<h1>ಆಳಂದ: ತಾಲ್ಲೂಕಿನ ದೇಗಾಂವ ಗ್ರಾಮದಲ್ಲಿ ಶನಿವಾರ ಹನುಮಾನ ದೇವರ ಹಾಗೂ ಶೇಖ ಜೀಂದಾವಲಿಯ ಭಾವೈಕ್ಯತೆಯ ಜಾತ್ರೆಯಲ್ಲಿ ನಡೆದ ಮದ್ದಿನ ಹುಲಿ ಓಡಿಸುವ ಉತ್ಸವವು ಸಂಭ್ರಮದಿಂದ ಜರುಗಿತು.</h1>.<h1>ಗ್ರಾಮದ ಮುಖ್ಯಬೀದಿಗಳಲ್ಲಿ ಮದ್ದಿನ ಹುಲಿ ಓಡಿಸುವ ರೋಮಾಂಚನವು ಕಣ್ತುಂಬಿಕೊಳ್ಳಲು ಸುತ್ತಲಿನ ಗ್ರಾಮದ ಭಕ್ತರು ದೇಗಾಂವ ಗ್ರಾಮಕ್ಕೆ ಬೆಳಿಗ್ಗೆಯೇ ಆಗಮಿಸಿದರು. ಹಿಂದೂ-ಮುಸ್ಲಿಮರು ಒಬ್ಬರೂ ಸಾಮರಸ್ಯದಿಂದ ಎರಡು ಜಾತ್ರೆಯು ಏಕಕಾಲದಲ್ಲಿ ಆಚರಿಸುವುದು ವಿಶೇಷವಾದುದು.</h1>.<h1>ಈ ಬಾರಿ ಶಾಸಕರ ಪುತ್ರ ಸತ್ಯಜೀತ ಬಿ. ಪಾಟೀಲ, ದೇಗಾಂವನ ಮಲ್ಲಮ್ಮ ಬಿರಾದಾರ, ದೇವರಾಯ ಪಾಟೀಲ, ಶೇಖರ ಬಿರಾದಾರ ಹಾಗೂ ಮಹಾಗಾಂವ, ಬಿಲಗುಂದಿ ಗ್ರಾಮದ ಭಕ್ತರ ಹರಕೆಹೊತ್ತ 6 ಮದ್ದಿನ ಹುಲಿಗಳ ಗೊಂಬೆಗಳನ್ನು ಕಟ್ಟಿಗೆಯಿಂದ ಸಿದ್ಧಪಡಿಸಿ, ಹುಲಿ ಬಣ್ಣದಿಂದ ಸಿಂಗರಿಸಿ ಗ್ರಾಮದ ಮುಖ್ಯಬೀದಿಗೆ ಹಲಗೆ, ವಿವಿಧ ವಾದ್ಯಗಳ ಸಡಗರದೊಂದಿಗೆ ಕರೆತರಲಾಯಿತು.</h1>.<h1>ಗ್ರಾಮದ ಸರ್ಕಾರಿ ಶಾಲೆ ಎದುರು ರಸ್ತೆಯಿಂದ ಹನುಮಾನ ದೇವಸ್ಥಾನದವರೆಗೂ 400 ಮೀ. ಉದ್ದದ ಹಗ್ಗದ ಕಂಬಿ ಮೇಲೆ ಮದ್ದಿನ ಹುಲಿ ಓಡುವುದು ಜಾತ್ರೆಯ ವಿಶೇಷ. ಈ ಮದ್ದಿನ ಗೊಂಬೆಗೆ ಮದ್ದುಗಾರರು ಪೂಜೆ ಸಲ್ಲಿಸಿ, ಬೆಂಕಿಯ ಕಿಡಿ ಸ್ಪರ್ಶಿಸಿದರೆ ಕ್ಷಣಾರ್ಧದಲ್ಲಿ ಮದ್ದಿನ ಹುಲಿಗಳ ಪಟಾಕಿ ಸದ್ದು, ಹಗ್ಗದ ಮೇಲೆ ಹುಲಿಗೊಂಬೆಯು ವೇಗವಾಗಿ ಸಾಗುತ್ತದೆ. ಜತೆಗೆ ಯುವಕರ ಕೇಕೆ, ಜೈಕಾರಗಳು, ಚಪ್ಪಾಳೆಯು ನೋಡುಗರನ್ನು ರೋಮಾಂಚನಗೊಳಿಸುತ್ತದೆ. ಸರದಿಯಲ್ಲಿ 6 ಹುಲಿಗೊಂಬೆಗಳನ್ನು ಓಡಿಸಿದ ನಂತರ ಹುಲಿ ತಯಾರಿಸಿದ ನುರಿತ ಮದ್ದುಗಾರರಾದ ಬಸವರಾಜ ಮಳಕುಂಬೆ, ಶೇಖರ ಬಿರಾದಾರ, ಸುಭಾಷ ಲಾಡವಂತಿ ಅವರನ್ನು ಗ್ರಾಮಸ್ಥರು ಮೆರವಣಿಗೆ ಮೂಲಕ ಕರೆತಂದು ವಿಶೇಷವಾಗಿ ಸತ್ಕರಿಸಿದರು.</h1>.<h1>ಮುನ್ನೋಳ್ಳಿ, ಬಸವಣ್ಣ ಸಂಗೋಳಗಿ, ತಡಕಲ, ಕಣಮಸ, ಬಿಲಗುಂದಾ, ಸನಗುಂದಾ, ಹಳ್ಳಿ ಸಲಗರ, ನರೋಣಾ, ಬಬಲಾದ, ಕಣಮಸ, ತಂಬಕವಾಡಿ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.</h1>.<h1>ನಂತರ ಹನುಮಾನ ದೇವಸ್ಥಾನದ ಆವರಣದಲ್ಲಿ ಜನಪದ ಕಲಾವಿದರಿಂದ ಗೀಗೀ ಪದಗಳ ಗಾಯನ ನಡೆಯಿತು. ಸಂಜೆ ಜಂಗೀ ಪೈಲ್ವಾನರ ಕುಸ್ತಿಗಳು ನಡೆದವು.</h1>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h1>ಆಳಂದ: ತಾಲ್ಲೂಕಿನ ದೇಗಾಂವ ಗ್ರಾಮದಲ್ಲಿ ಶನಿವಾರ ಹನುಮಾನ ದೇವರ ಹಾಗೂ ಶೇಖ ಜೀಂದಾವಲಿಯ ಭಾವೈಕ್ಯತೆಯ ಜಾತ್ರೆಯಲ್ಲಿ ನಡೆದ ಮದ್ದಿನ ಹುಲಿ ಓಡಿಸುವ ಉತ್ಸವವು ಸಂಭ್ರಮದಿಂದ ಜರುಗಿತು.</h1>.<h1>ಗ್ರಾಮದ ಮುಖ್ಯಬೀದಿಗಳಲ್ಲಿ ಮದ್ದಿನ ಹುಲಿ ಓಡಿಸುವ ರೋಮಾಂಚನವು ಕಣ್ತುಂಬಿಕೊಳ್ಳಲು ಸುತ್ತಲಿನ ಗ್ರಾಮದ ಭಕ್ತರು ದೇಗಾಂವ ಗ್ರಾಮಕ್ಕೆ ಬೆಳಿಗ್ಗೆಯೇ ಆಗಮಿಸಿದರು. ಹಿಂದೂ-ಮುಸ್ಲಿಮರು ಒಬ್ಬರೂ ಸಾಮರಸ್ಯದಿಂದ ಎರಡು ಜಾತ್ರೆಯು ಏಕಕಾಲದಲ್ಲಿ ಆಚರಿಸುವುದು ವಿಶೇಷವಾದುದು.</h1>.<h1>ಈ ಬಾರಿ ಶಾಸಕರ ಪುತ್ರ ಸತ್ಯಜೀತ ಬಿ. ಪಾಟೀಲ, ದೇಗಾಂವನ ಮಲ್ಲಮ್ಮ ಬಿರಾದಾರ, ದೇವರಾಯ ಪಾಟೀಲ, ಶೇಖರ ಬಿರಾದಾರ ಹಾಗೂ ಮಹಾಗಾಂವ, ಬಿಲಗುಂದಿ ಗ್ರಾಮದ ಭಕ್ತರ ಹರಕೆಹೊತ್ತ 6 ಮದ್ದಿನ ಹುಲಿಗಳ ಗೊಂಬೆಗಳನ್ನು ಕಟ್ಟಿಗೆಯಿಂದ ಸಿದ್ಧಪಡಿಸಿ, ಹುಲಿ ಬಣ್ಣದಿಂದ ಸಿಂಗರಿಸಿ ಗ್ರಾಮದ ಮುಖ್ಯಬೀದಿಗೆ ಹಲಗೆ, ವಿವಿಧ ವಾದ್ಯಗಳ ಸಡಗರದೊಂದಿಗೆ ಕರೆತರಲಾಯಿತು.</h1>.<h1>ಗ್ರಾಮದ ಸರ್ಕಾರಿ ಶಾಲೆ ಎದುರು ರಸ್ತೆಯಿಂದ ಹನುಮಾನ ದೇವಸ್ಥಾನದವರೆಗೂ 400 ಮೀ. ಉದ್ದದ ಹಗ್ಗದ ಕಂಬಿ ಮೇಲೆ ಮದ್ದಿನ ಹುಲಿ ಓಡುವುದು ಜಾತ್ರೆಯ ವಿಶೇಷ. ಈ ಮದ್ದಿನ ಗೊಂಬೆಗೆ ಮದ್ದುಗಾರರು ಪೂಜೆ ಸಲ್ಲಿಸಿ, ಬೆಂಕಿಯ ಕಿಡಿ ಸ್ಪರ್ಶಿಸಿದರೆ ಕ್ಷಣಾರ್ಧದಲ್ಲಿ ಮದ್ದಿನ ಹುಲಿಗಳ ಪಟಾಕಿ ಸದ್ದು, ಹಗ್ಗದ ಮೇಲೆ ಹುಲಿಗೊಂಬೆಯು ವೇಗವಾಗಿ ಸಾಗುತ್ತದೆ. ಜತೆಗೆ ಯುವಕರ ಕೇಕೆ, ಜೈಕಾರಗಳು, ಚಪ್ಪಾಳೆಯು ನೋಡುಗರನ್ನು ರೋಮಾಂಚನಗೊಳಿಸುತ್ತದೆ. ಸರದಿಯಲ್ಲಿ 6 ಹುಲಿಗೊಂಬೆಗಳನ್ನು ಓಡಿಸಿದ ನಂತರ ಹುಲಿ ತಯಾರಿಸಿದ ನುರಿತ ಮದ್ದುಗಾರರಾದ ಬಸವರಾಜ ಮಳಕುಂಬೆ, ಶೇಖರ ಬಿರಾದಾರ, ಸುಭಾಷ ಲಾಡವಂತಿ ಅವರನ್ನು ಗ್ರಾಮಸ್ಥರು ಮೆರವಣಿಗೆ ಮೂಲಕ ಕರೆತಂದು ವಿಶೇಷವಾಗಿ ಸತ್ಕರಿಸಿದರು.</h1>.<h1>ಮುನ್ನೋಳ್ಳಿ, ಬಸವಣ್ಣ ಸಂಗೋಳಗಿ, ತಡಕಲ, ಕಣಮಸ, ಬಿಲಗುಂದಾ, ಸನಗುಂದಾ, ಹಳ್ಳಿ ಸಲಗರ, ನರೋಣಾ, ಬಬಲಾದ, ಕಣಮಸ, ತಂಬಕವಾಡಿ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.</h1>.<h1>ನಂತರ ಹನುಮಾನ ದೇವಸ್ಥಾನದ ಆವರಣದಲ್ಲಿ ಜನಪದ ಕಲಾವಿದರಿಂದ ಗೀಗೀ ಪದಗಳ ಗಾಯನ ನಡೆಯಿತು. ಸಂಜೆ ಜಂಗೀ ಪೈಲ್ವಾನರ ಕುಸ್ತಿಗಳು ನಡೆದವು.</h1>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>