ಕಮಲಾಪುರ ತಾಲ್ಲೂಕಿನ ಆಡಕಿ ಮೋಕ ತಾಂಡಾದ ಶಾಂತಾಬಾಯಿ ಕಾಶಿರಾಮ ರಾಠೋಡ (56) ಮೃತರು. ಚಿಂಚೋಳಿ ತಾಲ್ಲೂಕಿನ ಧರ್ಮಾಸಾಗರದಲ್ಲಿ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ವಾಪಸ್ ಹೋಗುವಾಗ ಚಿಮ್ಮನಚೋಡ ಬಳಿಯ ಮಹಿಶಮ್ಮನ ಗುಡಿ ಸಮೀಪ ಆಟೊ ಪಲ್ಟಿಯಾಗಿದೆ. ಅಮರೇಶ ಗೋಪು ರಾಠೋಡ(ಅಟೊ ಚಾಲಕ) ಸಹಿತ ಇತರ ನಾಲ್ವರು ಮಹಿಳೆಯರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಕಲಬುರಗಿಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಆಟೊ ಕಂದಕಕ್ಕೆ ಉರುಳಿದ್ದರಿಂದ ಅಟೊದಲ್ಲಿ ಮಹಿಳೆಯೊಬ್ಬಳ ಕಣ್ಣಿಗೆ ಕಟ್ಟಿಗೆ ಚುಚ್ಚಿವೆ. ಇತರರಿಗೂ ಗಂಭೀರ ಗಾಯಗಳಾಗಿವೆ.