<p><strong>ಆಳಂದ</strong>: ತಾಲ್ಲೂಕಿನಲ್ಲಿ ಹೊಸ ಕೆರೆಗಳ ನಿರ್ಮಾಣಕ್ಕೆ ₹ 200 ಕೋಟಿ ಪ್ರಸ್ತಾವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು’ ಎಂದು ಮುಖ್ಯಮಂತ್ರಿ ಸಲಹೆಗಾರ ಶಾಸಕ ಬಿ.ಆರ್. ಪಾಟೀಲ ತಿಳಿಸಿದರು.</p>.<p>ತಾಲ್ಲೂಕಿನ ಕೊತ್ತನ ಹಿಪ್ಪರ್ಗಾ ಗ್ರಾಮದ ಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿದರು.</p>.<p>‘ಪ್ರಸಕ್ತ ವರ್ಷ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಎಲ್ಲ ಕೆರೆಗಳು ಭರ್ತಿಯಾಗಿವೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಲಿದೆ. ಸಿರಪುರ ಮಾದರಿ ಜಲಸಂಗ್ರಹ ಕಾಮಗಾರಿಯು ಯಶಸ್ವಿಯಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ’ ಎಂದು ಹೇಳಿದರು.</p>.<p>ಜಿಲ್ಲೆಗೆ 185 ಕೋಟಿ ಬೆಳೆ ವಿಮೆ ಬಂದಿದೆ. ಒಟ್ಟು ಜಿಲ್ಲೆಯಲ್ಲಿ ಆಳಂದ ತಾಲ್ಲೂಕಿಗೆ ಅಧಿಕ ಒಟ್ಟು 82 ಕೋಟಿ ಬೆಳೆ ವಿಮೆ ಬಂದಿದ್ದು, ಅಧಿಕಾರಿಗಳ ಬೆನ್ನು ಬಿದ್ದು ಸಮೀಕ್ಷೆ ನಡೆಸಿದ ಪರಿಣಾಮ ಹೆಚ್ಚಿನ ಲಾಭ ನಮ್ಮ ರೈತರಿಗೆ ಆಗಿದೆ’ ಎಂದು ಹೇಳಿದರು.</p>.<p>‘ಅಮರ್ಜಾ ಅಣೆಕಟ್ಟೆಗೆ ಭೀಮಾ ನದಿಯ ಹೆಚ್ಚುವರಿ ನೀರು ಭರ್ತಿ, ಸಿರಪುರ ಮಾದರಿ ಜಲಸಂಗ್ರಹ ಕಾಮಗಾರಿ ವಿಸ್ತಾರ ಹಾಗೂ ಹೊಸ ಕೆರೆ ನಿರ್ಮಾಣವು ಮುಂಬರುವ ದಿನಗಳಲ್ಲಿ ಪೂರ್ಣಗೊಳ್ಳಲಿವೆ. ಇದರಿಂದ ತಾಲ್ಲೂಕಿನ ಶಾಶ್ವತ ನೀರಿನ ಸಮಸ್ಯೆ ಬಗೆಹರಿಯಲಿದೆ’ ಎಂದು ಹೇಳಿದರು.</p>.<p>ಮುಖಂಡ ಡಿ.ಎನ್. ವಸಂತಕುಮಾರ, ಅನೀಲ ರಾಜೋಳೆ, ಶಿವಪೂಜಪ್ಪ ಬಿರಾದಾರ, ಸಂಜುಕುಮಾರ ಕೋಬ್ರೆ, ಚನ್ನವೀರ ಕಾಳಕಿಂಗೆ, ನಂದಕಿಶೋರ ಬುಜರ್ಕೆ, ದಿಲೀಪ ಕ್ಷೀರಸಾಗರ, ಭಾರತ ಪಾಟೀಲ, ಸಿದ್ರಾಮಪ್ಪ ಜಿಡಗಾ, ಗುರುನಾಥ ಪಾಟೀಲ, ನಾಗೇಂದ್ರ ತಾಂಬೆ, ಸುನೀಲ ಚವ್ಹಾಣ, ಅಣ್ಣಪ್ಪ ನಿರಗುಡಿ , ಸಿದ್ರಾಮಪ್ಪ ದೇಸಾಯಿ ಉಪಸ್ಥಿತರಿದ್ದರು.</p>.<p>ಮುನ್ನೋಳ್ಳಿ, ಕಿಣಿಸುಲ್ತಾನ ಗ್ರಾಮದ ಕೆರೆಗೂ ತೆರಳಿ ತುಂಬಿದ ಕೆರೆಗೆ ಬಾಗಿನ ಅರ್ಪಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಳಂದ</strong>: ತಾಲ್ಲೂಕಿನಲ್ಲಿ ಹೊಸ ಕೆರೆಗಳ ನಿರ್ಮಾಣಕ್ಕೆ ₹ 200 ಕೋಟಿ ಪ್ರಸ್ತಾವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು’ ಎಂದು ಮುಖ್ಯಮಂತ್ರಿ ಸಲಹೆಗಾರ ಶಾಸಕ ಬಿ.ಆರ್. ಪಾಟೀಲ ತಿಳಿಸಿದರು.</p>.<p>ತಾಲ್ಲೂಕಿನ ಕೊತ್ತನ ಹಿಪ್ಪರ್ಗಾ ಗ್ರಾಮದ ಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿದರು.</p>.<p>‘ಪ್ರಸಕ್ತ ವರ್ಷ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಎಲ್ಲ ಕೆರೆಗಳು ಭರ್ತಿಯಾಗಿವೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಲಿದೆ. ಸಿರಪುರ ಮಾದರಿ ಜಲಸಂಗ್ರಹ ಕಾಮಗಾರಿಯು ಯಶಸ್ವಿಯಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ’ ಎಂದು ಹೇಳಿದರು.</p>.<p>ಜಿಲ್ಲೆಗೆ 185 ಕೋಟಿ ಬೆಳೆ ವಿಮೆ ಬಂದಿದೆ. ಒಟ್ಟು ಜಿಲ್ಲೆಯಲ್ಲಿ ಆಳಂದ ತಾಲ್ಲೂಕಿಗೆ ಅಧಿಕ ಒಟ್ಟು 82 ಕೋಟಿ ಬೆಳೆ ವಿಮೆ ಬಂದಿದ್ದು, ಅಧಿಕಾರಿಗಳ ಬೆನ್ನು ಬಿದ್ದು ಸಮೀಕ್ಷೆ ನಡೆಸಿದ ಪರಿಣಾಮ ಹೆಚ್ಚಿನ ಲಾಭ ನಮ್ಮ ರೈತರಿಗೆ ಆಗಿದೆ’ ಎಂದು ಹೇಳಿದರು.</p>.<p>‘ಅಮರ್ಜಾ ಅಣೆಕಟ್ಟೆಗೆ ಭೀಮಾ ನದಿಯ ಹೆಚ್ಚುವರಿ ನೀರು ಭರ್ತಿ, ಸಿರಪುರ ಮಾದರಿ ಜಲಸಂಗ್ರಹ ಕಾಮಗಾರಿ ವಿಸ್ತಾರ ಹಾಗೂ ಹೊಸ ಕೆರೆ ನಿರ್ಮಾಣವು ಮುಂಬರುವ ದಿನಗಳಲ್ಲಿ ಪೂರ್ಣಗೊಳ್ಳಲಿವೆ. ಇದರಿಂದ ತಾಲ್ಲೂಕಿನ ಶಾಶ್ವತ ನೀರಿನ ಸಮಸ್ಯೆ ಬಗೆಹರಿಯಲಿದೆ’ ಎಂದು ಹೇಳಿದರು.</p>.<p>ಮುಖಂಡ ಡಿ.ಎನ್. ವಸಂತಕುಮಾರ, ಅನೀಲ ರಾಜೋಳೆ, ಶಿವಪೂಜಪ್ಪ ಬಿರಾದಾರ, ಸಂಜುಕುಮಾರ ಕೋಬ್ರೆ, ಚನ್ನವೀರ ಕಾಳಕಿಂಗೆ, ನಂದಕಿಶೋರ ಬುಜರ್ಕೆ, ದಿಲೀಪ ಕ್ಷೀರಸಾಗರ, ಭಾರತ ಪಾಟೀಲ, ಸಿದ್ರಾಮಪ್ಪ ಜಿಡಗಾ, ಗುರುನಾಥ ಪಾಟೀಲ, ನಾಗೇಂದ್ರ ತಾಂಬೆ, ಸುನೀಲ ಚವ್ಹಾಣ, ಅಣ್ಣಪ್ಪ ನಿರಗುಡಿ , ಸಿದ್ರಾಮಪ್ಪ ದೇಸಾಯಿ ಉಪಸ್ಥಿತರಿದ್ದರು.</p>.<p>ಮುನ್ನೋಳ್ಳಿ, ಕಿಣಿಸುಲ್ತಾನ ಗ್ರಾಮದ ಕೆರೆಗೂ ತೆರಳಿ ತುಂಬಿದ ಕೆರೆಗೆ ಬಾಗಿನ ಅರ್ಪಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>