ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಅಲ್ಲಿ ವಿಡಿಯೊ ರೆಕಾರ್ಡ್ ಮಾಡಿಲ್ಲ ಅಂದರೆ ವಿದ್ಯಾರ್ಥಿನಿಯರನ್ನು ಕಾಲೇಜಿನ ಆಡಳಿತ ಮಂಡಳಿ ಏಕೆ ಸಸ್ಪೆಂಡ್ ಮಾಡಿದೆ? ತಪ್ಪೊಪ್ಪಿಗೆ ಪತ್ರವನ್ನು ಏಕೆ ಬರೆಯಿಸಿಕೊಂಡರು? ಇದು ಕಾಲೇಜಿನಲ್ಲಿ ಮುಗಿದು ಹೋದ ಪ್ರಕರಣ ಅಲ್ಲ, ಮುಚ್ಚಿಹೋದ ಪ್ರಕರಣ’ ಎಂದು ಆರೋಪಿಸಿದರು.