ಸತ್ಯನ ತಮ್ಮ ಮನೋಜಕುಮಾರ್ ಎಂಬಾತ ರೈಲಿನಲ್ಲಿ ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಇದರಿಂದ ಬೇಸತ್ತ ಪ್ರಯಾಣಿಕರು ರೈಲ್ವೆ ಟಿಟಿ ಅವರಿಗೆ ದೂರು ನೀಡಿದ್ದರು. ರೈಲ್ವೆ ಬೋಗಿಗೆ ಬಂದ ಟಿಟಿ ಮನೋಜಕುಮಾರ್ಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದರು. ಈ ವಿಚಾರವನ್ನು ಅಣ್ಣ ಸತ್ಯನಿಗೆ ತಿಳಿಸಿದ್ದ. ರೈಲ್ವೆ ಅಧಿಕಾರಿಗಳಿಗೆ ಕರೆ ಮಾಡಿದ ಸತ್ಯ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದ. ಈತ ಮದ್ಯಪಾನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.