‘ಕಂಪನಿಯ ಕಾಲುವೆ ಮುಖಾಂತರ ಕುಮದ್ವತಿ ನದಿಗೆ ವಿಷಪೂರಿತ ನೀರನ್ನು ಹರಿಸಿದ್ದು, ಅದು ಮುಂದೆ ಕುಮಧ್ವತಿ ನದಿ ಮೂಲಕ ತಾಲ್ಲೂಕಿನ ಜೀವನದಿ ತುಂಗಭದ್ರಾ ನದಿಗೆ ಸೇರುತ್ತದೆ. ಮುಂದೆ ರಾಣೆಬೆನ್ನೂರ ಹಾಗೂ ಬ್ಯಾಡಗಿ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಜಾಗದಲ್ಲಿ ತಲುಪಲಿದೆ. ಇದರಿಂದ ಪಟ್ಟಣದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಂಪನಿಯವರು ಜನರ ಜೀವನ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಈ ಭಾಗದ ರೈತರು ಆರೋಪಿಸಿದ್ದಾರೆ. ಕೂಡಲೇ ಕಂಪನಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು’ ಒತ್ತಾಯಿಸಿದರು.