<p><strong>ಹಾನಗಲ್:</strong> ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿದ ಶಾಸಕ ಶ್ರೀನಿವಾಸ ಮಾನೆ ಅವರು ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿದರು. ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು.</p>.<p>ತಾಲ್ಲೂಕಿನ ಶಿರಗೋಡ, ಶಾಡಗುಪ್ಪಿ, ಹಾವಣಗಿ, ಮನೋಹರ ನಗರ, ಅರಳೇಶ್ವರ, ಬಾಳಂಬೀಡ, ಬೆಳಗಾಲಪೇಟೆ, ಕಲಕೇರಿ ಸೇರಿ ವಿವಿಧ ಗ್ರಾಮಗಳಲ್ಲಿ ಗ್ರಾಮಸ್ಥರ ಕುಂದು ಕೊರತೆಗಳನ್ನು<br> ಆಲಿಸಿದರು.</p>.<p>ಸ್ಥಳೀಯ ಹಂತದಲ್ಲಿನ ಕುಡಿಯುವ ನೀರಿನ ಅಸಮರ್ಪಕ ಪೂರೈಕೆ, ರಸ್ತೆ ನಿರ್ಮಾಣ, ಸ್ಮಶಾನ ಅಭಿವೃದ್ಧಿ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಜರುಗಿಸುವಂತೆ ಸಂಬಂಧಿತ<br> ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.</p>.<p>‘ನಿರಂತರವಾಗಿ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಆದಷ್ಟು ಸ್ಥಳೀಯ ಹಂತದ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ದೊರಕಿಸಲು ಆದ್ಯತೆ ನೀಡಲಾಗಿದೆ.<br> 24/7 ಸಹಾಯವಾಣಿಯ ಮೂಲಕ ಜನರ ದೂರುಗಳಿಗೆ ಸ್ಪಂದಿಸಲಾಗುತ್ತಿದೆ. ವ್ಯವಸ್ಥಿತ ಕಚೇರಿ ತೆರೆದು ಉತ್ತಮ ಆಡಳಿತಕ್ಕೆ ವಿಶೇಷ ಗಮನ ನೀಡಲಾಗಿದೆ’ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.</p>.<p>ಸ್ಥಳೀಯ ಪ್ರಮುಖರಾದ ಪ್ರಕಾಶ್ ಬಣಕಾರ, ಬಶೀರ್ಅಹ್ಮದ್ ನಾಲಬಂದ್, ಮಹ್ಮದ್ಇಕ್ಬಾಲ್ಸಾಬ್ ಮುಲ್ಲಾ, ರಾಜಶೇಖರ್ ಮಲಗುಂದ, ಪ್ರಕಾಶ ಓಲೇಕಾರ್, ಜಗದೀಶ್ ಬಡಿಗೇರ, ಮಾಲತೇಶ ವಾಲಿಕಾರ, ನಾಗಯ್ಯ ಹಿರೇಮಠ, ರಾಜು ಬಾರ್ಕಿ, ಸಂತೋಷ್ ದುಂಡಣ್ಣನವರ, ಕೊಟ್ರೇಶ್ ಅಂಗಡಿ, ಶಿವಶಂಕರಯ್ಶಾ ಹಿರೇಮಠ, ಪ್ರಶಾಂತ ಕಾಡಪ್ಪನವರ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್:</strong> ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿದ ಶಾಸಕ ಶ್ರೀನಿವಾಸ ಮಾನೆ ಅವರು ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿದರು. ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು.</p>.<p>ತಾಲ್ಲೂಕಿನ ಶಿರಗೋಡ, ಶಾಡಗುಪ್ಪಿ, ಹಾವಣಗಿ, ಮನೋಹರ ನಗರ, ಅರಳೇಶ್ವರ, ಬಾಳಂಬೀಡ, ಬೆಳಗಾಲಪೇಟೆ, ಕಲಕೇರಿ ಸೇರಿ ವಿವಿಧ ಗ್ರಾಮಗಳಲ್ಲಿ ಗ್ರಾಮಸ್ಥರ ಕುಂದು ಕೊರತೆಗಳನ್ನು<br> ಆಲಿಸಿದರು.</p>.<p>ಸ್ಥಳೀಯ ಹಂತದಲ್ಲಿನ ಕುಡಿಯುವ ನೀರಿನ ಅಸಮರ್ಪಕ ಪೂರೈಕೆ, ರಸ್ತೆ ನಿರ್ಮಾಣ, ಸ್ಮಶಾನ ಅಭಿವೃದ್ಧಿ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಜರುಗಿಸುವಂತೆ ಸಂಬಂಧಿತ<br> ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.</p>.<p>‘ನಿರಂತರವಾಗಿ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಆದಷ್ಟು ಸ್ಥಳೀಯ ಹಂತದ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ದೊರಕಿಸಲು ಆದ್ಯತೆ ನೀಡಲಾಗಿದೆ.<br> 24/7 ಸಹಾಯವಾಣಿಯ ಮೂಲಕ ಜನರ ದೂರುಗಳಿಗೆ ಸ್ಪಂದಿಸಲಾಗುತ್ತಿದೆ. ವ್ಯವಸ್ಥಿತ ಕಚೇರಿ ತೆರೆದು ಉತ್ತಮ ಆಡಳಿತಕ್ಕೆ ವಿಶೇಷ ಗಮನ ನೀಡಲಾಗಿದೆ’ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.</p>.<p>ಸ್ಥಳೀಯ ಪ್ರಮುಖರಾದ ಪ್ರಕಾಶ್ ಬಣಕಾರ, ಬಶೀರ್ಅಹ್ಮದ್ ನಾಲಬಂದ್, ಮಹ್ಮದ್ಇಕ್ಬಾಲ್ಸಾಬ್ ಮುಲ್ಲಾ, ರಾಜಶೇಖರ್ ಮಲಗುಂದ, ಪ್ರಕಾಶ ಓಲೇಕಾರ್, ಜಗದೀಶ್ ಬಡಿಗೇರ, ಮಾಲತೇಶ ವಾಲಿಕಾರ, ನಾಗಯ್ಯ ಹಿರೇಮಠ, ರಾಜು ಬಾರ್ಕಿ, ಸಂತೋಷ್ ದುಂಡಣ್ಣನವರ, ಕೊಟ್ರೇಶ್ ಅಂಗಡಿ, ಶಿವಶಂಕರಯ್ಶಾ ಹಿರೇಮಠ, ಪ್ರಶಾಂತ ಕಾಡಪ್ಪನವರ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>