ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅರಿವಿನ ನಡಿಗೆ ಬೌದ್ಧ ಧಮ್ಮದ ಕಡೆಗೆ ಎಂಬ ಘೋಷಣೆಯೊಂದಿಗೆ ಸನ್ನತಿಯಲ್ಲಿರುವ ಶಾಕ್ಯ ಮಹಾಚೈತ್ಯ ಬುದ್ಧ ವಿಹಾರದಲ್ಲಿ ನಡೆಯಲಿರುವ ಉತ್ಸವದ ಸಾನ್ನಿಧ್ಯವನ್ನು ನಾಗಪುರದ ದೀಕ್ಷಾ ಭೂಮಿ ಅಧ್ಯಕ್ಷರಾದ ಭಂತೆ ನಾಗಾರ್ಜುನ ಸುರಾಯಿ ಸಸಾಯಿ, ಹತ್ಯಾಳದ ಭಂತೆ ಧಮ್ಮನಾಗ, ವಿಜಯಪುರದ ಭಂತೆ ಬೋಧಿ ಪ್ರಜ್ಞೆ ವಹಿಸುವರು. ಭಂತೆ ಧಮ್ಮನಂದ, ಭಂತೆ ವರಜ್ಯೋತಿ, ಭಂತೆ ಜ್ಞಾನಸಾಗರ, ಭಂತೆ ರೇವತ್, ಭಂತೆ ಧರ್ಮಪಾಲ, ಭಂತೆ ಸಂಘಪಾಲ, ಭಂತೆ ಸಾರಿಪುತ್ರ ವಹಿಸುವರು‘ ಎಂದು ಹೇಳಿದರು.