<p><strong>ಪ್ರದೀಪ ಕುಲಕರ್ಣಿ</strong></p>.<p><strong>ರಟ್ಟೀಹಳ್ಳಿ</strong>: ಪಟ್ಟಣದ ಕುರಬಗೇರಿ ಓಣಿಯಲ್ಲಿರುವ ತುಳಜಾ ಪರಮೇಶ್ವರಿ ದೇವಸ್ಥಾನ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಭಕ್ತರ ಇಷ್ಟಾರ್ಥ ಕರುಣಿಸುವ ದೇವಸ್ಥಾನ ಅಂತಲೇ ಹೆಸರುವಾಸಿಯಾಗಿದೆ.</p>.<p>ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿರಾವ್ ಬೋಸ್ಲೆ ಈ ದೇವಸ್ಥಾನ ನಿರ್ಮಿಸಿದ್ದಾರೆ. ಇವರ ಆಡಳಿತದ ಬಳಿಕ ಪಾಳುಬಿದ್ದಿದ್ದ ದೇವಸ್ಥಾನವನ್ನು 21 ವರ್ಷಗಳ ಹಿಂದೆ ಸ್ಥಳೀಯ ಮರಾಠ ಸಮಾಜದವರು ಜೀರ್ಣೋದ್ಧಾರಗೊಳಿಸಿ ಕಮಿಟಿ ರಚಿಸಿದರು. ಅಂದಿನಿಂದ ತುಳಜಾ ಪರಮೇಶ್ವರಿ ದೇವಸ್ಥಾನದಲ್ಲಿ ನಿತ್ಯಪೂಜೆ ನಡೆಯುತ್ತಿದೆ.</p>.<p>ಶರನ್ನವರಾತ್ರಿ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ. ಪ್ರತಿದಿನ ಬೆಳಿಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಅಲಂಕಾರ ಸರ್ವಸೇವಾ, ದುರ್ಗಾ ಸಪ್ತಶತೀ ಪಾರಾಯಣ, ನೈವೇದ್ಯ, ದೇವಿಪುರಾಣ ಪ್ರವಚನ, ಮಂತ್ರಪುಷ್ಪ, ಮಹಾಮಂಗಳಾರತಿ ಸೇವೆಗಳು ಜರುಗುತ್ತಿವೆ.</p>.<p>ದೇವಸ್ಥಾನದಲ್ಲಿ ಅ.22ರಂದು ದುರ್ಗಾಷ್ಟಮಿ, ಶಸ್ತ್ರ ಪೂಜನ, 23ರಂದು ಮಹಾನವಮಿ ಕೂಷ್ಮಾಂಡಬಲಿ, ಬನ್ನಿ ಮುಡಿಯುವುದು, ಅ.28ರಂದು ಸೀಗೆ ಹುಣ್ಣಿಮೆ ಅಂಗವಾಗಿ ಸಾಮೂಹಿಕ ಸತ್ಯ ನಾರಾಯಣ ಪೂಜೆ ನಡೆಯಲಿದೆ ಎಂದು ದೇವಸ್ಥಾನ ಅರ್ಚಕ ಗಿರೀಶ ನಾಡಗೇರ ತಿಳಿಸಿದರು.</p>.<p>ದೇವಸ್ಥಾನದ ಟ್ರಸ್ಟ್ನಿಂದ ಪ್ರತಿ ವರ್ಷ ನವೆಂಬರ್ನಲ್ಲಿ ದೇವಿಯ ಪುನರ್ ಪ್ರತಿಷ್ಠಾಪನೆ ಅಂಗವಾಗಿ ಸುಮಾರು 15 ವರ್ಷಗಳಿಂದ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನವಚಂಡಿಯಾಗ, ಸತ್ಯನಾರಾಯಣ ಪೂಜೆ, ಉಡಿತುಂಬುವ ಕಾರ್ಯಕ್ರಮ, ಅನ್ನಸಂತರ್ಪಣೆ ಜರಗುತ್ತದೆ ಎನ್ನುತ್ತಾರೆ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ಭೈರಪ್ಪನವರ.</p>.<div><blockquote>ತುಳಜಾ ಪರಮೇಶ್ವರಿ ದೇವಿ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಲ್ಲಿ ಭಕ್ತರನ್ನು ಆಗಮಿಸುತ್ತಾರೆ. ಇಷ್ಟಾರ್ಥಗಳ ಸಿದ್ಧಿಗಾಗಿ ವಿಶೇಷ ಹರಕೆ ಪೂಜೆ ಸಲ್ಲಿಸುತ್ತಾರೆ </blockquote><span class="attribution">ಪರಶುರಾಮ ಸುರ್ವೆ ದೇವಸ್ಥಾನ ಟ್ರಸ್ಟ್ ಕಮಿಟಿ ಕಾರ್ಯದರ್ಶಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪ್ರದೀಪ ಕುಲಕರ್ಣಿ</strong></p>.<p><strong>ರಟ್ಟೀಹಳ್ಳಿ</strong>: ಪಟ್ಟಣದ ಕುರಬಗೇರಿ ಓಣಿಯಲ್ಲಿರುವ ತುಳಜಾ ಪರಮೇಶ್ವರಿ ದೇವಸ್ಥಾನ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಭಕ್ತರ ಇಷ್ಟಾರ್ಥ ಕರುಣಿಸುವ ದೇವಸ್ಥಾನ ಅಂತಲೇ ಹೆಸರುವಾಸಿಯಾಗಿದೆ.</p>.<p>ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿರಾವ್ ಬೋಸ್ಲೆ ಈ ದೇವಸ್ಥಾನ ನಿರ್ಮಿಸಿದ್ದಾರೆ. ಇವರ ಆಡಳಿತದ ಬಳಿಕ ಪಾಳುಬಿದ್ದಿದ್ದ ದೇವಸ್ಥಾನವನ್ನು 21 ವರ್ಷಗಳ ಹಿಂದೆ ಸ್ಥಳೀಯ ಮರಾಠ ಸಮಾಜದವರು ಜೀರ್ಣೋದ್ಧಾರಗೊಳಿಸಿ ಕಮಿಟಿ ರಚಿಸಿದರು. ಅಂದಿನಿಂದ ತುಳಜಾ ಪರಮೇಶ್ವರಿ ದೇವಸ್ಥಾನದಲ್ಲಿ ನಿತ್ಯಪೂಜೆ ನಡೆಯುತ್ತಿದೆ.</p>.<p>ಶರನ್ನವರಾತ್ರಿ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ. ಪ್ರತಿದಿನ ಬೆಳಿಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಅಲಂಕಾರ ಸರ್ವಸೇವಾ, ದುರ್ಗಾ ಸಪ್ತಶತೀ ಪಾರಾಯಣ, ನೈವೇದ್ಯ, ದೇವಿಪುರಾಣ ಪ್ರವಚನ, ಮಂತ್ರಪುಷ್ಪ, ಮಹಾಮಂಗಳಾರತಿ ಸೇವೆಗಳು ಜರುಗುತ್ತಿವೆ.</p>.<p>ದೇವಸ್ಥಾನದಲ್ಲಿ ಅ.22ರಂದು ದುರ್ಗಾಷ್ಟಮಿ, ಶಸ್ತ್ರ ಪೂಜನ, 23ರಂದು ಮಹಾನವಮಿ ಕೂಷ್ಮಾಂಡಬಲಿ, ಬನ್ನಿ ಮುಡಿಯುವುದು, ಅ.28ರಂದು ಸೀಗೆ ಹುಣ್ಣಿಮೆ ಅಂಗವಾಗಿ ಸಾಮೂಹಿಕ ಸತ್ಯ ನಾರಾಯಣ ಪೂಜೆ ನಡೆಯಲಿದೆ ಎಂದು ದೇವಸ್ಥಾನ ಅರ್ಚಕ ಗಿರೀಶ ನಾಡಗೇರ ತಿಳಿಸಿದರು.</p>.<p>ದೇವಸ್ಥಾನದ ಟ್ರಸ್ಟ್ನಿಂದ ಪ್ರತಿ ವರ್ಷ ನವೆಂಬರ್ನಲ್ಲಿ ದೇವಿಯ ಪುನರ್ ಪ್ರತಿಷ್ಠಾಪನೆ ಅಂಗವಾಗಿ ಸುಮಾರು 15 ವರ್ಷಗಳಿಂದ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನವಚಂಡಿಯಾಗ, ಸತ್ಯನಾರಾಯಣ ಪೂಜೆ, ಉಡಿತುಂಬುವ ಕಾರ್ಯಕ್ರಮ, ಅನ್ನಸಂತರ್ಪಣೆ ಜರಗುತ್ತದೆ ಎನ್ನುತ್ತಾರೆ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ಭೈರಪ್ಪನವರ.</p>.<div><blockquote>ತುಳಜಾ ಪರಮೇಶ್ವರಿ ದೇವಿ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಲ್ಲಿ ಭಕ್ತರನ್ನು ಆಗಮಿಸುತ್ತಾರೆ. ಇಷ್ಟಾರ್ಥಗಳ ಸಿದ್ಧಿಗಾಗಿ ವಿಶೇಷ ಹರಕೆ ಪೂಜೆ ಸಲ್ಲಿಸುತ್ತಾರೆ </blockquote><span class="attribution">ಪರಶುರಾಮ ಸುರ್ವೆ ದೇವಸ್ಥಾನ ಟ್ರಸ್ಟ್ ಕಮಿಟಿ ಕಾರ್ಯದರ್ಶಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>