ನಮೋಶಿ ಆರಂಭದಿಂದ ಮುನ್ನಡೆ ಸಾಧಿಸಿದ್ದರೂ, ಕೋಟಾ ತಲುಪಲಿಲ್ಲ. ಐವರು ಅಭ್ಯರ್ಥಿಗಳಲ್ಲಿ ಅತೀ ಕಡಿಮೆ ಮತ ಪಡೆದ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ (59 ಮತ), ಪಕ್ಷೇತರ ಚಂದ್ರಕಾಂತ ಸಿಂಗೆ (93 ಮತ), ಜೆಡಿಎಸ್ನ ತಿಮ್ಮಯ್ಯ ಪುರ್ಲೆ ಅವರನ್ನು ಸ್ಪರ್ಧೆಯಿಂದ ಕೈಬಿಟ್ಟು ಅವರಿಗೆ ಸಲ್ಲಿಕೆಯಾಗಿದ್ದ ಮತಗಳಲ್ಲಿಯ ದ್ವಿತೀಯ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆಸಲಾಯಿತು. ಈ ಸುತ್ತಿನಲ್ಲಿ ನಿಗದಿತ ಕೋಟಾವನ್ನು ಬಿಜೆಪಿ ಅಭ್ಯರ್ಥಿ ತಲುಪಿದ ನಂತರ ಫಲಿತಾಂಶ ಘೋಷಿಸಲಾಯಿತು.