‘ಕೆಎಚ್ಎಸ್ಆರ್ಡಿಪಿಯವರು ಜಿಲ್ಲಾಸ್ಪತ್ರೆಯ ಆವರಣದ ಖಾಲಿ ಜಾಗವನ್ನು ಪರಿಶೀಲಿಸಿ ಹೋಗಿದ್ದಾರೆ. ಒಂದು ವರ್ಷದಲ್ಲಿ ನೂತನ ಕಟ್ಟಡ ನಿರ್ಮಾಣವಾದರೆ, ಶುಶ್ರೂಷಾ ಶಾಲೆ ಮತ್ತು ಹಾಸ್ಟೆಲ್ ಕಟ್ಟಡ ಕೊರತೆಯ ಸಮಸ್ಯೆ ನಿವಾರಣೆಯಾಗುತ್ತದೆ.ಎ.ಎನ್.ಎಂ.ಟಿ.ಸಿ ಕಟ್ಟಡದ ಮೇಲ್ಭಾಗ ಎರಡನೇ ಮಹಡಿ ನಿರ್ಮಾಣಕ್ಕೂ ಮಂಜೂರಾತಿ ಸಿಕ್ಕಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ ‘ಪ್ರಜಾವಾಣಿ’ಗೆ ತಿಳಿಸಿದರು.