ಇಲ್ಲಿನ ಬಸವೇಶ್ವರನಗರದ ಸಿ ಬ್ಲಾಕ್ಗೆ ಹೊಂದಿಕೊಂಡಿರುವ ಹೊರವಲಯದ ಸಮೀಪ ಗುರುವಾರ ಸಂಜೆ 4.30ರ ಸಮಯದಲ್ಲಿ ಹೊಸಪೇಟೆ ಮೂಲದ ಅನ್ನಪೂರ್ಣ ಎಂಬುವವರು ರೈಲಿನಿಂದ ಕೆಳಕ್ಕೆ ಬಿದ್ದರು. ಆಗ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು.ಈ ಸಂದರ್ಭದಲ್ಲಿ ರೈಲ್ವೆಹಳಿಯ ಪಕ್ಕದಲ್ಲಿರುವ ತಮ್ಮ ಹೊಲದಲ್ಲಿ ಬೆಳೆಗಳಿಗೆ ನೀರು ಹಾಯಿಸುತ್ತಿದ್ದ ಶಿವಯೋಗಿ ಬೆನ್ನೂರು ವಿಷಯ ಗೊತ್ತಾಗಿ ಸ್ಥಳಕ್ಕೆ ಬಂದಿದ್ದಾರೆ.