವೇರಿಯಲ್ಲಿ 36 ಸೇರಿ 55 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 55 ಮ್ಯಾನುಯಲ್ ಸ್ಕ್ಯಾವೆಂಜರ್ಸ್ಗಳಿದ್ದಾರೆ. ಸಮೀಕ್ಷೆ ಮಾಹಿತಿಯನ್ನು ಆಯೋಗಕ್ಕೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳು ಕಳಿಸದ ಕಾರಣಕ್ಕೆ ಮ್ಯಾನುಯಲ್ ಸ್ಕ್ಯಾವೆಂಜರ್ಸ್ಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಸೌಲಭ್ಯಗಳು ಲಭಿಸಿಲ್ಲ ಎಂದು ಅವರು ಆರೋಪಿಸಿದರು.
ನಾಲ್ಕೈದು ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಿ, ರಾಷ್ಟ್ರೀಯ ಆಯೋಗಕ್ಕೆ ಮಾಹಿತಿ ಕಳುಹಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ರವಿ ಕೊಂಡಿ, ಯುವರಾಜ ಭಂಡಾರಿ, ಶಿವಕುಮಾರ ತಿರುಪತಿ, ವೆಂಕಟೇಶ ಕುಲ್ಲಾಯಿ, ಸುಂಕಪ್ಪ ಹಿತ್ತನಾಳ, ವಸಂತ ಗಾಳೆಪ್ಪನವರ, ಆಂಜನೇಯ ದಾವಣಗೆರಿ, ನಿಂಗಪ್ಪ ಹೆಬ್ಬಾಳ, ಪಾಲ್ಗೊಂಡಿದ್ದರು.