<p><strong>ಆಳಂದ: </strong>ಶಾಸಕ ಸುಭಾಷ ಗುತ್ತೇದಾರ ಅವರು, ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಬಹುತೇಕ ಅನುದಾನವನ್ನು ತಾವು ಪ್ರತಿನಿಧಿಸುವ ಆಳಂದ ಕ್ಷೇತ್ರದಲ್ಲಿನ ರಸ್ತೆ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೆ ಒದಗಿಸಿದ್ದಾರೆ.</p>.<p>ಆಳಂದ ಕ್ಷೇತ್ರಕ್ಕೂ ಕೋವಿಡ್ ಕಾರಣದಿಂದ ಶಾಸಕರ ಅನುದಾನ ಕಡಿತವಾಗಿದ್ದು, ಕ್ಷೇತ್ರಕ್ಕೆ ಬರಬೇಕಾದಸುಮಾರು ₹ 2 ಕೋಟಿಯಷ್ಟು ಅನುದಾನ ಸೋಂಕು ನಿಯಂತ್ರಣಕ್ಕೆ ಬಳಕೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ₹ 3 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಬಹುತೇಕ ಹಣ ಕ್ಷೇತ್ರದ ವಿವಿಧೆಡೆ ರಸ್ತೆ ಸುಧಾರಣೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಬಳಕೆಯಾಗಿದೆ.</p>.<p>2018–19ರಲ್ಲಿ ₹1 ಕೋಟಿ ಅನುದಾನ ಬಂದಿತ್ತು. ಇದರಲ್ಲಿ ಬಹುತೇಕ ಅನುದಾನ ರಸ್ತೆ ಸುಧಾರಣೆಗೆ ವ್ಯಯಿಸಲಾಗಿದೆ. ಜತೆಗೆ ಬೊಮ್ಮನಳ್ಳಿ, ಮಾಡಿಯಾಳ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ.</p>.<p>2019–20ನೇ ಸಾಲಿನಲ್ಲಿ ಬಂದಿದ್ದ ₹1ಕೋಟಿ ಅನುದಾನದಲ್ಲಿ ನಸೀರವಾಡಿ ಗ್ರಾಮದಲ್ಲಿ ₹32 ಲಕ್ಷ ವೆಚ್ಚದಲ್ಲಿ ರಸ್ತೆ ಸುಧಾರಣೆ, ತೀರ್ಥ ಗ್ರಾಮದಲ್ಲಿನ ಪ್ರಾಥಮಿಕ ಶಾಲೆಯ ಕಾಂಪೌಂಡ್ ನಿರ್ಮಾಣ ಹಾಗೂ ಖಂಡಾಳ, ತಡೋಳಾ, ಬಬಲೇಶ್ವರ, ರುದ್ರವಾಡಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆಯಾಗಿದೆ.</p>.<p>2020–21ರಲ್ಲಿ ₹ 1 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಮಟಕಿ ಗ್ರಾಮದ ಸಮುದಾಯ ಭವನಕ್ಕೆ ₹20 ಲಕ್ಷ ಹಾಗೂ ಆಳಂದ ಪಟ್ಟಣದ ವಾಸುದೇವ ಸಮುದಾಯ ಭವನ ನಿರ್ಮಾಣಕ್ಕೆ ₹15 ಲಕ್ಷ ಮೀಸಲಿಡಲಾಗಿದೆ. ಮೋಘಾ(ಕೆ) ಗ್ರಾಮದಲ್ಲಿ ಎಸ್ಇಪಿ ಯೋಜನೆಯಡಿ ಜಟಿಂಗರಾಯನ ದೇವಸ್ಥಾನ ನಿರ್ಮಾಣಕ್ಕೆ ₹13 ಲಕ್ಷ ಹಾಗೂ ಝಳಕಿ(ಕೆ) ಪಾರ್ಧಿ ತಾಂಡಾದಲ್ಲಿ ಅಭಿವೃದ್ಧಿ ಕಾಮಗಾರಿಗೆ ಬಳಸಲಾಗಿದೆ. ಹಿತ್ತಲ ಶಿರೂರು ಹಾಗೂ ರುದ್ರವಾಡಿ ಗ್ರಾಮದ ಭೀಮನಗರದಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಕ್ರಮವಾಗಿ₹15 ಲಕ್ಷ ಹಾಗೂ ₹13 ಲಕ್ಷ ನೀಡಲಾಗಿದೆ.</p>.<p>ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿನ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೆಲವು ಮಾತ್ರವೇ ಪೂರ್ಣಗೊಂಡಿವೆ. ಉಳಿದವು ಪ್ರಗತಿಯ ಹಂತದಲ್ಲಿವೆ.</p>.<p>ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಗೆ ಅನುದಾನ ಹೆಚ್ಚಿಸಬೇಕು. ಮೊದಲ ವರ್ಷದಲ್ಲಿ ₹1ಕೋಟಿ ಮಾತ್ರ ಅನುದಾನ ಬಂದಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ ವಿವಿಧ ಯೋಜನೆಗಳಡಿ ಅನುದಾನವು ಬರುತ್ತಿದೆ. ಆದರೆ, ಶಾಸಕರ ನಿಧಿಗೆ ₹ 1 ಕೋಟಿ ಅನುದಾನ ಬಿಡುಗಡೆಯಾಗಿದೆ. ಅಗತ್ಯ ಅಭಿವೃದ್ಧಿ ಕಾರ್ಯಗಳಿಗೆ ಈ ಅನುದಾನ ಬಳಕೆ ಮಾಡಲಾಗಿದೆ ಎಂದು ಶಾಸಕ ಸುಭಾಷ ಗುತ್ತೇದಾರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>*</p>.<p>ಕೋವಿಡ್ನಿಂದ ಎರಡು ವರ್ಷ ಶಾಸಕರ ನಿಧಿಯ ಅನುದಾನವು ಸೋಂಕು ನಿಯಂತ್ರಣ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಪ್ರತಿ ವರ್ಷ ಬಂದ ₹1 ಕೋಟಿ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗಿದೆ.<br /><em><strong>-ಸುಭಾಷ ಗುತ್ತೇದಾರ, ಶಾಸಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಳಂದ: </strong>ಶಾಸಕ ಸುಭಾಷ ಗುತ್ತೇದಾರ ಅವರು, ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಬಹುತೇಕ ಅನುದಾನವನ್ನು ತಾವು ಪ್ರತಿನಿಧಿಸುವ ಆಳಂದ ಕ್ಷೇತ್ರದಲ್ಲಿನ ರಸ್ತೆ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೆ ಒದಗಿಸಿದ್ದಾರೆ.</p>.<p>ಆಳಂದ ಕ್ಷೇತ್ರಕ್ಕೂ ಕೋವಿಡ್ ಕಾರಣದಿಂದ ಶಾಸಕರ ಅನುದಾನ ಕಡಿತವಾಗಿದ್ದು, ಕ್ಷೇತ್ರಕ್ಕೆ ಬರಬೇಕಾದಸುಮಾರು ₹ 2 ಕೋಟಿಯಷ್ಟು ಅನುದಾನ ಸೋಂಕು ನಿಯಂತ್ರಣಕ್ಕೆ ಬಳಕೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ₹ 3 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಬಹುತೇಕ ಹಣ ಕ್ಷೇತ್ರದ ವಿವಿಧೆಡೆ ರಸ್ತೆ ಸುಧಾರಣೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಬಳಕೆಯಾಗಿದೆ.</p>.<p>2018–19ರಲ್ಲಿ ₹1 ಕೋಟಿ ಅನುದಾನ ಬಂದಿತ್ತು. ಇದರಲ್ಲಿ ಬಹುತೇಕ ಅನುದಾನ ರಸ್ತೆ ಸುಧಾರಣೆಗೆ ವ್ಯಯಿಸಲಾಗಿದೆ. ಜತೆಗೆ ಬೊಮ್ಮನಳ್ಳಿ, ಮಾಡಿಯಾಳ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ.</p>.<p>2019–20ನೇ ಸಾಲಿನಲ್ಲಿ ಬಂದಿದ್ದ ₹1ಕೋಟಿ ಅನುದಾನದಲ್ಲಿ ನಸೀರವಾಡಿ ಗ್ರಾಮದಲ್ಲಿ ₹32 ಲಕ್ಷ ವೆಚ್ಚದಲ್ಲಿ ರಸ್ತೆ ಸುಧಾರಣೆ, ತೀರ್ಥ ಗ್ರಾಮದಲ್ಲಿನ ಪ್ರಾಥಮಿಕ ಶಾಲೆಯ ಕಾಂಪೌಂಡ್ ನಿರ್ಮಾಣ ಹಾಗೂ ಖಂಡಾಳ, ತಡೋಳಾ, ಬಬಲೇಶ್ವರ, ರುದ್ರವಾಡಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆಯಾಗಿದೆ.</p>.<p>2020–21ರಲ್ಲಿ ₹ 1 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಮಟಕಿ ಗ್ರಾಮದ ಸಮುದಾಯ ಭವನಕ್ಕೆ ₹20 ಲಕ್ಷ ಹಾಗೂ ಆಳಂದ ಪಟ್ಟಣದ ವಾಸುದೇವ ಸಮುದಾಯ ಭವನ ನಿರ್ಮಾಣಕ್ಕೆ ₹15 ಲಕ್ಷ ಮೀಸಲಿಡಲಾಗಿದೆ. ಮೋಘಾ(ಕೆ) ಗ್ರಾಮದಲ್ಲಿ ಎಸ್ಇಪಿ ಯೋಜನೆಯಡಿ ಜಟಿಂಗರಾಯನ ದೇವಸ್ಥಾನ ನಿರ್ಮಾಣಕ್ಕೆ ₹13 ಲಕ್ಷ ಹಾಗೂ ಝಳಕಿ(ಕೆ) ಪಾರ್ಧಿ ತಾಂಡಾದಲ್ಲಿ ಅಭಿವೃದ್ಧಿ ಕಾಮಗಾರಿಗೆ ಬಳಸಲಾಗಿದೆ. ಹಿತ್ತಲ ಶಿರೂರು ಹಾಗೂ ರುದ್ರವಾಡಿ ಗ್ರಾಮದ ಭೀಮನಗರದಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಕ್ರಮವಾಗಿ₹15 ಲಕ್ಷ ಹಾಗೂ ₹13 ಲಕ್ಷ ನೀಡಲಾಗಿದೆ.</p>.<p>ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿನ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೆಲವು ಮಾತ್ರವೇ ಪೂರ್ಣಗೊಂಡಿವೆ. ಉಳಿದವು ಪ್ರಗತಿಯ ಹಂತದಲ್ಲಿವೆ.</p>.<p>ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಗೆ ಅನುದಾನ ಹೆಚ್ಚಿಸಬೇಕು. ಮೊದಲ ವರ್ಷದಲ್ಲಿ ₹1ಕೋಟಿ ಮಾತ್ರ ಅನುದಾನ ಬಂದಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ ವಿವಿಧ ಯೋಜನೆಗಳಡಿ ಅನುದಾನವು ಬರುತ್ತಿದೆ. ಆದರೆ, ಶಾಸಕರ ನಿಧಿಗೆ ₹ 1 ಕೋಟಿ ಅನುದಾನ ಬಿಡುಗಡೆಯಾಗಿದೆ. ಅಗತ್ಯ ಅಭಿವೃದ್ಧಿ ಕಾರ್ಯಗಳಿಗೆ ಈ ಅನುದಾನ ಬಳಕೆ ಮಾಡಲಾಗಿದೆ ಎಂದು ಶಾಸಕ ಸುಭಾಷ ಗುತ್ತೇದಾರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>*</p>.<p>ಕೋವಿಡ್ನಿಂದ ಎರಡು ವರ್ಷ ಶಾಸಕರ ನಿಧಿಯ ಅನುದಾನವು ಸೋಂಕು ನಿಯಂತ್ರಣ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಪ್ರತಿ ವರ್ಷ ಬಂದ ₹1 ಕೋಟಿ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗಿದೆ.<br /><em><strong>-ಸುಭಾಷ ಗುತ್ತೇದಾರ, ಶಾಸಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>