ಗಿಡಗಳು ಸಂಪೂರ್ಣವಾಗಿ ಮುರಿದು ನೆಲಮೇಲೆ ಚಾಪೆಯಂತೆ ಬಿದ್ದಿರುವುದು ರೈತರಿಂದ ನೋಡಲು ಸಾಧ್ಯವಾಗದಂತಾಗಿವೆ.
ಇದರ ಜತೆಗೆ ವಿವಿಧೆಡೆ ಈರುಳ್ಳಿ ತೋಟಗಳು, ಪಪ್ಪಾಯ ಬೆಳೆಗಳು ಸಂಪೂರ್ಣ ಹಾಳಾಗಿವೆ. ದೇಗಲಮಡಿಯ ಸಿದ್ದು ಮಗಿ ಅವರ ತೋಟದಲ್ಲಿನ ಸೀಬೆ ಗಿಡಗಳಿಗೂ ಪ್ರವಾಹ ಬರೆ ಹಾಕಿದೆ. ತರಕಾರಿ ಬೆಳೆಗಾರರಿಗೆ ಹಾಕಿದ ಬೀಜ ಮರಳದಂತಾಗಿದೆ. ತಾಲ್ಲೂಕಿನ ಶಿವರಾಮ ನಾಯಕ ತಾಂಡಾದಲ್ಲಿ ತೇಜು ಜಾಧವ ಅವರು ನೆರಳು ಪರದೆ ಮೂಲಕ ಬೆಳೆದ ಟೊಮಾಟೊ ಹಾಳಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ.