<figcaption>""</figcaption>.<p><strong>ಹಾವೇರಿ:</strong> ಕಾಯ ಕೈಲಾಸವಾಗದೆ, ಕಾಯಕ ಕೈಲಾಸವಾಗುವುದಿಲ್ಲ. ಸಹಜ ಶಿವಯೋಗದಿಂದ ಸುಜ್ಞಾನ, ಸತ್ಕ್ರಿಯೆ, ಸದ್ಭಾವಗಳು ನೆಲೆನಿಂತು ಕಾಯವೂ ಕೈಲಾಸವಾಗುತ್ತದೆ ಎಂದು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.</p>.<p>ನಗರದ ಹೊಸಮಠದ ಬಸವಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ "ಸಹಜ ಶಿವಯೋಗ" ಪ್ರಾತ್ಯಕ್ಷಿಕೆ ನಡೆಸಿಕೊಟ್ಟು ಅವರು ಮಾತನಾಡಿದರು.</p>.<p>ಆಂತರ್ಯದಲ್ಲಿ ಸಮತೋಲನ ಸಾಧಿಸುವುದು ಅಗತ್ಯ. ನಿಮ್ಮ ಬದುಕಿನಲ್ಲಿ ಶಾಂತಿ, ಸಹನೆಯ ಸ್ಥಾಪನೆಯಾಗಬೇಕು. ಶರೀರ ಕ್ರಮಬದ್ಧವಾಗಿ ಕೆಲಸ ಮಾಡಬೇಕೆಂದರೆ ಸಮತೋಲನ ಅಗತ್ಯ ಎಂದರು.<br />ಹೊರಗಿನ ತಲೆಯನ್ನು ಬಾಚಿಕೊಳ್ಳುವ ಜತೆಗೆ, ಒಳಗಿನ ತಲೆಯನ್ನು ಒಪ್ಪವಾಗಿಸುವ ಕೆಲಸವಾಗಬೇಕು. ಕೋಪ ತಾಪ ವಿಕಾರಗಳು ಕಡಿಮೆಯಾಗಿ, ಸಹಜತೆಯ ಬದುಕು ಶಿವಯೋಗದಿಂದ ಲಭ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.</p>.<p>ಬದುಕಿನಲ್ಲಿ ಬರುವ ಸುಖ ದುಃಖ, ಸಮ್ಮಾನ ಅಪಮಾನಗಳನ್ನು ಸಮಾನವಾಗಿ ಸ್ವೀಕರಿಸಬೇಕೇ ಹೊರತು, ವಿಚಲಿತನಾಗಬಾರದು. ಚಂಚಲತೆಯನ್ನು ಕಡಿಮೆ ಮಾಡಿ ಸಾಮಾನ್ಯ ಮನುಷ್ಯನನ್ನು ಶರಣನನ್ನಾಗಿ, ಚಲಿಸುವ ದೇವಾಲಯವನ್ನಾಗಿ ಮಾಡುವುದು ಶಿವಯೋಗ. ಒಟ್ಟಿನಲ್ಲಿ ಶಿವಯೋಗದಿಂದ ಮಾನವ ಮಹಾದೇವನಾಗುತ್ತಾನೆ ಎಂದರು.</p>.<p>ಶ್ರೀಮಠದ ನೂರಾರು ಭಕ್ತರು ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದರು.</p>.<figcaption>"ಸಹಜ ಶಿವಯೋಗ" ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು.</figcaption>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ಹಾವೇರಿ:</strong> ಕಾಯ ಕೈಲಾಸವಾಗದೆ, ಕಾಯಕ ಕೈಲಾಸವಾಗುವುದಿಲ್ಲ. ಸಹಜ ಶಿವಯೋಗದಿಂದ ಸುಜ್ಞಾನ, ಸತ್ಕ್ರಿಯೆ, ಸದ್ಭಾವಗಳು ನೆಲೆನಿಂತು ಕಾಯವೂ ಕೈಲಾಸವಾಗುತ್ತದೆ ಎಂದು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.</p>.<p>ನಗರದ ಹೊಸಮಠದ ಬಸವಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ "ಸಹಜ ಶಿವಯೋಗ" ಪ್ರಾತ್ಯಕ್ಷಿಕೆ ನಡೆಸಿಕೊಟ್ಟು ಅವರು ಮಾತನಾಡಿದರು.</p>.<p>ಆಂತರ್ಯದಲ್ಲಿ ಸಮತೋಲನ ಸಾಧಿಸುವುದು ಅಗತ್ಯ. ನಿಮ್ಮ ಬದುಕಿನಲ್ಲಿ ಶಾಂತಿ, ಸಹನೆಯ ಸ್ಥಾಪನೆಯಾಗಬೇಕು. ಶರೀರ ಕ್ರಮಬದ್ಧವಾಗಿ ಕೆಲಸ ಮಾಡಬೇಕೆಂದರೆ ಸಮತೋಲನ ಅಗತ್ಯ ಎಂದರು.<br />ಹೊರಗಿನ ತಲೆಯನ್ನು ಬಾಚಿಕೊಳ್ಳುವ ಜತೆಗೆ, ಒಳಗಿನ ತಲೆಯನ್ನು ಒಪ್ಪವಾಗಿಸುವ ಕೆಲಸವಾಗಬೇಕು. ಕೋಪ ತಾಪ ವಿಕಾರಗಳು ಕಡಿಮೆಯಾಗಿ, ಸಹಜತೆಯ ಬದುಕು ಶಿವಯೋಗದಿಂದ ಲಭ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.</p>.<p>ಬದುಕಿನಲ್ಲಿ ಬರುವ ಸುಖ ದುಃಖ, ಸಮ್ಮಾನ ಅಪಮಾನಗಳನ್ನು ಸಮಾನವಾಗಿ ಸ್ವೀಕರಿಸಬೇಕೇ ಹೊರತು, ವಿಚಲಿತನಾಗಬಾರದು. ಚಂಚಲತೆಯನ್ನು ಕಡಿಮೆ ಮಾಡಿ ಸಾಮಾನ್ಯ ಮನುಷ್ಯನನ್ನು ಶರಣನನ್ನಾಗಿ, ಚಲಿಸುವ ದೇವಾಲಯವನ್ನಾಗಿ ಮಾಡುವುದು ಶಿವಯೋಗ. ಒಟ್ಟಿನಲ್ಲಿ ಶಿವಯೋಗದಿಂದ ಮಾನವ ಮಹಾದೇವನಾಗುತ್ತಾನೆ ಎಂದರು.</p>.<p>ಶ್ರೀಮಠದ ನೂರಾರು ಭಕ್ತರು ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದರು.</p>.<figcaption>"ಸಹಜ ಶಿವಯೋಗ" ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು.</figcaption>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>