ಜಿಲ್ಲಾಡಳಿತದಿಂದ ಪೊಲೀಸ್ ಭದ್ರತೆ ಮತ್ತು ಸಹಕಾರ ಪಡೆದುಕೊಂಡು ಅತಿಕ್ರಮಣ ತೆರವು ಮಾಡುವಂತೆ ಕಟ್ಟುನಿಟ್ಟಿನ ನಿರ್ದೇಶನವನ್ನು ನ್ಯಾಯಪೀಠ ನೀಡಿದೆ. ಒತ್ತುವರಿ ತೆರವು ಸಂಬಂಧ ಇದುವರೆಗೆ ಕೈಗೊಂಡ ಕ್ರಮಗಳ ಬಗ್ಗೆ ನ್ಯಾಯ ಪೀಠದ ಮುಂದೆ ಎಎಸ್ಐ ಅಧಿಕಾರಿಗಳು ಪ್ರಮಾಣಪತ್ರ ಸಲ್ಲಿಸಿದರು. ತಿಂಗಳ ಕಾಲಾವಕಾಶ ಕೇಳಿದರು. ಅದರೆ, ನ್ಯಾಯಪೀಠ ಸಮ್ಮತಿಸಲಿಲ್ಲ.