ರಾಣೆಬೆನ್ನೂರಿನ ಬನಶಂಕರಿನಗರದ ಡಾ.ಬಿ.ಆರ್.ಅಂಬೇಡ್ಕರ ಭವನದ ಎದುರಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ವಾರ್ಡ್ಗೆ ಬಂದು ಅಲ್ಲಿನ ಜನತೆ ಮತ್ತು ನಗರಸಭೆ ಅಧಿಕಾರಿಗಳ ಜೊತೆಗೆ ಸಭೆ ಮಾಡಿ 24/7 ಕುಡಿಯುವ ನೀರು ಬೀದಿ ದೀಪ ರಸ್ತೆ ಚರಂಡಿ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು
- ಪ್ರಕಾಶ ಕೋಳಿವಾಡ ಶಾಸಕ ರಾಣೆಬೆನ್ನೂರು
ವಾರ್ಡ್ಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಹೆಚ್ಚಿದ್ದು ನಿವಾಸಿಗಳ ಸಭೆ ನಡೆದಾಗ ಅಲ್ಲಿನ ಸಮಸ್ಯೆಗಳ ಪಟ್ಟಿಯನ್ನು ನಗರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ
ಸುವರ್ಣಾ ಸುರಳಿಕೇರಿಮಠ ನಗರಸಭೆ ಸದಸ್ಯೆ
25ನೇ ವಾರ್ಡಿನ ಮೂಲ ಸೌಲಭ್ಯದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಕಾಮಗಾರಿಗಳನ್ನು ಸದ್ಯ ಎಸ್ಟಿಮೇಟ್ ಮಾಡಿಟ್ಟುಕೊಳ್ಳುತ್ತೇವೆ. ಹಂತ ಹಂತವಾಗಿ ನಗರಸಭೆ ಅನುದಾದಲ್ಲಿ ಅಭಿವೃದ್ಧಿ ಪಡಿಸಲಾಗುವುದು