ಹಿರೇಕೆರೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ವಿ.ಮಂಜುನಾಥ ಮಾತನಾಡಿ, ಈ ವರ್ಷ 3 ಸಾವಿರದಿಂದ 4,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬರಹುದು ಎಂದು ಅಂದಾಜಿಸಲಾಗಿದೆ. ಭತ್ತ ನಾಟಿ ಮಾಡಿದ 15 ರಿಂದ 20 ದಿನಗಳ ನಂತರದಲ್ಲಿ ಹುಳುಮರಿ ಕಾಂಡಕೊರೆದು ತಿನ್ನುವುದರಿಂದ. ಇದರಿಂದ ಹೆಚ್ಚಿನ ಹಾನಿ ಸಂಭವಿಸುತ್ತದೆ. ಔಷಧೋಪಚಾರ ಹಾಗೂ ಸರಿಯಾದ ಗೊಬ್ಬರ ನೀಡಿದರೆ ಉತ್ತಮ ಇಳುವರಿ ಪಡೆಯಬಹುದು ಎಂದರು.