ಹಿರೇಕೆರೂರು ತಾಲ್ಲೂಕು ಕೋಡ ಗ್ರಾಮದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಕೂಸು ಹುಟ್ಟುವುದಕ್ಕಿಂತ ಮುಂಚೆ ಕುಲಾವಿ ಹೊಲಿಸಿದ್ರಂತೆ’ ಎಂಬಂತೆ ಚುನಾವಣೆಗೆ ಇನ್ನೂ 10 ತಿಂಗಳು ಕಾಲಾವಕಾಶವಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಗಾದಿಗಾಗಿ ಈಗಲೇ ಗುದ್ದಾಟ ಶುರು ಮಾಡಿದ್ದಾರೆ. ಇವರು ಸಿದ್ದರಾಮೋತ್ಸವ, ಅವರು ಶಿವಕುಮಾರೋತ್ಸವ ಮಾಡಿಕೊಳ್ಳುವುದರಿಂದ ಪಕ್ಷದಲ್ಲಿ ದೊಡ್ಡ ಕಂದಕ ಉಂಟಾಗಿ ಅವನತಿಗೆ ಮುನ್ನುಡಿ ಬರೆದಂತಾಗುತ್ತದೆ ಎಂದು ಲೇವಡಿ ಮಾಡಿದರು.