ಆಂತರ್ಯದಲ್ಲಿ ಸಮತೋಲನ ಸಾಧಿಸುವುದು ಅಗತ್ಯ. ನಿಮ್ಮ ಬದುಕಿನಲ್ಲಿ ಶಾಂತಿ, ಸಹನೆಯ ಸ್ಥಾಪನೆಯಾಗಬೇಕು. ಶರೀರ ಕ್ರಮಬದ್ಧವಾಗಿ ಕೆಲಸ ಮಾಡಬೇಕೆಂದರೆ ಸಮತೋಲನ ಅಗತ್ಯ ಎಂದರು.
ಹೊರಗಿನ ತಲೆಯನ್ನು ಬಾಚಿಕೊಳ್ಳುವ ಜತೆಗೆ, ಒಳಗಿನ ತಲೆಯನ್ನು ಒಪ್ಪವಾಗಿಸುವ ಕೆಲಸವಾಗಬೇಕು. ಕೋಪ ತಾಪ ವಿಕಾರಗಳು ಕಡಿಮೆಯಾಗಿ, ಸಹಜತೆಯ ಬದುಕು ಶಿವಯೋಗದಿಂದ ಲಭ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.