ಹಾವೇರಿ: ‘ಹಣ, ಬೆಳ್ಳಿ, ಬಂಗಾರ ವಸ್ತುಗಳನ್ನು ಕದಿಯಬಹುದು. ಕದಿಯಲಾರದ ಸಂಪತ್ತು ವಿದ್ಯೆ ಮಾತ್ರ’ ಎಂದು ಹಾವೇರಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಗೌರಿಮಠದ ಮಲ್ಲಿಕಾರ್ಜುನ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಶುಕ್ರವಾರ ಜರುಗಿದ ಸರಸ್ವತಿ ಪೂಜೆ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ವಿದ್ಯೆ ಶ್ರೇಷ್ಠ ಸಂಪತ್ತು. ಮಕ್ಕಳಿಗೆ ವಿದ್ಯೆಯ ಮಹತ್ವ ತಿಳಿಸಬೇಕು’ ಎಂದರು.
ನಿವೃತ್ತ ಪ್ರಾಚಾರ್ಯ ಪಿ.ಸಿ. ಹಿರೇಮಠ ಅವರು ಮಾತನಾಡಿ, ‘ವಿದ್ಯಾರ್ಥಿಗಳು ತಾಯಿ ಗರ್ಭದಲ್ಲಿ ಹುಟ್ಟಿರುವುದು ಮಾತ್ರವಲ್ಲ, ಶಿಕ್ಷಕರ ಹೃದಯದಿಂದ ಹುಟ್ಟಿದ ಮಕ್ಕಳು’ ಎಂದು ಶಿಕ್ಷಕರ ಹಾಗೂ ಮಕ್ಕಳ ಬಾಂಧವ್ಯದ ಬಗ್ಗೆ ವಿವರಿಸಿದರು.
ಮುಖಂಡ ಎಂ.ಎಸ್. ಕೊರಿಶೆಟ್ಟರ್ ಮಾತನಾಡಿ, ‘ಧೈರ್ಯದಿಂದ ಪರೀಕ್ಷೆ ಬರೆದು ಉತ್ತಮ ಅಂಕ ಪಡೆದು ಶಾಲೆಯ ಮತ್ತು ಪಾಲಕರಿಗೆ ಕೀರ್ತಿ ತರಬೇಕು’ ಎಂದರು.