ನಗರದಲ್ಲಿರುವ ಆಟೊ ಚಾಲಕರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ ಸರ್ಕಾರದಿಂದ ₹ 5 ಲಕ್ಷ ಪರಿಹಾರವನ್ನು ತಕ್ಷಣ ನೀಡಬೇಕು. ನಗರದಲ್ಲಿ ಆಟೊ ನಿಲ್ದಾಣಗಳನ್ನು ನಿರ್ಮಿಸಬೇಕು. ಈಗಾಗಲೇ ಇರುವ ಆಟೊ ನಿಲ್ದಾಣಗಳಲ್ಲಿ ದ್ವಚಕ್ರ ವಾಹನ, ಚಹಾ ಅಂಗಡಿ ಮತ್ತು ಇನ್ನಿತರ ವ್ಯಾಪಾರ ಮಾಡುತ್ತಿರುವ ಜಾಗವನ್ನು ಖಾಲಿ ಮಾಡಿಸಿ ಅಲ್ಲಿರುವ ನಿಲ್ದಾಣವನ್ನು ಚಾಲಕರ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು. ಆಟೊ ಚಾಲಕರಿಗೆ ಮಂಜೂರಾಗಿರುವ 780 ಮನೆಗಳಲ್ಲಿ 397 ಜನರು ಹಣವನ್ನು ತುಂಬಿದ್ದು, ಅವರಿಗೆ ಮನೆಯ ಹಕ್ಕುಪತ್ರಗಳನ್ನು ವಿತರಿಸಬೇಕು. ನಗರದಲ್ಲಿ ತಾಲ್ಲೂಕು ಪರವಾನಗಿ ಹೊಂದಿರುವ ಆಟೊಗಳಿದ್ದು, ಅವುಗಳ ಮಾಲೀಕರಿಗೆ ದಂಡ ಹಾಕಿ ಮತ್ತೆ ನಗರದಲ್ಲಿ ಓಡಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.