<p><strong>ಹಾವೇರಿ:</strong> ಧಾರವಾಡದ ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನಿಂದ ನೀಡುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ಮಂಗಳವಾರ ಸನ್ಮಾನಿಸಲಾಯಿತು.</p><p>ನಗರದ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಭವನದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಘಟಕ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.</p><p>ಶ್ರೀಪಾದ ಶೆಟ್ಟಿ ಮಾತನಾಡಿ, ‘ಬರೆದಂತೆ ಬದುಕಿದ, ಸಮಿಷ್ಟಿ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವ ಸಾಹಿತಿ ಸತೀಶ ಕುಲಕರ್ಣಿ, ಐವತ್ತು ವರ್ಷಗಳ ಹಿಂದೆ ಕಪ್ಪು ನೆಲದ ಕೆಂಪು ಕಾವ್ಯದ ಮೂಲಕ ಪ್ರಸಿದ್ಧರಾದವರು. ಬೆಂಕಿಯನ್ನು ಬೆಳದಿಂಗಳಾಗಿಸುವ ಸಾಮರ್ಥ್ಯದ ಕವಿ’ ಎಂದರು.</p><p>ಶಂಭು ಬಳಿಗಾರ ಮಾತನಾಡಿ, ‘ಹಾವೇರಿ ನೆಲದ ಅಸ್ಮಿತೆಯಾಗಿರುವ ಸತೀಶ, ತಾವು ಮಾತ್ರ ಬೆಳೆಯದೇ ಮಹಾವೃಕ್ಷವಾಗಿ ಅನೇಕರನ್ನು ಬೆಳೆಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿರುವ ಸತೀಶ ಈಗಲೂ ಅನೇಕರಿಗೆ ಮಾದರಿಯಾಗಿದ್ದಾರೆ’ ಎಂದರು.</p><p>ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ‘ಈವರೆಗೆ ರಾಜ್ಯ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದ ಸತೀಶ ಅವರಿಗೆ ರಾಷ್ಟ್ರೀಯ ಪುರಸ್ಕಾರ ಲಭಿಸಿದ್ದು ವಿಶೇಷವಾಗಿದೆ’ ಎಂದರು.</p><p>ಸನ್ಮಾನ ಸ್ವೀಕರಿಸಿ ಮಾತನಾಡಿದ ಸತೀಶ ಕುಲಕರ್ಣಿ, ‘ದ.ರಾ.ಬೇಂದ್ರೆ ಮತ್ತು ಕುವೆಂಪು, ಕನ್ನಡ ನಾಡಿನ ಎರಡು ಕಣ್ಣುಗಳು. ಇವರ ಪ್ರಭಾವಲಯದಲ್ಲಿಯೇ ನಾವೆಲ್ಲ ಬೆಳೆದವರು. ಬೇಂದ್ರೆ ಎಲ್ಲ ಕಾಲಕ್ಕೂ ನಿಲುಕದ ಕವಿ. ಅವರ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿ ನನಗೆ ಅಮೂಲ್ಯವಾದದ್ದು’ ಎಂದರು.</p><p>ವಿಜಯಕುಮಾರ ಮುದಕಣ್ಣನವರ, ವೈ.ಬಿ. ಆಲದಕಟ್ಟಿ, ಎಸ್.ಎನ್. ದೊಡ್ಡಗೌಡರ, ಗೀತಾ ಸುತ್ತಕೋಟಿ, ರೇಣುಕಾ ಗುಡಿಮನಿ, ಶಂಕರ ಸುತಾರ, ನೇತ್ರಾ ಅಂಗಡಿ, ಎನ್.ಬಿ. ಕಾಳೆ, ಈರಣ್ಣ ಬೆಳವಡಿ, ಎ.ಬಿ. ಗುಡ್ಡಳ್ಳಿ, ಮಾಲತೇಶ ಮರಿಗೂಳಪ್ಪನವರ, ಎಸ್.ಆರ್. ಹಿರೇಮಠ, ಪೃಥ್ವಿರಾಜ ಬೆಟಗೇರಿ, ಶಂಕರ ಬಡಿಗೇರ ಇದ್ದರು.</p>
<p><strong>ಹಾವೇರಿ:</strong> ಧಾರವಾಡದ ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನಿಂದ ನೀಡುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ಮಂಗಳವಾರ ಸನ್ಮಾನಿಸಲಾಯಿತು.</p><p>ನಗರದ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಭವನದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಘಟಕ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.</p><p>ಶ್ರೀಪಾದ ಶೆಟ್ಟಿ ಮಾತನಾಡಿ, ‘ಬರೆದಂತೆ ಬದುಕಿದ, ಸಮಿಷ್ಟಿ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವ ಸಾಹಿತಿ ಸತೀಶ ಕುಲಕರ್ಣಿ, ಐವತ್ತು ವರ್ಷಗಳ ಹಿಂದೆ ಕಪ್ಪು ನೆಲದ ಕೆಂಪು ಕಾವ್ಯದ ಮೂಲಕ ಪ್ರಸಿದ್ಧರಾದವರು. ಬೆಂಕಿಯನ್ನು ಬೆಳದಿಂಗಳಾಗಿಸುವ ಸಾಮರ್ಥ್ಯದ ಕವಿ’ ಎಂದರು.</p><p>ಶಂಭು ಬಳಿಗಾರ ಮಾತನಾಡಿ, ‘ಹಾವೇರಿ ನೆಲದ ಅಸ್ಮಿತೆಯಾಗಿರುವ ಸತೀಶ, ತಾವು ಮಾತ್ರ ಬೆಳೆಯದೇ ಮಹಾವೃಕ್ಷವಾಗಿ ಅನೇಕರನ್ನು ಬೆಳೆಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿರುವ ಸತೀಶ ಈಗಲೂ ಅನೇಕರಿಗೆ ಮಾದರಿಯಾಗಿದ್ದಾರೆ’ ಎಂದರು.</p><p>ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ‘ಈವರೆಗೆ ರಾಜ್ಯ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದ ಸತೀಶ ಅವರಿಗೆ ರಾಷ್ಟ್ರೀಯ ಪುರಸ್ಕಾರ ಲಭಿಸಿದ್ದು ವಿಶೇಷವಾಗಿದೆ’ ಎಂದರು.</p><p>ಸನ್ಮಾನ ಸ್ವೀಕರಿಸಿ ಮಾತನಾಡಿದ ಸತೀಶ ಕುಲಕರ್ಣಿ, ‘ದ.ರಾ.ಬೇಂದ್ರೆ ಮತ್ತು ಕುವೆಂಪು, ಕನ್ನಡ ನಾಡಿನ ಎರಡು ಕಣ್ಣುಗಳು. ಇವರ ಪ್ರಭಾವಲಯದಲ್ಲಿಯೇ ನಾವೆಲ್ಲ ಬೆಳೆದವರು. ಬೇಂದ್ರೆ ಎಲ್ಲ ಕಾಲಕ್ಕೂ ನಿಲುಕದ ಕವಿ. ಅವರ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿ ನನಗೆ ಅಮೂಲ್ಯವಾದದ್ದು’ ಎಂದರು.</p><p>ವಿಜಯಕುಮಾರ ಮುದಕಣ್ಣನವರ, ವೈ.ಬಿ. ಆಲದಕಟ್ಟಿ, ಎಸ್.ಎನ್. ದೊಡ್ಡಗೌಡರ, ಗೀತಾ ಸುತ್ತಕೋಟಿ, ರೇಣುಕಾ ಗುಡಿಮನಿ, ಶಂಕರ ಸುತಾರ, ನೇತ್ರಾ ಅಂಗಡಿ, ಎನ್.ಬಿ. ಕಾಳೆ, ಈರಣ್ಣ ಬೆಳವಡಿ, ಎ.ಬಿ. ಗುಡ್ಡಳ್ಳಿ, ಮಾಲತೇಶ ಮರಿಗೂಳಪ್ಪನವರ, ಎಸ್.ಆರ್. ಹಿರೇಮಠ, ಪೃಥ್ವಿರಾಜ ಬೆಟಗೇರಿ, ಶಂಕರ ಬಡಿಗೇರ ಇದ್ದರು.</p>