‘ಮಾರುತಿ ನಗರದಲ್ಲಿನ ಅಲೆಮಾರಿ ಜನರು ವಾಸ ಮಾಡುವ ತಗಡಿನ ಶೆಡ್ನಲ್ಲಿ ನೀರು ನುಗ್ಗಿ ಮನೆಯಲ್ಲಿನ ಸಾಮಗ್ರಿಗಳು ನೀರು ಪಾಲಾಗಿವೆ. ಆಹಾರ ಧಾನ್ಯಗಳು ಹಾಳಾಗಿವೆ. ಹಾಸಿಗೆ, ಬಟ್ಟೆಗಳು ನೀರಲ್ಲಿ ಮುಳುಗಿವೆ. ಮನೆಯಲ್ಲಿನ ಮಕ್ಕಳು, ಮಹಿಳೆಯರು ಹೇಗೆ ವಾಸಿಸುವುದು’ ಎಂದು ಅಲ್ಲಿನ ನಿವಾಸಿ ಸುರೇಶ ಆತಂಕ ವ್ಯಕ್ತಪಡಿಸಿದರು.