ಹಾನಗಲ್: ಸುಳ್ಳು ಹೇಳುವುದು, ಮೋಸ ಮಾಡುವುದು, ಕುತಂತ್ರ ಎಂಬ ಮೂರು ಅಸ್ತ್ರಗಳನ್ನು ಹಾನಗಲ್ ಉಪ ಚುನಾವಣೆಯಲ್ಲಿ ವಿರೋಧಿಗಳು ಹೂಡಿದ್ದಾರೆ. ಏನೇ ಆದರೂ ಕೂಡ ಮತದಾರರು ಬುದ್ಧಿವಂತರಿದ್ದಾರೆ. ಯಾವುದು ಸತ್ಯ, ಯಾವುದು ಸುಳ್ಳು ಎನ್ನುವ ತಿಳಿವಳಿಕೆ ಹೊಂದಿದ್ದು, ಕಷ್ಟದಲ್ಲಿ ಜೊತೆಗೆ ನಿಂತ ಆಪತ್ಭಾಂಧವ, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರ ಕೈ ಹಿಡಿಯಲಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದರು.