ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಗ್ರಹ ಮಾರಾಟ: ಇಬ್ಬರ ಬಂಧನ

Last Updated 1 ಡಿಸೆಂಬರ್ 2022, 18:57 IST
ಅಕ್ಷರ ಗಾತ್ರ

ಬೆಂಗಳೂರು: ‘ಅದೃಷ್ಟ’ದ ಹೆಸರಿನಲ್ಲಿ ಕೆಲವು ವಿಗ್ರಹ ಹಾಗೂ ನಾಣ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವೈಯಾಲಿಕಾವಲ್‌ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆ, ಮೊಳಕಾಲ್ಮುರು ತಾಲ್ಲೂಕಿನ ಭಾಗ್ಯಜ್ಯೋತಿ ನಗರದ ಮಹಮ್ಮದ್‌ ಮುಸ್ತಾಫ್‌ (38) ಹಾಗೂ ಮೊಳಕಾಲ್ಮುರು ಹಳೇ ಸಂತೆ ಮೈದಾನ ಎಸ್‌ಬಿಎಂ ಬಳಿಯ ನಿವಾಸಿ ಮೊಹಮ್ಮದ್ ಮುಬೀನ್‌ (44) ಬಂಧಿತರು.

‘ಇಬ್ಬರೂ ಆರೋಪಿಗಳು ಈ ವಿಗ್ರಹಗಳನ್ನು ಮನೆಗಳಲ್ಲಿ ಇಟ್ಟುಕೊಂಡರೆ ಅದೃಷ್ಟವೆಂದು ಹೇಳಿ ಮಾರಾಟ ಮಾಡಿ ಮೋಸ ಮಾಡುತ್ತಿದ್ದರು. ಬಿಂದಿಗೆ, ಬೈನಾಕ್ಯುಲರ್ ಹಾಗೂ ನಾಣ್ಯಗಳ ಜೊತೆಗೆ ಈ ವಿಗ್ರಹ ಸಹ ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT