ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಮಣಿಸಲು ಈಶ್ವರಪ್ಪ ತಂತ್ರ: ರೇವಣ್ಣ

Last Updated 21 ಏಪ್ರಿಲ್ 2019, 13:20 IST
ಅಕ್ಷರ ಗಾತ್ರ

ಶಿವಮೊಗ್ಗ: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಬಾರದು. ಅವರ ಮಗ ಸಂಸದ ಆಗಬಾರದು ಎನ್ನುವುದೇ ಕೆ.ಎಸ್‌.ಈಶ್ವರಪ್ಪ ಉದ್ದೇಶ ಎಂದು ಜೆಡಿಎಸ್ ಮುಖಂಡ ಎಚ್‌.ಡಿ.ರೇವಣ್ಣ ಹೇಳಿದರು.

‘ನಮಗಿಂತ ಹೆಚ್ಚಾಗಿ ರಾಘವೇಂದ್ರಅವರನ್ನು ಸೋಲಿಸಲು ಬಿಜೆಪಿ ಮುಖಂಡರೇ ತಯಾರಾಗಿದ್ದಾರೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗನೀರಾವರಿ ಸಚಿವರಾಗಿದ್ದ ಈಶ್ವರಪ್ಪ ಶಿವಮೊಗ್ಗ ಜಿಲ್ಲೆಗೆ ಹಲವು ಯೋಜನೆ ಜಾರಿಗೊಳಿಸಲು ಮುಂದಾಗಿದ್ದರು.ಆದರೆ, ಈಶ್ವರಪ್ಪಗೆ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ ತಡೆಯೊಡ್ಡಿದ್ದರು. ನಂತರಅವರನ್ನುಮೂಲೆಗುಂಪು ಮಾಡಲುಯಡಿಯೂರಪ್ಪ ತಂತ್ರ ರೂಪಿಸುತ್ತಲೇ ಬಂದರು.ಈ ಸೂಕ್ಷ್ಮತೆ ಅರಿತ ಈಶ್ವರಪ್ಪ ರಾಯಣ್ಣ ಬ್ರಿಗೇಡ್‌ ಕಟ್ಟಿದ್ದರು. ಕೊನೆಗೆ ಕಷ್ಟುಪಟ್ಟು ಟಿಕೆಟ್‌ ಗಿಟ್ಟಿಸಿಕೊಳ್ಳುವ ಪರಿಸ್ಥಿತಿ ಈಶ್ವರಪ್ಪಗೆ ಬಂದಿತ್ತು. ಈ ಸೇಡು ತೀರಿಸಿಕೊಳ್ಳಲು ಈಗ ಈಶ್ವರಪ್ಪ ತಂತ್ರ ರೂಪಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ನನ್ನ ಮತ್ತು ಈಶ್ವರಪ್ಪ ನಡುವಿನ ಸಂಬಂಧ ಚೆನ್ನಾಗಿದೆ.ಹಲವು ಬಾರಿ ತಮ್ಮ ಬಳಿ ಅವರು ಯಡಿಯೂರಪ್ಪ ನೀಡಿದ ನೋವು ಹೇಳಿಕೊಂಡಿದ್ದಾರೆ. ಸಮಯ ಬಂದಾಗ ಇದೆಲ್ಲವನ್ನೂ ಅವರೇ ಬಾಯಿಬಿಡುತ್ತಾರೆ. ಕುರುಬ ಸಮಾಜಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಟಿಕೆಟ್‌ನೀಡಿಲ್ಲ ಎಂಬ ಸಿಟ್ಟೂಈಶ್ವರಪ್ಪ ಅವರಿಗಿದೆ. ಹಾಗಾಗಿ, ಈ ಚುನಾವಣೆಯಲ್ಲಿರಾಘವೇಮದ್ರ ಅವರನ್ನು ಸೋಲಿಸಿ ಸೇಡು ತೀರಿಸಿಕೊಳ್ಳಲು ಬಯಸಿದ್ದಾರೆ ಎಂದು ವಿವರ ನೀಡಿದರು.

ಕಾಮಗಾರಿಗಿಂತ ಮುಂಚೆಯೇ ಹಣ ಬಿಡುಗಡೆ ಮಾಡಿದ ಆರೋಪ ನಿಮ್ಮ ಮೇಲಿದೆಯಲ್ಲಾಎಂಬ ಪ್ರಶ್ನೆಗೆಪ್ರತಿಕ್ರಿಯಿಸಿದಅವರು, ದಾಖಲೆ ನೀಡಿದರೆ,ನೀವು ಹೇಳಿದಂತೆ ಕೇಳುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT