<p><strong>ತಡಸ</strong>: ‘ರಾಮ ನಾಮದ ಮಹತ್ವ ಮತ್ತು ಪ್ರಯೋಜನ ಅರಿತು, ಸತ್ಸಂಗದೊಂದಿಗೆ ಸಾತ್ವಿಕ ವಿಚಾರ ಮೈಗೂಡಿಸಿಕೊಂಡರೆ ಹನುಮ ಭಕ್ತಿ, ರಾಮಶಕ್ತಿ ನಮ್ಮದಾಗಲಿ’ ಎಂದು ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹೇಳಿದರು.<br><br> ಸಮೀಪದ ಗಾಯತ್ರಿ ತಪೋಭೂಮಿಯ ರಜತ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.</p>.<p>‘ತಪೋಭೂಮಿಯಲ್ಲಿ ನಿಸ್ವಾರ್ಥ ಸೇವೆ ನೀಡಲಾಗುತ್ತಿದೆ. ಆರೋಗ್ಯ ಉಚಿತ ಶಿಬಿರ, 20 ವರ್ಷಗಳಿಂದ ಅಗತ್ಯ ಔಷಧ ವಿತರಣೆ, 60 ಹಸುಗಳಿರುವ ಗೋಶಾಲೆ, ಬಹುಭಾಷಾ ಗ್ರಂಥಾಲಯ ನಡೆಸುತ್ತಿರುವುದು ಶ್ಲಾಘನೀಯ’ ಎಂದರು.</p>.<p>‘ಉದಾತ್ತ ಸೇವೆಗಳಲ್ಲಿ ಅನ್ನದಾನ ಸರ್ವೋಚ್ಛವಾಗಿದೆ. 25 ವರ್ಷಗಳಿಂದ ಪ್ರತಿದಿನ ಆಶ್ರಮದಲ್ಲಿ 500 ಭಕ್ತರಿಗೆ ಅನ್ನದಾನ ಮಾಡುತ್ತಿರುವುದು ಆದರ್ಶನೀಯವಾಗಿದೆ’ ಎಂದು ಹೇಳಿದರು.</p>.<p>ಸಿಂದಗಿ ಮಠದ ಪೀಠಾಧೀಶ ದತ್ತಪ್ಪಯ್ಯ ಸ್ವಾಮೀಜಿ ಮಾತನಾಡಿ, ‘ಗಾಯತ್ರಿ ತಪೋವನದಲ್ಲಿ ಭೇದ ಭಾವ ಇಲ್ಲದೆ, ಎಲ್ಲರೂ ಒಂದೇ ಎನ್ನುವ ಸಂಸ್ಕೃತಿ ಇದೆ. ಇದನ್ನು ಎಲ್ಲ ಮಠಗಳು ಪಾಲಿಸಬೇಕಿದೆ’ ಎಂದು ತಿಳಿಸಿದರು.</p>.<p>ಆಚಾರ್ಯ ಚೈತನ್ಯ ಕಾಯ್ಕಿಣಿ ಇದ್ದರು. ಗಾನಸೌರಭ ತಂಡದಿಂದ ‘ಮಾಯ ಮಂಥರೆ’ ಯಕ್ಷಗಾನ ಪ್ರಸಂಗ ಪ್ರದರ್ಶಿಸಲಾಯಿತು.</p>.<p>ಇಂದಿನ ಕಾರ್ಯಕ್ರಮ: ಏಪ್ರಿಲ್ 13ರಂದು ಸಂಜೆ 5 ಗಂಟೆಗೆ ವಿಚಾರಗೋಷ್ಠಿ ಆಯೋಜಿಸಲಾಗಿದ್ದು, ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳುವರುರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಡಸ</strong>: ‘ರಾಮ ನಾಮದ ಮಹತ್ವ ಮತ್ತು ಪ್ರಯೋಜನ ಅರಿತು, ಸತ್ಸಂಗದೊಂದಿಗೆ ಸಾತ್ವಿಕ ವಿಚಾರ ಮೈಗೂಡಿಸಿಕೊಂಡರೆ ಹನುಮ ಭಕ್ತಿ, ರಾಮಶಕ್ತಿ ನಮ್ಮದಾಗಲಿ’ ಎಂದು ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹೇಳಿದರು.<br><br> ಸಮೀಪದ ಗಾಯತ್ರಿ ತಪೋಭೂಮಿಯ ರಜತ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.</p>.<p>‘ತಪೋಭೂಮಿಯಲ್ಲಿ ನಿಸ್ವಾರ್ಥ ಸೇವೆ ನೀಡಲಾಗುತ್ತಿದೆ. ಆರೋಗ್ಯ ಉಚಿತ ಶಿಬಿರ, 20 ವರ್ಷಗಳಿಂದ ಅಗತ್ಯ ಔಷಧ ವಿತರಣೆ, 60 ಹಸುಗಳಿರುವ ಗೋಶಾಲೆ, ಬಹುಭಾಷಾ ಗ್ರಂಥಾಲಯ ನಡೆಸುತ್ತಿರುವುದು ಶ್ಲಾಘನೀಯ’ ಎಂದರು.</p>.<p>‘ಉದಾತ್ತ ಸೇವೆಗಳಲ್ಲಿ ಅನ್ನದಾನ ಸರ್ವೋಚ್ಛವಾಗಿದೆ. 25 ವರ್ಷಗಳಿಂದ ಪ್ರತಿದಿನ ಆಶ್ರಮದಲ್ಲಿ 500 ಭಕ್ತರಿಗೆ ಅನ್ನದಾನ ಮಾಡುತ್ತಿರುವುದು ಆದರ್ಶನೀಯವಾಗಿದೆ’ ಎಂದು ಹೇಳಿದರು.</p>.<p>ಸಿಂದಗಿ ಮಠದ ಪೀಠಾಧೀಶ ದತ್ತಪ್ಪಯ್ಯ ಸ್ವಾಮೀಜಿ ಮಾತನಾಡಿ, ‘ಗಾಯತ್ರಿ ತಪೋವನದಲ್ಲಿ ಭೇದ ಭಾವ ಇಲ್ಲದೆ, ಎಲ್ಲರೂ ಒಂದೇ ಎನ್ನುವ ಸಂಸ್ಕೃತಿ ಇದೆ. ಇದನ್ನು ಎಲ್ಲ ಮಠಗಳು ಪಾಲಿಸಬೇಕಿದೆ’ ಎಂದು ತಿಳಿಸಿದರು.</p>.<p>ಆಚಾರ್ಯ ಚೈತನ್ಯ ಕಾಯ್ಕಿಣಿ ಇದ್ದರು. ಗಾನಸೌರಭ ತಂಡದಿಂದ ‘ಮಾಯ ಮಂಥರೆ’ ಯಕ್ಷಗಾನ ಪ್ರಸಂಗ ಪ್ರದರ್ಶಿಸಲಾಯಿತು.</p>.<p>ಇಂದಿನ ಕಾರ್ಯಕ್ರಮ: ಏಪ್ರಿಲ್ 13ರಂದು ಸಂಜೆ 5 ಗಂಟೆಗೆ ವಿಚಾರಗೋಷ್ಠಿ ಆಯೋಜಿಸಲಾಗಿದ್ದು, ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳುವರುರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>