<p>ಚಿಂಚೋಳಿ: ತಾಲ್ಲೂಕಿನ ಕುಂಚಾವರಂ ಸುತ್ತಲೂ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಮಳೆಗೆ ಪೋಚಾವರಂ ಗ್ರಾಮದ ಅರ್ಜುನ ಶಿರವಾಟಿ ಎಂಬ ರೈತರ ಎರಡು ಎಕರೆ ಮೆಕ್ಕೆಜೋಳ ನೆಲಸಮವಾಗಿದೆ.</p>.<p>ಜೋಳ ತೆನೆಬಿಟ್ಟು ಕಾಳುಗಳು ಹಾಲು ತುಂಬಿಕೊಳ್ಳುತ್ತಿದ್ದವು. ಇದರಿಂದ ರೈತರಿಗೆ ₹2 ಲಕ್ಷ ನಷ್ಟ ಉಂಟಾಗಿದೆ.</p>.<p>ಸಿಡಿಲಿಗೆ ಹಸು ಬಲಿ: ತಾಲ್ಲೂಕಿನ ಗಡಿಲಿಂಗದಳ್ಳಿಯಲ್ಲಿ ಸಿಡಿಲು ಬಡಿದು ನೈನಮ್ಮ ಮುದ್ನಾಳ ಎಂಬುವವರ ಹಸು ಸಾವನ್ನಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.</p>.<p>ತಾಲ್ಲೂಕಿನಲ್ಲಿ ಶುಕ್ರವಾರ ಸುರಿದ ಬಿರುಗಾಳಿ ಮಳೆಗೆ 25 ವಿದ್ಯುತ್ ಕಂಬಗಳು ಧರೆಗುರುಳಿದರೆ, 6 ಟಿಸಿಗಳು ಹಾಳಾಗಿವೆ. ಮಳೆ ಬಿರುಗಾಳಿಯಿಂದ ಏಪ್ರಿಲ್ ತಿಂಗಳಲ್ಲಿಯೇ ಧರೆಗುರುಳಿದ ವಿದ್ಯುತ್ ಕಂಬಗಳ ಸಂಖ್ಯೆ 75ಕ್ಕೇರಿದರೆ, 15 ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋಗಿವೆ. ಇದರಿಂದ ಜೆಸ್ಕಾಂಗೆ ಸುಮಾರು ₹ 15 ಲಕ್ಷದಿಂದ ₹20 ಲಕ್ಷ ನಷ್ಟ ಉಂಟಾಗಿದೆ ಎಂದು ಜೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಾಮಣ್ಣ ಇಂಜಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಂಚೋಳಿ: ತಾಲ್ಲೂಕಿನ ಕುಂಚಾವರಂ ಸುತ್ತಲೂ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಮಳೆಗೆ ಪೋಚಾವರಂ ಗ್ರಾಮದ ಅರ್ಜುನ ಶಿರವಾಟಿ ಎಂಬ ರೈತರ ಎರಡು ಎಕರೆ ಮೆಕ್ಕೆಜೋಳ ನೆಲಸಮವಾಗಿದೆ.</p>.<p>ಜೋಳ ತೆನೆಬಿಟ್ಟು ಕಾಳುಗಳು ಹಾಲು ತುಂಬಿಕೊಳ್ಳುತ್ತಿದ್ದವು. ಇದರಿಂದ ರೈತರಿಗೆ ₹2 ಲಕ್ಷ ನಷ್ಟ ಉಂಟಾಗಿದೆ.</p>.<p>ಸಿಡಿಲಿಗೆ ಹಸು ಬಲಿ: ತಾಲ್ಲೂಕಿನ ಗಡಿಲಿಂಗದಳ್ಳಿಯಲ್ಲಿ ಸಿಡಿಲು ಬಡಿದು ನೈನಮ್ಮ ಮುದ್ನಾಳ ಎಂಬುವವರ ಹಸು ಸಾವನ್ನಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.</p>.<p>ತಾಲ್ಲೂಕಿನಲ್ಲಿ ಶುಕ್ರವಾರ ಸುರಿದ ಬಿರುಗಾಳಿ ಮಳೆಗೆ 25 ವಿದ್ಯುತ್ ಕಂಬಗಳು ಧರೆಗುರುಳಿದರೆ, 6 ಟಿಸಿಗಳು ಹಾಳಾಗಿವೆ. ಮಳೆ ಬಿರುಗಾಳಿಯಿಂದ ಏಪ್ರಿಲ್ ತಿಂಗಳಲ್ಲಿಯೇ ಧರೆಗುರುಳಿದ ವಿದ್ಯುತ್ ಕಂಬಗಳ ಸಂಖ್ಯೆ 75ಕ್ಕೇರಿದರೆ, 15 ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋಗಿವೆ. ಇದರಿಂದ ಜೆಸ್ಕಾಂಗೆ ಸುಮಾರು ₹ 15 ಲಕ್ಷದಿಂದ ₹20 ಲಕ್ಷ ನಷ್ಟ ಉಂಟಾಗಿದೆ ಎಂದು ಜೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಾಮಣ್ಣ ಇಂಜಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>