<p><strong>ವಾಡಿ (ಕಲಬುರಗಿ ಜಿಲ್ಲೆ):</strong> ಅದಾನಿ ಒಡೆತನದ ವಾಡಿ ಎಸಿಸಿ ಕಾರ್ಖಾನೆಯು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದೆ ಎಂದು ಆರೋಪಿಸಿದ ಗುತ್ತಿಗೆ ಕಾರ್ಮಿಕರು, ಸೋಮವಾರ ಪ್ರತಿಭಟನೆ ನಡೆಸಿದರು.</p><p>ಕಾರ್ಖಾನೆಯ ಗೇಟ್- 1 ಹಾಗೂ ಗೇಟ್- 2ರ ಮುಂಭಾಗ ಕಾರ್ಮಿಕರು ಜಮಾಯಿಸಿ, ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು.</p><p>ಕಾರ್ಮಿಕರನ್ನು ನಿರಂತರವಾಗಿ ಶೋಷಣೆ ಮಾಡಲಾಗುತ್ತಿದೆ. ಕೆಲಸ ಅವಧಿ ಬದಲಾವಣೆ ಜತೆಗೆ ದುಡಿಮೆ ಅವಧಿ ಹೆಚ್ಚಳ ಮಾಡಿ ಕಾರ್ಮಿಕರ ಶೋಷಣೆ ಮಾಡುತ್ತಿದ್ದಾರೆ. ಊಟದ ಸಮಯ ಹಾಗೂ ವಿಶ್ರಾಂತಿಗೂ ಅವಕಾಶ ನೀಡುತ್ತಿಲ್ಲ. ನಮ್ಮನ್ನು ಯಂತ್ರಗಳಂತೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.</p><p>ಈ ಮೊದಲು ಬೆಳಿಗ್ಗೆ 8ರಿಂದ ಮಧ್ಯಾಹ್ನ 4ರ ವರೆಗೆ 8 ಗಂಟೆ ಕೆಲಸದ ಸಮಯ ಇತ್ತು. ಊಟ ಹಾಗೂ ವಿರಾಮಕ್ಕೂ ಸ್ವಲ್ಪ ಅವಕಾಶ ಕೊಡಲಾಗುತ್ತಿತ್ತು. ಈ ಸಮಯಕ್ಕೆ ನಾವೆಲ್ಲಾ ಹೊಂದಿಕೊಂಡಿದ್ದು, ಹೆಚ್ಚುವರಿ ಕೆಲಸಕ್ಕೂ (ಒಟಿ) ಅವಕಾಶವಿತ್ತು. ಈಗ ಬೆಳಿಗ್ಗೆ 9ರಿಂದ ಸಂಜೆ 6ರ ವರೆಗೆ 9 ಗಂಟೆ ನಿರಂತರವಾಗಿ ದುಡಿಸಿಕೊಳ್ಳಲಾಗುತ್ತಿದೆ. ಊಟ ಮತ್ತು ವಿಶ್ರಾಂತಿಗೂ ಸಮಯ ಕಡಿಮೆ ಮಾಡಿ, ಗುಲಾಮರಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ದೂರಿದರು.</p><p>ಈ ಕೂಡಲೇ ಮೊದಲಿನ ಅವಧಿ ಮುಂದುವರೆಸಬೇಕು. ಪ್ರತಿದಿನ ಕೆಲಸ ನೀಡಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.</p><p>ಅಧಿಕಾರಿಗಳು ಸ್ಥಳಕ್ಕೆ ಬಂದು, ನಮ್ಮ ಮನವಿ ಆಲಿಸಬೇಕು. ಮೊದಲಿನ ಕೆಲಸದ ಅವಧಿ ನಿಗದಿಪಡಿಸುವವರೆಗೂ ಕೆಲಸಕ್ಕೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಡಿ (ಕಲಬುರಗಿ ಜಿಲ್ಲೆ):</strong> ಅದಾನಿ ಒಡೆತನದ ವಾಡಿ ಎಸಿಸಿ ಕಾರ್ಖಾನೆಯು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದೆ ಎಂದು ಆರೋಪಿಸಿದ ಗುತ್ತಿಗೆ ಕಾರ್ಮಿಕರು, ಸೋಮವಾರ ಪ್ರತಿಭಟನೆ ನಡೆಸಿದರು.</p><p>ಕಾರ್ಖಾನೆಯ ಗೇಟ್- 1 ಹಾಗೂ ಗೇಟ್- 2ರ ಮುಂಭಾಗ ಕಾರ್ಮಿಕರು ಜಮಾಯಿಸಿ, ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು.</p><p>ಕಾರ್ಮಿಕರನ್ನು ನಿರಂತರವಾಗಿ ಶೋಷಣೆ ಮಾಡಲಾಗುತ್ತಿದೆ. ಕೆಲಸ ಅವಧಿ ಬದಲಾವಣೆ ಜತೆಗೆ ದುಡಿಮೆ ಅವಧಿ ಹೆಚ್ಚಳ ಮಾಡಿ ಕಾರ್ಮಿಕರ ಶೋಷಣೆ ಮಾಡುತ್ತಿದ್ದಾರೆ. ಊಟದ ಸಮಯ ಹಾಗೂ ವಿಶ್ರಾಂತಿಗೂ ಅವಕಾಶ ನೀಡುತ್ತಿಲ್ಲ. ನಮ್ಮನ್ನು ಯಂತ್ರಗಳಂತೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.</p><p>ಈ ಮೊದಲು ಬೆಳಿಗ್ಗೆ 8ರಿಂದ ಮಧ್ಯಾಹ್ನ 4ರ ವರೆಗೆ 8 ಗಂಟೆ ಕೆಲಸದ ಸಮಯ ಇತ್ತು. ಊಟ ಹಾಗೂ ವಿರಾಮಕ್ಕೂ ಸ್ವಲ್ಪ ಅವಕಾಶ ಕೊಡಲಾಗುತ್ತಿತ್ತು. ಈ ಸಮಯಕ್ಕೆ ನಾವೆಲ್ಲಾ ಹೊಂದಿಕೊಂಡಿದ್ದು, ಹೆಚ್ಚುವರಿ ಕೆಲಸಕ್ಕೂ (ಒಟಿ) ಅವಕಾಶವಿತ್ತು. ಈಗ ಬೆಳಿಗ್ಗೆ 9ರಿಂದ ಸಂಜೆ 6ರ ವರೆಗೆ 9 ಗಂಟೆ ನಿರಂತರವಾಗಿ ದುಡಿಸಿಕೊಳ್ಳಲಾಗುತ್ತಿದೆ. ಊಟ ಮತ್ತು ವಿಶ್ರಾಂತಿಗೂ ಸಮಯ ಕಡಿಮೆ ಮಾಡಿ, ಗುಲಾಮರಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ದೂರಿದರು.</p><p>ಈ ಕೂಡಲೇ ಮೊದಲಿನ ಅವಧಿ ಮುಂದುವರೆಸಬೇಕು. ಪ್ರತಿದಿನ ಕೆಲಸ ನೀಡಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.</p><p>ಅಧಿಕಾರಿಗಳು ಸ್ಥಳಕ್ಕೆ ಬಂದು, ನಮ್ಮ ಮನವಿ ಆಲಿಸಬೇಕು. ಮೊದಲಿನ ಕೆಲಸದ ಅವಧಿ ನಿಗದಿಪಡಿಸುವವರೆಗೂ ಕೆಲಸಕ್ಕೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>