ರಾಣೆಬೆನ್ನೂರು: ತಾಲ್ಲೂಕಿನ ಕೋಣನತಂಬಿಗಿ - ನಿಟ್ಟೂರು ಕ್ರಾಸ್ ತುಂಗಭದ್ರಾ ನದಿ ನೀರಿನಲ್ಲಿ ಮರಳು ತುಂಬಲು ಹೋಗಿ ಆರೆಮಲ್ಲಾಪುರ ಗ್ರಾಮದ ಇಬ್ಬರು ಯುವಕರು ಎರಡು ಎತ್ತುಗಳೊಂದಿಗೆ ಸೋಮವಾರ ನೀರು ಪಾಲಾಗಿದ್ದಾರೆ.
ಬೆಟ್ಟಪ್ಪ ಮೋಹನ್ ಮುಳ್ಳಿನ(25), ಮತ್ತು ಜಗದೀಶ ವೆಂಕಪ್ಪ ಐರನಿ ಮಂಜುನಾಥ (23) ನೀರುಪಾಲಾದವರು. ಶೋಧ ಕಾರ್ಯ ಮುಂದುವರಿದಿದೆ.