ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತ ಹಕೀಮ್ ಶಾಕೀರ್‌ಗೆ ₹ 1.25 ಲಕ್ಷ ಮೊತ್ತದ ಬಹುಮಾನ

Last Updated 21 ಮಾರ್ಚ್ 2023, 15:38 IST
ಅಕ್ಷರ ಗಾತ್ರ

ಕಲಬುರಗಿ: ಉರ್ದು ದಿನಪತ್ರಿಕೆ ಸಲಾಮತಿಯ ಸಂಸ್ಥಾಪಕ, ಹಿರಿಯ ಪತ್ರಕರ್ತ ಎಂ.ಎ. ಹಕೀಮ್ ಶಾಕೀರ್ ಅವರಿಗೆ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ‘ಮುಹಿಬ್ಬನ್ ಇ ಹಕೀಮ್ ಶಾಕೀರ್’ ಸಂಘಟನೆಯ ವತಿಯಿಂದ ಅವರ ಅಭಿಮಾನಿಗಳು ₹ 1.25 ಲಕ್ಷ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.

ಕಳೆದ 55 ವರ್ಷಗಳಿಂದ ಉರ್ದು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಹಕೀಮ್ ಶಾಕೀರ್ ಅವರಿಗೆ ಈ ಪ್ರಶಸ್ತಿ ನೀಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಶಾಸಕಿ ಖನೀಜ್ ಫಾತಿಮಾ, ‘ಸುದೀರ್ಘ ಅವಧಿಯವರೆಗೆ ಉರ್ದು ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಶಾಕೀರ್ ಅವರ ಅಪ್ರತಿಮ ಸಾಧನೆಯಾಗಿದೆ’ ಎಂದು ಶ್ಲಾಘಿಸಿದರು.

ಕರ್ನಾಟಕ ಉರ್ದು ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ವಹಾಬ್ ಅಂದಾಲೀಬ್, ಪತ್ರಕರ್ತರಾದ ಹಮೀದ್ ಅಕ್ಮಲ್, ಡಾ. ಮಜೀದ್ ಡಾಗಿ, ಶಹನವಾಜ್ ಹುಸೇನ್, ಶಾಹೀನ್. ಡಾ. ಅಥರ್ ಮೊಯಿಜ್, ಎಂಜಿನಿಯರ್ ಅಕ್ರಂ ನಖ್ಖಾಷ್, ಮೌಲಾನಾ ನೋಹ್ ಸೇರಿದಂತೆ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT