ಗೆಳೆಯರೊಂದಿಗೆ ಬಂದಿದ್ದ ಅವನು, ನೀರಿನಲ್ಲಿ ಈಜಲು ಮೇಲಿನಿಂದ ಹಾರಿದ್ದಾನೆ. ಆದರೆ ನೀರಿನಲ್ಲಿ ಮುಳುಗಿದವನು ಮೇಲೆ ಬಂದಿಲ್ಲ. ಇದರಿಂದ ಕುಂಚಾವರಂ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಉಪೇಂದ್ರ ಮತ್ತು ಸಿಬ್ಬಂದಿ, ಜಹೀರಾಬಾದ ಗ್ರಾಮೀಣ (ಉಕ್ಕಡ) ಪೊಲೀಸ್ ಠಾಣೆ ಅಧಿಕಾರಿಗಳು, ಚಿಂಚೋಳಿಯ ಅಗ್ನಿಶಾಮಕ ಠಾಣೆಯ ಸೂರ್ಯಕಾಂತ ಬಿರಾದಾರ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸುಮಾರು ಮೂರು ಗಂಟೆ ಕಾರ್ಯಾಚರಣೆ ನಡೆಸಿದರು. ಸಂಜೆ 6.30ಕ್ಕೆ ಶವ ದೊರಕಿದೆ.