<p><strong>ಕಮಲಾಪುರ</strong>: ‘ಮಾನಸಿಕ ಸ್ಥಿಮಿತೆ, ಏಕಾಗೃತೆ ಹಾಗೂ ಸತತ ಪ್ರಯತ್ನದಿಂದ ಮಾತ್ರ ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ಮೀನಾ ತಿಳಿಸಿದರು.</p>.<p>ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ಸ್ಫೂರ್ತಿ ಕಿರಣ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಪ್ರಾಥಮಿಕ, ಪ್ರೌಢ, ಪದವಿ ಪೂರ್ವದ ಹಂತದ ವರೆಗಿನ ವಿಷಯಗಳೇ ಪದವಿಯಿಂದ ವಿಸ್ತ್ರತಗೊಳ್ಳುತ್ತವೆ. ಈ ಹಂತದಲ್ಲಿ ನಿರಂತರ ಅಭ್ಯಾಸ ಮಾಡಿದರೆ. ನಿಮ್ಮ ತಳಪಾಯ ಗಟ್ಟಿಗೊಳ್ಳುತ್ತದೆ. ಹದಿಹರೆಯದ ಈ ವಯಸ್ಸಿನಲ್ಲಿ ನಿಮ್ಮಲ್ಲಿ ಚಿತ್ತ ಚಂಚಲ ಇರುವುದು ಸಹಜ. ಅದನ್ನು ನಿಗ್ರಹಿಸಬೇಕು ಗುರಿ ಸಾಧನೆಯತ್ತ ಗಮನ ಹರಿಸಬೇಕು. ಮನಸ್ಸಿದ್ದರೆ ಮಾರ್ಗ ತನ್ನಿಂದ ತಾನೆ ಸಿಗುತ್ತದೆ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.</p>.<p>ಐಎಎಸ್, ಐಪಿಎಸ್ ಮಾಡಿದವರೂ ಸಹ ಗ್ರಾಮೀಣ ಪ್ರದೇಶದಿಂದ ಬಂದಿರುತ್ತಾರೆ. ನಮ್ಮಂತ ಸಾಧನೆ ಮಾಡುವ ಕ್ಷಮತೆ ನಿಮ್ಮಲೂ ಇದೆ. ಅದನ್ನು ಜಾಗೃತಗೊಳಿಸಿ ಪ್ರತಿಯೊಂದು ವಿಷಯದ ಕುರಿತು ಪರಿಪೂರ್ಣರಾಗಿ ಹೊಸ ವಿಷಯಗಳ ತಿಳಿದುಕೊಳ್ಳುವ ಕುತೂಹಲ ಬೆಳೆಸಿಕೊಳ್ಳಬೇಕು’ ಎಂದರು.</p>.<p>ತಾಲ್ಲೂಕು ಪಂಚಾಯಿತಿ ಇಒ ಅಂಬ್ರೇಶ ಪಾಟೀಲ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಶಶಿಕಲಾ ಮಾಲಿ ಪಾಟೀಲ, ಡಯಟ್ ಪ್ರಾಚಾರ್ಯ ಬಸವರಾಜ ಮಾಯಾಚಾರ, ಉಪನ್ಯಾಸಕರಾದ ಯಲ್ಲಪ್ಪ, ಮಲ್ಲಿಕಾರ್ಜುನ ವಾಲಿ, ಸುಭಾಷ, ಶ್ರೀದೇವಿ ಮೇತ್ರಿ, ಹಣಮಂತ ಬೇನಾಳ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲಾಪುರ</strong>: ‘ಮಾನಸಿಕ ಸ್ಥಿಮಿತೆ, ಏಕಾಗೃತೆ ಹಾಗೂ ಸತತ ಪ್ರಯತ್ನದಿಂದ ಮಾತ್ರ ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ಮೀನಾ ತಿಳಿಸಿದರು.</p>.<p>ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ಸ್ಫೂರ್ತಿ ಕಿರಣ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಪ್ರಾಥಮಿಕ, ಪ್ರೌಢ, ಪದವಿ ಪೂರ್ವದ ಹಂತದ ವರೆಗಿನ ವಿಷಯಗಳೇ ಪದವಿಯಿಂದ ವಿಸ್ತ್ರತಗೊಳ್ಳುತ್ತವೆ. ಈ ಹಂತದಲ್ಲಿ ನಿರಂತರ ಅಭ್ಯಾಸ ಮಾಡಿದರೆ. ನಿಮ್ಮ ತಳಪಾಯ ಗಟ್ಟಿಗೊಳ್ಳುತ್ತದೆ. ಹದಿಹರೆಯದ ಈ ವಯಸ್ಸಿನಲ್ಲಿ ನಿಮ್ಮಲ್ಲಿ ಚಿತ್ತ ಚಂಚಲ ಇರುವುದು ಸಹಜ. ಅದನ್ನು ನಿಗ್ರಹಿಸಬೇಕು ಗುರಿ ಸಾಧನೆಯತ್ತ ಗಮನ ಹರಿಸಬೇಕು. ಮನಸ್ಸಿದ್ದರೆ ಮಾರ್ಗ ತನ್ನಿಂದ ತಾನೆ ಸಿಗುತ್ತದೆ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.</p>.<p>ಐಎಎಸ್, ಐಪಿಎಸ್ ಮಾಡಿದವರೂ ಸಹ ಗ್ರಾಮೀಣ ಪ್ರದೇಶದಿಂದ ಬಂದಿರುತ್ತಾರೆ. ನಮ್ಮಂತ ಸಾಧನೆ ಮಾಡುವ ಕ್ಷಮತೆ ನಿಮ್ಮಲೂ ಇದೆ. ಅದನ್ನು ಜಾಗೃತಗೊಳಿಸಿ ಪ್ರತಿಯೊಂದು ವಿಷಯದ ಕುರಿತು ಪರಿಪೂರ್ಣರಾಗಿ ಹೊಸ ವಿಷಯಗಳ ತಿಳಿದುಕೊಳ್ಳುವ ಕುತೂಹಲ ಬೆಳೆಸಿಕೊಳ್ಳಬೇಕು’ ಎಂದರು.</p>.<p>ತಾಲ್ಲೂಕು ಪಂಚಾಯಿತಿ ಇಒ ಅಂಬ್ರೇಶ ಪಾಟೀಲ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಶಶಿಕಲಾ ಮಾಲಿ ಪಾಟೀಲ, ಡಯಟ್ ಪ್ರಾಚಾರ್ಯ ಬಸವರಾಜ ಮಾಯಾಚಾರ, ಉಪನ್ಯಾಸಕರಾದ ಯಲ್ಲಪ್ಪ, ಮಲ್ಲಿಕಾರ್ಜುನ ವಾಲಿ, ಸುಭಾಷ, ಶ್ರೀದೇವಿ ಮೇತ್ರಿ, ಹಣಮಂತ ಬೇನಾಳ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>