<p>ಹಾವೇರಿ: ಕನ್ನಡದ ನಿಜವಾದ ಸತ್ವವೇನಾದರೂ ಉಳಿದಿದ್ದರೆ ಅದು ಉತ್ತರ ಕರ್ನಾಟಕದ ದೊಡ್ಡಾಟ ಕಲೆಯಿಂದ ಮಾತ್ರ. ನಿರರ್ಗಳ ಶಬ್ದ ಸಂಪತ್ತು, ಕಾವ್ಯ ಲಹರಿ ಹಾಗೂ ಕನ್ನಡ ಸಂಸ್ಕೃತಿಯ ತಿರುಳು ಹಳ್ಳಿಗಾಡಿನ ಕಲೆಯಾದ ದೊಡ್ಡಾಟದಿಂದ ಉಳಿದಿದೆ ಎಂದು ಕಲಾವಿದೆ ಪರಿಮಳಾ ಜೈನ್ ಹೇಳಿದರು.</p>.<p>ಗೆಳೆಯರ ಬಳಗ ಮತ್ತು ಸಾಹಿತಿ ಕಲಾವಿದರ ಬಳಗ ಸಂಯುಕ್ತವಾಗಿ ದೊಡ್ಡಾಟದ ಹಿರಿಯ ಕಲಾವಿದ ದಿ.ಮಹಾದೇವಪ್ಪ ಗುಡ್ಡಪ್ಪ ಓಂಕಾರಣ್ಣನವರ ಸ್ಮರಣಾರ್ಥ ಏರ್ಪಡಿಸಿದ್ದ ‘ಮೈಲಾರಲಿಂಗೇಶ್ವರ ಮಹಾತ್ಮೆಯ ದೊಡ್ಡಾಟ ಪ್ರದರ್ಶನ’ ಮತ್ತು ಹಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಮದ್ದಲಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.</p>.<p>ರಾಮಾಯಣ ಮತ್ತು ಮಹಾಭಾರತದ ಜೀವನ ಸಾರ ಮತ್ತು ಪ್ರಸಂಗಗಳನ್ನು ಅಳವಡಿಸಿಕೊಂಡು ಜನಪದ ಶೈಲಿಯಲ್ಲಿ ಹರಿಯುವ ದೊಡ್ಡಾಟಕ್ಕೆ ಭಾಷಾ ಗಾಂಭೀರ್ಯವಿದೆ. ಇದರಲ್ಲಿ ಅಭಿನಯಿಸುವುದರಿಂದ ಯೋಗ ಮತ್ತು ಏಕಾಗ್ರತೆ ಬೆಳೆಯುತ್ತದೆ. ಶಾಲಾ ಮಟ್ಟದಲ್ಲಿಯೇ ದೊಡ್ಡಾಟ ಕಲಿಕೆ ಆರಂಭವಾಗಬೇಕು ಎಂದು ಹೇಳಿದರು.</p>.<p>ಲೇಖಕ ಕೋರಗಲ್ ವಿರೂಪಾಕ್ಷಪ್ಪ ಮಾತನಾಡಿದರು.ಜ್ಞಾನಗಂಗಾ ಶಿಕ್ಷಣ ಸಮಿತಿಯ ಚೇರ್ಮನ್ ಸಿ.ಎಂ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿ, ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಎಲ್ಲ ಪ್ರದರ್ಶನಾ ಕಲೆಗಳು ಮೂಲೆಗುಂಪಾಗುತ್ತಿರುವ ಈ ಸಂದರ್ಭದಲ್ಲಿ ದೊಡ್ಡಾಟ ಕಲೆ ಎದ್ದು ನಿಲ್ಲುವ ಶಕ್ತಿ ಹೊಂದಿದೆ ಎಂದರು.</p>.<p>ಮೂವರು ದೊಡ್ಡಾಟ ಕಲಾವಿದರಾದ ಕಲಕೇರಿಯ ಫಕ್ಕೀರಪ್ಪ ಗೌರಕ್ಕನವರ, ಚನಬಸಪ್ಪ ಗಡಿಯಂಕನಹಳ್ಳಿ ( ನಾಗನೂರ ) ಹಾಗೂ ಕೋಲೂರಿನ ಮಲ್ಲೇಶಪ್ಪ ಬಜ್ಜಿ ಅವರನ್ನು ಸನ್ಮಾನಿಸಲಾಯಿತು.</p>.<p>ಡಾ.ಬಸವರಾಜ ಹಳ್ಳೂರ. ವ್ಹಿ.ಎಂ. ಪತ್ರಿ, ಜಿ.ಬಿ. ಸುಣಗಾರ, ನಾಗರಾಜ ಪೂಜಾರ, ಲಿಂಗಾಚಾರಿ ಮಣಕೂರ, ರೇಣುಕಾ ಗುಡಿಮನಿ, ಸುಮಂಗಲಾ ಓಂಕಾರಣ್ಣವರ ಇದ್ದರು. ನಾಟಕ ಪ್ರದರ್ಶನವನ್ನು ಸಂಯೋಜಕ ಜಿ.ಎಂ. ಓಂಕಾರಣ್ಣನವರ ಸಂಯೋಜಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾವೇರಿ: ಕನ್ನಡದ ನಿಜವಾದ ಸತ್ವವೇನಾದರೂ ಉಳಿದಿದ್ದರೆ ಅದು ಉತ್ತರ ಕರ್ನಾಟಕದ ದೊಡ್ಡಾಟ ಕಲೆಯಿಂದ ಮಾತ್ರ. ನಿರರ್ಗಳ ಶಬ್ದ ಸಂಪತ್ತು, ಕಾವ್ಯ ಲಹರಿ ಹಾಗೂ ಕನ್ನಡ ಸಂಸ್ಕೃತಿಯ ತಿರುಳು ಹಳ್ಳಿಗಾಡಿನ ಕಲೆಯಾದ ದೊಡ್ಡಾಟದಿಂದ ಉಳಿದಿದೆ ಎಂದು ಕಲಾವಿದೆ ಪರಿಮಳಾ ಜೈನ್ ಹೇಳಿದರು.</p>.<p>ಗೆಳೆಯರ ಬಳಗ ಮತ್ತು ಸಾಹಿತಿ ಕಲಾವಿದರ ಬಳಗ ಸಂಯುಕ್ತವಾಗಿ ದೊಡ್ಡಾಟದ ಹಿರಿಯ ಕಲಾವಿದ ದಿ.ಮಹಾದೇವಪ್ಪ ಗುಡ್ಡಪ್ಪ ಓಂಕಾರಣ್ಣನವರ ಸ್ಮರಣಾರ್ಥ ಏರ್ಪಡಿಸಿದ್ದ ‘ಮೈಲಾರಲಿಂಗೇಶ್ವರ ಮಹಾತ್ಮೆಯ ದೊಡ್ಡಾಟ ಪ್ರದರ್ಶನ’ ಮತ್ತು ಹಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಮದ್ದಲಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.</p>.<p>ರಾಮಾಯಣ ಮತ್ತು ಮಹಾಭಾರತದ ಜೀವನ ಸಾರ ಮತ್ತು ಪ್ರಸಂಗಗಳನ್ನು ಅಳವಡಿಸಿಕೊಂಡು ಜನಪದ ಶೈಲಿಯಲ್ಲಿ ಹರಿಯುವ ದೊಡ್ಡಾಟಕ್ಕೆ ಭಾಷಾ ಗಾಂಭೀರ್ಯವಿದೆ. ಇದರಲ್ಲಿ ಅಭಿನಯಿಸುವುದರಿಂದ ಯೋಗ ಮತ್ತು ಏಕಾಗ್ರತೆ ಬೆಳೆಯುತ್ತದೆ. ಶಾಲಾ ಮಟ್ಟದಲ್ಲಿಯೇ ದೊಡ್ಡಾಟ ಕಲಿಕೆ ಆರಂಭವಾಗಬೇಕು ಎಂದು ಹೇಳಿದರು.</p>.<p>ಲೇಖಕ ಕೋರಗಲ್ ವಿರೂಪಾಕ್ಷಪ್ಪ ಮಾತನಾಡಿದರು.ಜ್ಞಾನಗಂಗಾ ಶಿಕ್ಷಣ ಸಮಿತಿಯ ಚೇರ್ಮನ್ ಸಿ.ಎಂ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿ, ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಎಲ್ಲ ಪ್ರದರ್ಶನಾ ಕಲೆಗಳು ಮೂಲೆಗುಂಪಾಗುತ್ತಿರುವ ಈ ಸಂದರ್ಭದಲ್ಲಿ ದೊಡ್ಡಾಟ ಕಲೆ ಎದ್ದು ನಿಲ್ಲುವ ಶಕ್ತಿ ಹೊಂದಿದೆ ಎಂದರು.</p>.<p>ಮೂವರು ದೊಡ್ಡಾಟ ಕಲಾವಿದರಾದ ಕಲಕೇರಿಯ ಫಕ್ಕೀರಪ್ಪ ಗೌರಕ್ಕನವರ, ಚನಬಸಪ್ಪ ಗಡಿಯಂಕನಹಳ್ಳಿ ( ನಾಗನೂರ ) ಹಾಗೂ ಕೋಲೂರಿನ ಮಲ್ಲೇಶಪ್ಪ ಬಜ್ಜಿ ಅವರನ್ನು ಸನ್ಮಾನಿಸಲಾಯಿತು.</p>.<p>ಡಾ.ಬಸವರಾಜ ಹಳ್ಳೂರ. ವ್ಹಿ.ಎಂ. ಪತ್ರಿ, ಜಿ.ಬಿ. ಸುಣಗಾರ, ನಾಗರಾಜ ಪೂಜಾರ, ಲಿಂಗಾಚಾರಿ ಮಣಕೂರ, ರೇಣುಕಾ ಗುಡಿಮನಿ, ಸುಮಂಗಲಾ ಓಂಕಾರಣ್ಣವರ ಇದ್ದರು. ನಾಟಕ ಪ್ರದರ್ಶನವನ್ನು ಸಂಯೋಜಕ ಜಿ.ಎಂ. ಓಂಕಾರಣ್ಣನವರ ಸಂಯೋಜಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>