ಭದ್ರಾವತಿ: ದ್ವಿಚಕ್ರ ವಾಹನದಲ್ಲಿ ನಗರದಲ್ಲಿ ಕಾಣಿಸಿಕೊಂಡ ಇಬ್ಬರು ಫಿನ್ಲ್ಯಾಂಡ್ ದೇಶದ ನಾಗರಿಕರನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿ ಕಳುಹಿಸಿಕೊಟ್ಟ ಘಟನೆ ಮಂಗಳವಾರ ನಡೆಯಿತು.
ಮುಖ್ಯ ಬಸ್ ನಿಲ್ದಾಣ ಸಮೀಪದಲ್ಲಿ ಹೋಗುತ್ತಿದ್ದ ಇವರನ್ನು ಗುರುತಿಸಿದ ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಅವರನ್ನು ವಿಚಾರಣೆ ನಡೆಸಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ತಪಾಸಣೆ ನಡೆಸಿದ ಬಳಿಕ ಅವರನ್ನು ಕಳುಹಿಸಲಾಯಿತು ಎಂದು ಮೂಲಗಳು ದೃಢಪಡಿಸಿವೆ.
ಫಿನ್ ಲ್ಯಾಂಡ್ ದೇಶದ ಟೀಮೂ ಟೆನ್ಲಿ ಹಾಗೂ ಕೆರೆರಾ ರಾಣದಾಸ ಅವರು ಫೆ. 26ರಂದು ಕೊಚ್ಚಿ ವಿಮಾನನಿಲ್ದಾಣದ ಮೂಲಕ ಭಾರತಕ್ಕೆ ಬಂದಿದ್ದು ಅವರ ಪಾಸ್ಪೋರ್ಟ್ ದಾಖಲೆಗಳು ಸೂಚಿಸುತ್ತಿದ್ದು, ಅಲ್ಲಿಂದ ಅವರು ದ್ವಿಚಕ್ರ ವಾಹನದಲ್ಲಿ ನಿರಂತರ ಪ್ರವಾಸ ನಡೆಸಿರುವುದು ತಿಳಿದು ಬಂದಿದೆ.
ಸೂಕ್ತ ವಿಚಾರಣೆ ಹಾಗೂ ಮಾಹಿತಿ ಕಲೆ ಹಾಕಿದ ನಂತರ ಅವರನ್ನು ತರೀಕೆರೆ ಮಾರ್ಗವಾಗಿ ಮುಂದಿನ ಸ್ಥಳಕ್ಕೆ ಹೋಗಲು ಅವಕಾಶ ಮಾಡಿಕೊಡಲಾಗಿದೆ.