<p><strong>ಚಿಂಚೋಳಿ</strong>: ತಾಲ್ಲೂಕಿನಲ್ಲಿ ಒಂದೇ ಮಳೆಗೆ 10 ಕೆರೆಗಳು ಭರ್ತಿಯಾಗಿದ್ದು ಹಿಂಗಾರಿನ ಬೇಸಾಯಕ್ಕೆ ಸಹಕಾರಿಯಾಗಿದೆ.</p>.<p>ತಾಲ್ಲೂಕಿನಲ್ಲಿ ಮಳೆಗಾಲ ಪ್ರಾರಂಭವಾಗಿ 3 ತಿಂಗಳು ಗತಿಸಿದರೂ ಕೇವಲ 4 ಕೆರೆಗಳು ಮಾತ್ರ ಭರ್ತಿಯಾಗಿದ್ದವು ಆದರೆ ಶನಿವಾರ ಸುರಿದ ಮಳೆಯಿಂದ ಹೊಸದಾಗಿ 10 ಕೆರೆಗಳು ತುಂಬಿ ಹರಿಯುತ್ತಿವೆ.<br> </p><p>ಒಂದೇ ಮಳೆಗೆ ತಾಲ್ಲೂಕಿನ, ಕೋಡ್ಲಿ ಅಲ್ಲಾಪುರ, ಚಿಕ್ಕಲಿಂಗದಳ್ಳಿ, ಖಾನಾಪುರ, ಪಂಗರಗಾ, ದೋಟಿಕೊಳ, ಮುಕರಂಬಾ, ಅಂತಾವರಂ, ಲಿಂಗಾನಗರ, ಧರ್ಮಾಸಾಗರ, ಚಿಂದಾನೂರು, ಯಲಕಪಳ್ಳಿ ಕೆರೆಗಳು ಭರ್ತಿಯಾಗಿವೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಾಜಿ ಜಾಧವ ತಿಳಿಸಿದ್ದಾರೆ.</p>.<p>ಹುಲಸಗೂಡ, ಐನಾಪುರ ಹಳೆ ಮತ್ತು ಹೊಸ, ಚಂದನಕೇರಾ ಕೆರೆ ಭರ್ತಿಯಾಗಿದ್ದವು. ಹಸರಗುಂಡಗಿ, ಸಾಲೇಬೀನಹಳ್ಳಿ. ಕೊಳ್ಳೂರು, ತುಮಕುಂಟ, ಹೂಡದಳ್ಳಿ, ಕೆರೆಗಳು ಭರ್ತಿಯ ಅಂಚಿನಲ್ಲಿವೆ.</p>.<p>ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಕೆರೆಗಳಿಂದ ಅಂದಾಜು 6 ಸಾವಿರಕ್ಕೂ ಹೆಚ್ಚು ಹೆಕ್ಟೇರ್ನಲ್ಲಿ ನೀರಾವರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನೆರವಾಗುತ್ತಿವೆ. ಹೀಗಾಗಿ ಕೆರೆಗಳು ಭರ್ತಿಯಾಗಿರುವುದು ಕೃಷಿಕರಲ್ಲಿ ಸಂತಸ ಉಂಟು ಮಾಡಿದೆ ಆದರೆ ಕೆಲವು ಕೆರೆಗಳ ಕಾಲುವೆ ದುರಸ್ತಿಯಂತಹ ನಿರ್ವಹಣೆಯ ಸಮಸ್ಯೆಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ</strong>: ತಾಲ್ಲೂಕಿನಲ್ಲಿ ಒಂದೇ ಮಳೆಗೆ 10 ಕೆರೆಗಳು ಭರ್ತಿಯಾಗಿದ್ದು ಹಿಂಗಾರಿನ ಬೇಸಾಯಕ್ಕೆ ಸಹಕಾರಿಯಾಗಿದೆ.</p>.<p>ತಾಲ್ಲೂಕಿನಲ್ಲಿ ಮಳೆಗಾಲ ಪ್ರಾರಂಭವಾಗಿ 3 ತಿಂಗಳು ಗತಿಸಿದರೂ ಕೇವಲ 4 ಕೆರೆಗಳು ಮಾತ್ರ ಭರ್ತಿಯಾಗಿದ್ದವು ಆದರೆ ಶನಿವಾರ ಸುರಿದ ಮಳೆಯಿಂದ ಹೊಸದಾಗಿ 10 ಕೆರೆಗಳು ತುಂಬಿ ಹರಿಯುತ್ತಿವೆ.<br> </p><p>ಒಂದೇ ಮಳೆಗೆ ತಾಲ್ಲೂಕಿನ, ಕೋಡ್ಲಿ ಅಲ್ಲಾಪುರ, ಚಿಕ್ಕಲಿಂಗದಳ್ಳಿ, ಖಾನಾಪುರ, ಪಂಗರಗಾ, ದೋಟಿಕೊಳ, ಮುಕರಂಬಾ, ಅಂತಾವರಂ, ಲಿಂಗಾನಗರ, ಧರ್ಮಾಸಾಗರ, ಚಿಂದಾನೂರು, ಯಲಕಪಳ್ಳಿ ಕೆರೆಗಳು ಭರ್ತಿಯಾಗಿವೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಾಜಿ ಜಾಧವ ತಿಳಿಸಿದ್ದಾರೆ.</p>.<p>ಹುಲಸಗೂಡ, ಐನಾಪುರ ಹಳೆ ಮತ್ತು ಹೊಸ, ಚಂದನಕೇರಾ ಕೆರೆ ಭರ್ತಿಯಾಗಿದ್ದವು. ಹಸರಗುಂಡಗಿ, ಸಾಲೇಬೀನಹಳ್ಳಿ. ಕೊಳ್ಳೂರು, ತುಮಕುಂಟ, ಹೂಡದಳ್ಳಿ, ಕೆರೆಗಳು ಭರ್ತಿಯ ಅಂಚಿನಲ್ಲಿವೆ.</p>.<p>ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಕೆರೆಗಳಿಂದ ಅಂದಾಜು 6 ಸಾವಿರಕ್ಕೂ ಹೆಚ್ಚು ಹೆಕ್ಟೇರ್ನಲ್ಲಿ ನೀರಾವರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನೆರವಾಗುತ್ತಿವೆ. ಹೀಗಾಗಿ ಕೆರೆಗಳು ಭರ್ತಿಯಾಗಿರುವುದು ಕೃಷಿಕರಲ್ಲಿ ಸಂತಸ ಉಂಟು ಮಾಡಿದೆ ಆದರೆ ಕೆಲವು ಕೆರೆಗಳ ಕಾಲುವೆ ದುರಸ್ತಿಯಂತಹ ನಿರ್ವಹಣೆಯ ಸಮಸ್ಯೆಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>