ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ,‘12ನೇ ಶತಮಾನದ ಕಲ್ಯಾಣ ಕ್ರಾಂತಿಯ ಅಮೂಲ್ಯ ರತ್ನ ಶಿವಶರಣ ಸಮಗಾರ ಹರಳಯ್ಯ. ಅನುಭವ ಮಂಟಪದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೂಂಡ ಮಹಾನುಭಾವಿಗಳು. ಜಾತಿ ಎಂಬುದು ಹುಟ್ಟಿನಿಂದ ಬಂದಿಲ್ಲ. ಉಪ ಜೀವನಕ್ಕಾಗಿ ಕೈಗೊಂಡ ಕಾಯಕವು ಜಾತಿಯಲ್ಲ. ಹುಟ್ಟಿನಿಂದ ಸಕಲ
ಮಾನವ ಕುಲ ಸಮಾನ ಎಂದು ಸಾರಿದ ಶರಣರ ಬದುಕು ನಮಗೆ ದಾರಿದೀಪ’ ಎಂದರು.