‘ನಮಗಿಂತ ಹೆಚ್ಚಾಗಿ ರಾಘವೇಂದ್ರಅವರನ್ನು ಸೋಲಿಸಲು ಬಿಜೆಪಿ ಮುಖಂಡರೇ ತಯಾರಾಗಿದ್ದಾರೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗನೀರಾವರಿ ಸಚಿವರಾಗಿದ್ದ ಈಶ್ವರಪ್ಪ ಶಿವಮೊಗ್ಗ ಜಿಲ್ಲೆಗೆ ಹಲವು ಯೋಜನೆ ಜಾರಿಗೊಳಿಸಲು ಮುಂದಾಗಿದ್ದರು.ಆದರೆ, ಈಶ್ವರಪ್ಪಗೆ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ ತಡೆಯೊಡ್ಡಿದ್ದರು. ನಂತರಅವರನ್ನುಮೂಲೆಗುಂಪು ಮಾಡಲುಯಡಿಯೂರಪ್ಪ ತಂತ್ರ ರೂಪಿಸುತ್ತಲೇ ಬಂದರು.ಈ ಸೂಕ್ಷ್ಮತೆ ಅರಿತ ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಕಟ್ಟಿದ್ದರು. ಕೊನೆಗೆ ಕಷ್ಟುಪಟ್ಟು ಟಿಕೆಟ್ ಗಿಟ್ಟಿಸಿಕೊಳ್ಳುವ ಪರಿಸ್ಥಿತಿ ಈಶ್ವರಪ್ಪಗೆ ಬಂದಿತ್ತು. ಈ ಸೇಡು ತೀರಿಸಿಕೊಳ್ಳಲು ಈಗ ಈಶ್ವರಪ್ಪ ತಂತ್ರ ರೂಪಿಸಿದ್ದಾರೆ’ ಎಂದು ಮಾಹಿತಿ ನೀಡಿದರು.