<p><strong>ತಡಸ</strong>: ಭೂತಾಯಿಯ ಮಡಿಲಿನಲ್ಲಿ ರೈತರೆಲ್ಲರೂ ಸೀಗೆ ಹುಣ್ಣಿಮೆಯ ದಿನ ಸಂಭ್ರಮಿಸುತ್ತಾರೆ. ರೈತರು ವರ್ಷದಲ್ಲಿ ತಮ್ಮ ಬೆಳೆಗಳಿಗೆ ಅರ್ಪಿಸುವ ಕೊನೆಯ ಪೂಜೆ ಇದಾಗಿದೆ.</p>.<p>ಸಿಗಿ ಹುಣ್ಣಿಮೆಯ ದಿನ ರೈತರು ಹಲವು ಬಗೆಯ ಅಡುಗೆಯನ್ನು ಮಾಡಿ ಹೊಲದಲ್ಲಿ ಬೆಳೆದ ಬೆಳೆಗೆ ಚರಗ ಚೆಲ್ಲುತ್ತಾರೆ. ಈ ಮೂಲಕ ಭೂತಾಯಿಯ ಸೀಮಂತ ಕಾರ್ಯ ನಡೆಸುತ್ತಾರೆ.</p>.<p>ರೈತರು ಹೊಲದಲ್ಲಿ ಐದು ಕಲ್ಲುಗಳನ್ನು, ಸುಣ್ಣ ಮತ್ತು ಕೆಂಪು ಮಣ್ಣನ್ನು ಬಳಿದು ಪಂಚಪಾಂಡವರ ಮೂರ್ತಿ ಎಂದು ಪ್ರತಿಷ್ಠಾಪಿಸುತ್ತಾರೆ. ಅವುಗಳಿಗೆ ಪೂಜೆ ಮಾಡುವುದು ಈ ಹುಣ್ಣಿಮೆಯ ಒಂದು ವಿಶೇಷವಾಗಿದೆ ಎಂದು ಗ್ರಾಮದ ಕಲ್ಲಪ್ಪ ಬೀರೋಳಿ ಹೇಳುತ್ತಾರೆ.</p>.<p>ಸಹ ಕುಟುಂಬ ಭೋಜನ: ರೈತರೆಲ್ಲರೂ ಬಗೆ ಬಗೆಯ ಅಡುಗೆ ತಯಾರಿಸಿಕೊಂಡು ಹೊಲದ ಸುತ್ತಲಿರುವ ದೇವತೆಗಳಿಗೆ ಪೂಜೆ ಅರ್ಪಿಸುತ್ತಾರೆ. ನಂತರ ಚಕ್ಕಡಿ ಹಾಗೂ ಟ್ರ್ಯಾಕ್ಟರ್ ಮೂಲಕ ತಮ್ಮ ಸಂಬಂಧಿಕರು ಹಾಗೂ ಸಹ ಕುಟುಂಬ ಸಮೇತ ಹೊಲಕ್ಕೆ ತೆರಳಿ, ಅಲ್ಲಿಯೇ ಕುಳಿತು ಊಟ ಮಾಡುತ್ತಾರೆ. </p>.<p>ಬಿದಿರು ಬುಟ್ಟಿಗೆ ಸಿಂಗಾರ ಮಾಡಿ ಕೆಂಪು ಮಣ್ಣು ಹಾಗೂ ಸುಣ್ಣದ ಚುಕ್ಕೆ ಇಟ್ಟು ಅದರಲ್ಲಿ ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ಇಟ್ಟು ತೆರಳುವುದು ಈ ಹಬ್ಬದ ವಿಶೇಷವಾಗಿದೆ ಎಂದು ಲಕ್ಷ್ಮವ್ವ ಮಾಹಿತಿ ಹಂಚಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಡಸ</strong>: ಭೂತಾಯಿಯ ಮಡಿಲಿನಲ್ಲಿ ರೈತರೆಲ್ಲರೂ ಸೀಗೆ ಹುಣ್ಣಿಮೆಯ ದಿನ ಸಂಭ್ರಮಿಸುತ್ತಾರೆ. ರೈತರು ವರ್ಷದಲ್ಲಿ ತಮ್ಮ ಬೆಳೆಗಳಿಗೆ ಅರ್ಪಿಸುವ ಕೊನೆಯ ಪೂಜೆ ಇದಾಗಿದೆ.</p>.<p>ಸಿಗಿ ಹುಣ್ಣಿಮೆಯ ದಿನ ರೈತರು ಹಲವು ಬಗೆಯ ಅಡುಗೆಯನ್ನು ಮಾಡಿ ಹೊಲದಲ್ಲಿ ಬೆಳೆದ ಬೆಳೆಗೆ ಚರಗ ಚೆಲ್ಲುತ್ತಾರೆ. ಈ ಮೂಲಕ ಭೂತಾಯಿಯ ಸೀಮಂತ ಕಾರ್ಯ ನಡೆಸುತ್ತಾರೆ.</p>.<p>ರೈತರು ಹೊಲದಲ್ಲಿ ಐದು ಕಲ್ಲುಗಳನ್ನು, ಸುಣ್ಣ ಮತ್ತು ಕೆಂಪು ಮಣ್ಣನ್ನು ಬಳಿದು ಪಂಚಪಾಂಡವರ ಮೂರ್ತಿ ಎಂದು ಪ್ರತಿಷ್ಠಾಪಿಸುತ್ತಾರೆ. ಅವುಗಳಿಗೆ ಪೂಜೆ ಮಾಡುವುದು ಈ ಹುಣ್ಣಿಮೆಯ ಒಂದು ವಿಶೇಷವಾಗಿದೆ ಎಂದು ಗ್ರಾಮದ ಕಲ್ಲಪ್ಪ ಬೀರೋಳಿ ಹೇಳುತ್ತಾರೆ.</p>.<p>ಸಹ ಕುಟುಂಬ ಭೋಜನ: ರೈತರೆಲ್ಲರೂ ಬಗೆ ಬಗೆಯ ಅಡುಗೆ ತಯಾರಿಸಿಕೊಂಡು ಹೊಲದ ಸುತ್ತಲಿರುವ ದೇವತೆಗಳಿಗೆ ಪೂಜೆ ಅರ್ಪಿಸುತ್ತಾರೆ. ನಂತರ ಚಕ್ಕಡಿ ಹಾಗೂ ಟ್ರ್ಯಾಕ್ಟರ್ ಮೂಲಕ ತಮ್ಮ ಸಂಬಂಧಿಕರು ಹಾಗೂ ಸಹ ಕುಟುಂಬ ಸಮೇತ ಹೊಲಕ್ಕೆ ತೆರಳಿ, ಅಲ್ಲಿಯೇ ಕುಳಿತು ಊಟ ಮಾಡುತ್ತಾರೆ. </p>.<p>ಬಿದಿರು ಬುಟ್ಟಿಗೆ ಸಿಂಗಾರ ಮಾಡಿ ಕೆಂಪು ಮಣ್ಣು ಹಾಗೂ ಸುಣ್ಣದ ಚುಕ್ಕೆ ಇಟ್ಟು ಅದರಲ್ಲಿ ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ಇಟ್ಟು ತೆರಳುವುದು ಈ ಹಬ್ಬದ ವಿಶೇಷವಾಗಿದೆ ಎಂದು ಲಕ್ಷ್ಮವ್ವ ಮಾಹಿತಿ ಹಂಚಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>