ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ರಾಣೆಬೆನ್ನೂರು: ಬರಿದಾದ ತುಂಗಭದ್ರಾ ನದಿ ಒಡಲು

ರಾಣೆಬೆನ್ನೂರು ನಗರಕ್ಕೆ 24x7 ನೀರು ಪೂರೈಕೆ ಸ್ಥಗಿತ: ಕೊಳವೆಬಾವಿಯ ನೀರೇ ಗತಿ
ಮುಕ್ತೇಶ್ವರ ಪಿ. ಕೂರಗುಂದಮಠ
Published : 28 ಮಾರ್ಚ್ 2024, 6:01 IST
Last Updated : 28 ಮಾರ್ಚ್ 2024, 6:01 IST
ಫಾಲೋ ಮಾಡಿ
Comments
ರಾಣೆಬೆನ್ನೂರಿನ ಗುರುಕೊಟ್ಟೂರೇಶ್ವರ ನಗರದ ದೊಡ್ಡ ಕೆರೆಯಲ್ಲಿ ನೀರು ಕಡಿಮೆಯಾಗಿರುವುದು
ರಾಣೆಬೆನ್ನೂರಿನ ಗುರುಕೊಟ್ಟೂರೇಶ್ವರ ನಗರದ ದೊಡ್ಡ ಕೆರೆಯಲ್ಲಿ ನೀರು ಕಡಿಮೆಯಾಗಿರುವುದು
ತಾಲ್ಲೂಕಿನಲ್ಲಿ 80 ಗ್ರಾಮಗಳಿಗೆ ಬಹುಗ್ರಾಮ ನೀರಿನ ಯೋಜನೆಯಿಂದ ನೀರು ಪೂರೈಸಲಾಗುತ್ತಿದೆ. ಟಾಸ್ಕ್‌ ಪೋರ್ಸ್‌ ಸಮಿತಿಯಿಂದ ಪರವಾನಗಿ ಪಡೆದು ಹೊಸ ಬೋರ್‌ವೆಲ್‌ ಕೊರೆಸಲಾಗಿದೆ
– ರಾಮಕೃಷ್ಣ ಸಹಾಯಕ ಎಂಜಿನಿಯರ್‌ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ತುಂಗಭದ್ರಾ ನದಿ ಬರಿದಾಗಿದ್ದರಿಂದ ರಾಣೆಬೆನ್ನೂರಿನ 24x7 ಕುಡಿಯುವ ನೀರಿನ ಯೋಜನೆ ಸ್ಥಗಿತಗೊಂಡಿದೆ. ನಗರದ 35 ವಾರ್ಡ್‌ಗಳಿಗೂ ಬೋರ್‌ವೆಲ್‌ ಮೂಲಕ ನೀರು ಪೂರೈಸಲಾಗುತ್ತಿದೆ
- ಎನ್‌.ಕೆ. ಕುಮ್ಮಣ್ಣನವರ. ಪೌರಾಯುಕ್ತ ರಾಣೆಬೆನ್ನೂರು
ನಾವು ಕೃಷಿ ಚಟುವಟಿಗಳಿಗೆ ನೀರು ಕೇಳುತ್ತಿಲ್ಲ. ಕುಡಿಯಲು ನೀರು ಕೇಳುತ್ತಿದ್ದೇವೆ. ತಕ್ಷಣವೇ ಭದ್ರಾ ಅಣೆಕಟ್ಟಿನಿಂದ ತುಂಗಭದ್ರಾ ನದಿಗೆ 2 ಟಿಂಎಂಸಿ ನೀರು ಹರಿಸಿ ಜನರ ಬಾಯಾರಿಕೆ ನೀಗಿಸಬೇಕು
– ಈರಣ್ಣ ಹಲಗೇರಿ ಮಾಕನೂರು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ಪಾಳುಬಿದ್ದ ಶುದ್ಧ ನೀರಿನ ಘಟಕ
ಗಂಗಾಜಲ ತಾಂಡಾ ಗೋವಿಂದ ಬಡಾವಣೆ ಮತ್ತು ಬಸಲೀಕಟ್ಟಿ ತಾಂಡಾಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳು ಬಿದ್ದು ಎಷ್ಟೇ ವರ್ಷಗಳು ಗತಿಸಿವೆ. ಸದ್ಯ ಜಲಜೀವನ ಯೋಜನೆ ಮತ್ತು ಬೋರ್‌ವೆಲ್‌ ನೀರು ಪೂರೈಕೆಯಾಗುತ್ತಿದೆ. ಶುದ್ದ ಕುಡಿಯುವ ನೀರಿಗೆ ರಾಣೆಬೆನ್ನೂರು ಪಟ್ಟಣಕ್ಕೆ ಬಂದು ಬೈಕ್‌ಗಳನ್ನು ಕೊಡಪಾನ ತುಂಬಿಕೊಂಡು ಹೋಗುತ್ತಿರುವ ದೃಶ್ಯ ದಿನಾಲು ಕಂಡು ಬರುತ್ತಿದೆ ಎನ್ನುತ್ತಾರೆ ಗಂಗಾಜಲ ತಾಂಡಾದ ನಿವಾಸಿ ರಮೇಶ ಡಿ.ಎಲ್‌ ನಾಯಕ.  
ಬರಿದಾದ ದೊಡ್ಡಕೆರೆ
‘ಇಲ್ಲಿನ ಕೊಟ್ಟೂರೇಶ್ವರ ನಗರದ ದೊಡ್ಡ ಕೆರೆಯು 266 ಎಕರೆ ವಿಸ್ತೀರ್ಣ ಹೊಂದಿದ್ದು 150 ವರ್ಷ ಇತಿಹಾಸ ಹೊಂದಿದೆ. ಈ ಕೆರೆಗೆ ನಗರಸಭೆಯಿಂದ ತಾಲ್ಲೂಕಿನ ಕುದರಿಹಾಳ ತುಂಗಭದ್ರಾ ನದಿಯಿಂದ ನೀರು ತುಂಬಿಸಲಾಗುತ್ತಿತ್ತು. ದೊಡ್ಡಕೆರೆಯನ್ನು ಅಭಿವೃದ್ಧಿ ಮಾಡಿ ದೋಣಿ ವಿಹಾರ ಮಾಡುವ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ನೀರು ತುಂಬಿಸುವುದು ಬಂದ್‌ ಆಗಿದೆ. ಇದರಿಂದ ಈ ಭಾಗದ ಜನತೆ ನೀರಿಗಾಗಿ ಪರಿತಪಿಸುವಂತಾಗಿದೆ’ ಎನ್ನುತ್ತಾರೆ ಪಂಚಯ್ಯ ಮುದಗಲ್ಲಮಠ ಹಾಗೂ ಪ್ರಕಾಶ ಬಣಕಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT