‘ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಜೀವನ ನಿರ್ವಹಣೆಗಾಗಿ ದುಡಿಮೆ ಮಾಡಬೇಕು. ಕೇವಲ ಹೊಟ್ಟೆಪಾಡಿಗಾಗಿ ಮಾಡುವ ಕೆಲಸ ವೃತ್ತಿ ಎನಿಸುತ್ತದೆ. ಮಾಡುವ ಕೆಲಸದಿಂದ ವ್ಯಕ್ತಿಗೂ, ಸಮಾಜಕ್ಕೂ ಉಪಕಾರವಾಗುವಂತಿರಬೇಕು ಮತ್ತು ಸಮಾಜದ ಅವಕಾಶಗಳನ್ನು ಪೂರೈಸುವಂತಿರಬೇಕು. ಇಂಥ ಕೆಲಸವನ್ನೇ ಸಮರ್ಪಣಾಭಾವದಿಂದ ಪೂಜೆ ಎಂದು ಮಾಡಿದಲ್ಲಿ ಅದು ಕಾಯಕ ಎನಿಸುತ್ತದೆ. ಕಾಯಕದಿಂದ ಬಂದ ಹಣ ಜಂಗಮ ದಾಸೋಹಕ್ಕಾಗಿ ವಿನಿಯೋಗವಾಗಬೇಕು’ ಎಂದರು.