ಬಯಲಾಟ ಪ್ರದರ್ಶನ ರಂಗೇರಲು ಹಿನ್ನೆಲೆ ಸಂಗೀತ ಬಹುಮುಖ್ಯ. ಬಯಲಾಟದ ಪದಗಳಿಗೆ ಹದವಾಗಿ ಮೃದಂಗ ನುಡಿಸುವ ಚನ್ನಬಸಪ್ಪ, ಹೊಸ ಮೆರುಗು ನೀಡುತ್ತಾರೆ. ಪ್ರದರ್ಶನದ ವೇಳೆ ಮೃದಂಗ ವಾದ್ಯವನ್ನು ನಿಂತುಕೊಂಡು ನುಡಿಸಬೇಕು. ಸುಮಾರು 200 ಅಹೋರಾತ್ರಿ ಪ್ರದರ್ಶನಗಳನ್ನು ನಿಂತುಕೊಂಡೇ ಮೃದಂಗ ನುಡಿಸಿ ಜನ ಮೆಚ್ಚುಗೆಗೆ ಪಾತ್ರರಾದವರು.