ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲ ಮಾನವರು ಸಮಾನರು: ಹೊಸಮಠದ ಬಸವಶಾಂತಲಿಂಗ

Last Updated 4 ಮಾರ್ಚ್ 2021, 14:38 IST
ಅಕ್ಷರ ಗಾತ್ರ

ಹಾವೇರಿ:ನಗರದ ಹೊಸಮಠದಲ್ಲಿ ಶರಣ ಸಂಗಮ ಹಾಗೂ ಮಹಾಶಿವ ಶರಣ ಸಮಗಾರ ಹರಳಯ್ಯನವರ ಸ್ಮರಣೋತ್ಸವ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ,‘12ನೇ ಶತಮಾನದ ಕಲ್ಯಾಣ ಕ್ರಾಂತಿಯ ಅಮೂಲ್ಯ ರತ್ನ ಶಿವಶರಣ ಸಮಗಾರ ಹರಳಯ್ಯ. ಅನುಭವ ಮಂಟಪದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೂಂಡ ಮಹಾನುಭಾವಿಗಳು. ಜಾತಿ ಎಂಬುದು ಹುಟ್ಟಿನಿಂದ ಬಂದಿಲ್ಲ. ಉಪ ಜೀವನಕ್ಕಾಗಿ ಕೈಗೊಂಡ ಕಾಯಕವು ಜಾತಿಯಲ್ಲ. ಹುಟ್ಟಿನಿಂದ ಸಕಲ
ಮಾನವ ಕುಲ ಸಮಾನ ಎಂದು ಸಾರಿದ ಶರಣರ ಬದುಕು ನಮಗೆ ದಾರಿದೀಪ’ ಎಂದರು.

ಡಾ.ಪುಷ್ಪ ಶಲವಾಡಿಮಠ ಉಪನ್ಯಾಸ ನೀಡಿದರು. ಚಂದ್ರಶೇಖರ ಶಿಶುನಳ್ಳಿ ಹಾವೇರಿ, ಮುರಿಗೆಪ್ಪ ಕಡೆಕೊಪ್ಪ ಹಾವೇರಿ, ಹರಳಯ್ಯ ಸಮಾಜದ ಯಲ್ಲಪ್ಪ ಬೆಟ್ಟಗೇರಿ ಇದ್ದರು. ಅಕ್ಕನ ಬಳಗದ ಮಹಿಳೆಯರಿಂದ ಪ್ರಾರ್ಥನೆ ನೆರೆವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT