<p><strong>ಕಲಬುರ್ಗಿ</strong>: ಜಿಲ್ಲೆಯಲ್ಲಿ ಗುರುವಾರ 8,456 ವಿದ್ಯಾರ್ಥಿಗಳು ಸಿಇಟಿಗೆ ಹಾಜರಾದರು. 40 ಮಂದಿ ಮಾತ್ರ ಗೈರಾದರು. ಬೆಳಿಗ್ಗೆ ನಡೆದ ಜೀವವಿಜ್ಞಾನ ಹಾಗೂ ಮಧ್ಯಾಹ್ನದಗಣಿತ ಪರೀಕ್ಷೆಗಳು ಸುಸೂತ್ರವಾಗಿ ನಡೆದವು.</p>.<p>ಪರೀಕ್ಷಾ ಕೇಂದ್ರಗಳಿಗೆ ಕೆಲವರು ಮಾತ್ರ ಒಂದು ತಾಸು ಮುಂಚೆಯೇ ಬಂದರು. ಬಹುಪಾಲು ಮಂದಿ ಸರಿಯಾದ ಸಮಯಕ್ಕೆ (ಬೆಳಿಗ್ಗೆ 10.20) ಹಾಜರಾದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯು ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಕಂಡುಬಂದ ಆತಂಕ ಈ ಬಾರಿ ಯಾರಲ್ಲೂ ಕಾಣಿಸಲಿಲ್ಲ. ಕೋವಿಡ್ ಉಪಟಳದ ಕಾರಣ ಈ ಹಿಂದಿನ ಪರೀಕ್ಷೆಗಳಲ್ಲಿ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳಿಂದಾಗಿ, ಈ ಬಾರಿ ಪರೀಕ್ಷಾರ್ಥಿಗಳು ನಿರಾಳವಾಗಿ ಬಂದರು.</p>.<p>ಹಲವರನ್ನು ಪಾಲಕರೇ ತಮ್ಮ ಸ್ವಂತ ವಾಹನಗಳಲ್ಲಿ ಕರೆತಂದು ಕೇಂದ್ರಕ್ಕೆ ಬಿಟ್ಟರು. ಮತ್ತೆ ಕೆಲವರು ಸ್ಕೂಟರ್ ಹಾಗೂ ಆಟೊಗಳಲ್ಲಿ ಬಂದರು.</p>.<p>ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ಪ್ರತ್ಯೇಕ ಸಾಲಿನಲ್ಲಿ ನಿಲ್ಲಿಸಿ, ಎಲ್ಲರಿಗೂ ಹ್ಯಾಂಡ್ ಸ್ಯಾನಿಟೈಸರ್ ನೀಡಲಾಯಿತು. ಥರ್ಮಲ್ ಗನ್ನಿಂದ ಪ್ರತಿಯೊಬ್ಬರ ಸ್ಕ್ರೀನಿಂಗ್ ನಡೆಸಿಯೇ ಒಳಗೆ ಬಿಡಲಾಯಿತು.</p>.<p class="Subhead">ಎಲ್ಲ ಕೇಂದ್ರಗಳಲ್ಲೂ ಸುಸೂತ್ರ: ನಗರದಲ್ಲಿ 23 ಮತ್ತು ಆಳಂದ ಮತ್ತು ಚಿತ್ತಾಪುರದಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರ ತೆರೆಯಲಾಗಿದ್ದು, ಎಲ್ಲ ಕೇಂದ್ರಗಳಲ್ಲೂ ಮೊದಲ ದಿನದ ಎರಡೂ ಪರೀಕ್ಷೆಗಳು ಸುಸೂತ್ರವಾಗಿ ನಡೆದಿವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮೂಳೇಗಾಂವ ತಿಳಿಸಿದ್ದಾರೆ.</p>.<p>ಪರೀಕ್ಷಾ ಕೋಣೆ, ಶೌಚಾಲಯ, ಡೆಸ್ಕ್ಗಳ ಸ್ಯಾನಿಟೈಸ್ ಮಾಡಲಾಗಿತ್ತು. ಬೆಳಿಗ್ಗೆ ಜೀವವಿಜ್ಞಾನ ಪರೀಕ್ಷೆ ಮುಗಿದ ಬಳಿಕ ಮಧ್ಯಾಹ್ನ ಗಣಿತ ಪರೀಕ್ಷೆ ಆರಂಭಕ್ಕೂ ಮುನ್ನ ಮತ್ತೆ ಸ್ಯಾನಿಟೈಸ್ ಮಾಡಿ ಒಳಗೆ ಬಿಡಲಾಯಿತು.</p>.<p class="Subhead">ಕಟ್ಟುನಿಟ್ಟಿನಿಂದ ಆದೇಶ ಪಾಲನೆ: ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಕಟ್ಟುನಿಟ್ಟಾಗಿ ಆದೇಶ ಪಾಲಿಸಲಾಯಿತು. ಪ್ರತಿ ಕೇಂದ್ರಕ್ಕೆ ಒಬ್ಬ ಮುಖ್ಯಸ್ಥ, ಇಬ್ಬರು ಸಿಟಿಂಗ್ ಸ್ಕ್ಯಾಡ್, ಜಿಲ್ಲಾಡಳಿತದಿಂದ ನೇಮಕಗೊಂಡ ಒಬ್ಬ ಪರಿವೀಕ್ಷಕ ಕೂಡ ಕಾರ್ಯನಿರ್ಯಹಿಸಿದರು. ಜತೆಗೆ, ಪ್ರತಿ ನಾಲ್ಕು ಕೇಂದ್ರಗಳಿಗೆ ಒಬ್ಬ ಕ್ಷೇತ್ರಶಿಕ್ಷಣಾಧಿಕಾರಿಯನ್ನು ಪರಿವೀಕ್ಷಣೆಗೆ ನೇಮಿಸಲಾಗಿತ್ತು.</p>.<p class="Subhead">ಎಂಆರ್ಎಂಸಿಯಿಂದ ಸ್ಯಾನಿಟೈಸರ್: ಸಿಇಟಿಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳಿಗೂ ಕಲಬುರ್ಗಿಯ ಮಹಾದೇವಪ್ಪ ರಾಮಪೂರೆ ಮೆಡಿಕಲ್ ಕಾಲೇಜಿನಿಂದ ತಲಾ ಒಂದೊಂದು ಸ್ಯಾನಿಟೈಸರ್ ದೇಣಿಗೆ ನೀಡಲಾಯಿತು.</p>.<p>ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳಿಗೆ ಅಲ್ಲಿ ನಿಯೋಜನೆಗೊಂಡಿದ್ದ ಸಿಬ್ಬಂದಿ ಇವುಗಳನ್ನು ಹಸ್ತಾಂತರ ಮಾಡಿದರು.</p>.<p>ಪಿಯುಸಿಪರೀಕ್ಷೆ ಸಂದರ್ಭದಲ್ಲಿ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳಿಂದಾಗಿ ನಮಗೆ ಸ್ವಲ್ಪ ಧೈರ್ಯ ಬಂತು. ಹೀಗಾಗಿ, ಯಾವುದೇ ಹಿಂಜರಿಕೆ– ಅಳಕು ಇಲ್ಲದೇ ಸಿಇಟಿ ಬರೆದಿದ್ದೇನೆ. ಇಂದಿನ ಪರೀಕ್ಷೆ ಖುಷಿ ತಂದಿದೆ.</p>.<p><strong>–ಸೌಂದರ್ಯ ಎಸ್. ಬಿರಾದಾರ, ಕಲಬುರ್ಗಿ</strong></p>.<p><br />ಈ ಹಿಂದಿನ ಪರೀಕ್ಷೆಗಳಲ್ಲಿ ಹೆಚ್ಚೇನೂ ವಿದ್ಯಾರ್ಥಿಗಳಿಗೆ ಕೋವಿಡ್ ಅಂಟಿಕೊಳ್ಳದಂತೆ ನೋಡಿಕೊಂಡಿದ್ದರಿಂದ ನಮಗೆ ಭಯ ಇರಲಿಲ್ಲ. ಕೇಂದ್ರಗಳ ಸ್ಯಾನಿಟೈಸೇಷನ್ ಬಗ್ಗೆ, ಸುರಕ್ಷತಾ ವ್ಯವಸ್ಥೆ ಬಗ್ಗೆ ಪತ್ರಿಕೆಯಲ್ಲಿ ಓದಿ ತಿಳಿದಿದ್ದೆ. ನಿರಾತಂಕವಾಗಿ ಬರೆದೆ.</p>.<p>–ಆರತಿ ಪುಕಾಳೆ, ಕಲಬುರ್ಗಿ</p>.<p><br />ಜೀವಿವಿಜ್ಞಾನ ನನಗೆ ಹೆಚ್ಚು ಆಪ್ತವಾದ ವಿಷಯ. ಮುಂದೆ ಅಗ್ರಿಕಲ್ಚರಲ್ ಸೈನ್ಸ್ ಓದಬೇಕು ಎಂಬ ಆಸೆ ಇದೆ. ಅದಕ್ಕೆ ತಕ್ಕ ತಯಾರಿ ಮಾಡಿಕೊಂಡಿದ್ದೇನೆ. ಇದು ಸಾಮಾನ್ಯ ಪ್ರವೇಶ ಪರೀಕ್ಷೆ ಎನ್ನುವುದಕ್ಕಿಂತ ನನ್ನ ಅದೃಷ್ಟ ಪ್ರವೇಶ ಪರೀಕ್ಷೆ ಎನ್ನಬೇಕು.</p>.<p>–ರಕ್ಷಿತಾ ಪಾಟೀಲ, ಕಲಬುರ್ಗಿ</p>.<p><br />ಲಾಕ್ಡೌನ್ ಇಲ್ಲದ ಕಾರಣ ಪರೀಕ್ಷೆಗೆ ಬರಲು ಅನುಕೂಲ ಆಯಿತು. ಕೊಠಡಿ ಒಳಗೆ ನಾವು ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಿದ್ದಾರೆ. ಆದರೆ, ಹೊರಗಡೆ ಎಲ್ಲರೂ ಗುಂಪುಗೂಡುತ್ತಾರೆ. ಕೇಂದ್ರದ ಹೊರಗೂ ಅಂತರ ಇರುವಂತೆ ನೋಡಿಕೊಳ್ಳಬೇಕು.</p>.<p>–ಕಾವೇರಿ ಬಿ.ಬಿ., ಕಲಬುರ್ಗಿ</p>.<p><br />ಕೋವಿಡ್ನಿಂದಾಗಿ ಈಗ ಎಲ್ಲರೂ ತುಸು ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದಾರೆ. ಇಂಥ ವಿಷಮ ಸಂದರ್ಭದಲ್ಲಿ ಸಿಇಟಿ ಪತ್ರಿಕೆ ತುಸು ಸುಲಭ ಇರಬಹುದು ಎಂದು ಅಂದಾಜಿಸಿದ್ದೆ. ಆದರೆ, ಅದು ಸುಳ್ಳಾಯಿತು. ನನ್ನ ಸೀನಿಯರ್ ವಿದ್ಯಾರ್ಥಿಗಳು ಹೇಳುವಂತೆ; ಈ ಬಾರಿ ಹಿಂದಿಗಿಂತಲೂ ಕಠಿಣವಾಗಿತ್ತು.</p>.<p>–ಮುನಾವರ್ ನದಾಫ, ಅಫಜಲಪುರ</p>.<p><br />ಕೋವಿಡ್ ಇರಲಿ– ಬಿಡಲಿ ನಾನೇನೂ ಅದಕ್ಕೆ ತಲೆ ಕೆಡಿಸಿಕೊಂಡಿಲ್ಲ. ಪಿಯು ವಾರ್ಷಿಕ ಪರೀಕ್ಷೆಯಲ್ಲೂ ಹೀಗೇ ನಿರಾಳವಾಗಿದ್ದೆ, ಈಗಲೂ ಅಷ್ಟೇ ನಿರಾಳವಾಗಿ ಬರೆದಿದ್ದೇನೆ. ಪರೀಕ್ಷೆ ಮುಗಿದಾಗಿನಿಂದ ಟಿ.ವಿ ನೋಡುವುದೇ ಬಿಟ್ಟಿದ್ದೇನೆ. ಕೇವಲ ಸಿಇಟಿ ತಯಾರಿ ಮಾಡಿಕೊಂಡಿದ್ದೇನೆ.</p>.<p>–ರಾಜಶೇಖರ ಪಾಟೀಲ, ಕಲಬುರ್ಗಿ</p>.<p><strong>ಆಂಬುಲೆನ್ಸ್ನಲ್ಲಿ ಬಂದು ಸಿಇಟಿಬರೆದ ಇಬ್ಬರು ಸೋಂಕಿತರು</strong></p>.<p><strong>ಕಲಬುರ್ಗಿ:</strong> ಕೋವಿಡ್–19 ಸೋಂಕಿತರಾದ ಒಬ್ಬ ವಿದ್ಯಾರ್ಥಿ ಹಾಗೂ ಒಬ್ಬ ವಿದ್ಯಾರ್ಥಿನಿ ಕೂಡ ಪ್ರತ್ಯೇಕ ಪರೀಕ್ಷಾ ಕೇಂದ್ರದಲ್ಲಿ ಸಿಇಟಿ ಬರೆಯುವ ಮೂಲಕ ಮಾದರಿಯಾದರು.</p>.<p>ಸೋಂಕಿತ ವಿದ್ಯಾರ್ಥಿಗಳಿಗಾಗಿ ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ವಿಶೇಷ ಪರೀಕ್ಷಾ ಕೇಂದ್ರ ತೆರೆಯಲಾಗಿತ್ತು. ಎಲ್ಲ ಕೇಂದ್ರಗಳಂತೆ ಸಿ.ಸಿ.ಟಿ.ವಿ ಕ್ಯಾಮೆರಾ, ಸಿಟಿಂಗ್ ಸ್ಕ್ವಾಡ್, ಪರಿವೀಕ್ಷಕರನ್ನೂ ಇಲ್ಲಿಗೆ ನೇಮಿಸಲಾಯಿತು.</p>.<p>ಈ ವಿದ್ಯಾರ್ಥಿಗಳನ್ನು ಕೋವಿಡ್ ಕೇರ್ ಕೇಂದ್ರಗಳಿಂದ ಆಂಬುಲೆನ್ಸ್ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆತರಲಾಯಿತು. ಒಬ್ಬರು ಎಂಬಿಬಿಎಸ್ ವೈದ್ಯ ಹಾಗೂ ಒಬ್ಬ ಸ್ಟಾಫ್ ನರ್ಸ್ಗಳನ್ನು ಇವರ ಆರೋಗ್ಯ ವಿಚಾರಣೆಗೆ ನಿಯೋಜನೆ ಮಾಡಲಾಗಿತ್ತು.</p>.<p>ಪಿಪಿಇ ಕಿಟ್ ಧರಿಸಿಯೇ ಅವರಿಗೆ ಪ್ರಶ್ನೋತ್ತರ ಪತ್ರಿಕೆ ನೀಡಲಾಯಿತು. ಇಬ್ಬರ ಪತ್ರಿಕೆಗಳನ್ನೂ ಪ್ರತ್ಯೇಕವಾಗಿಯೇ ಪ್ಯಾಕ್ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ</strong>: ಜಿಲ್ಲೆಯಲ್ಲಿ ಗುರುವಾರ 8,456 ವಿದ್ಯಾರ್ಥಿಗಳು ಸಿಇಟಿಗೆ ಹಾಜರಾದರು. 40 ಮಂದಿ ಮಾತ್ರ ಗೈರಾದರು. ಬೆಳಿಗ್ಗೆ ನಡೆದ ಜೀವವಿಜ್ಞಾನ ಹಾಗೂ ಮಧ್ಯಾಹ್ನದಗಣಿತ ಪರೀಕ್ಷೆಗಳು ಸುಸೂತ್ರವಾಗಿ ನಡೆದವು.</p>.<p>ಪರೀಕ್ಷಾ ಕೇಂದ್ರಗಳಿಗೆ ಕೆಲವರು ಮಾತ್ರ ಒಂದು ತಾಸು ಮುಂಚೆಯೇ ಬಂದರು. ಬಹುಪಾಲು ಮಂದಿ ಸರಿಯಾದ ಸಮಯಕ್ಕೆ (ಬೆಳಿಗ್ಗೆ 10.20) ಹಾಜರಾದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯು ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಕಂಡುಬಂದ ಆತಂಕ ಈ ಬಾರಿ ಯಾರಲ್ಲೂ ಕಾಣಿಸಲಿಲ್ಲ. ಕೋವಿಡ್ ಉಪಟಳದ ಕಾರಣ ಈ ಹಿಂದಿನ ಪರೀಕ್ಷೆಗಳಲ್ಲಿ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳಿಂದಾಗಿ, ಈ ಬಾರಿ ಪರೀಕ್ಷಾರ್ಥಿಗಳು ನಿರಾಳವಾಗಿ ಬಂದರು.</p>.<p>ಹಲವರನ್ನು ಪಾಲಕರೇ ತಮ್ಮ ಸ್ವಂತ ವಾಹನಗಳಲ್ಲಿ ಕರೆತಂದು ಕೇಂದ್ರಕ್ಕೆ ಬಿಟ್ಟರು. ಮತ್ತೆ ಕೆಲವರು ಸ್ಕೂಟರ್ ಹಾಗೂ ಆಟೊಗಳಲ್ಲಿ ಬಂದರು.</p>.<p>ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ಪ್ರತ್ಯೇಕ ಸಾಲಿನಲ್ಲಿ ನಿಲ್ಲಿಸಿ, ಎಲ್ಲರಿಗೂ ಹ್ಯಾಂಡ್ ಸ್ಯಾನಿಟೈಸರ್ ನೀಡಲಾಯಿತು. ಥರ್ಮಲ್ ಗನ್ನಿಂದ ಪ್ರತಿಯೊಬ್ಬರ ಸ್ಕ್ರೀನಿಂಗ್ ನಡೆಸಿಯೇ ಒಳಗೆ ಬಿಡಲಾಯಿತು.</p>.<p class="Subhead">ಎಲ್ಲ ಕೇಂದ್ರಗಳಲ್ಲೂ ಸುಸೂತ್ರ: ನಗರದಲ್ಲಿ 23 ಮತ್ತು ಆಳಂದ ಮತ್ತು ಚಿತ್ತಾಪುರದಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರ ತೆರೆಯಲಾಗಿದ್ದು, ಎಲ್ಲ ಕೇಂದ್ರಗಳಲ್ಲೂ ಮೊದಲ ದಿನದ ಎರಡೂ ಪರೀಕ್ಷೆಗಳು ಸುಸೂತ್ರವಾಗಿ ನಡೆದಿವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮೂಳೇಗಾಂವ ತಿಳಿಸಿದ್ದಾರೆ.</p>.<p>ಪರೀಕ್ಷಾ ಕೋಣೆ, ಶೌಚಾಲಯ, ಡೆಸ್ಕ್ಗಳ ಸ್ಯಾನಿಟೈಸ್ ಮಾಡಲಾಗಿತ್ತು. ಬೆಳಿಗ್ಗೆ ಜೀವವಿಜ್ಞಾನ ಪರೀಕ್ಷೆ ಮುಗಿದ ಬಳಿಕ ಮಧ್ಯಾಹ್ನ ಗಣಿತ ಪರೀಕ್ಷೆ ಆರಂಭಕ್ಕೂ ಮುನ್ನ ಮತ್ತೆ ಸ್ಯಾನಿಟೈಸ್ ಮಾಡಿ ಒಳಗೆ ಬಿಡಲಾಯಿತು.</p>.<p class="Subhead">ಕಟ್ಟುನಿಟ್ಟಿನಿಂದ ಆದೇಶ ಪಾಲನೆ: ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಕಟ್ಟುನಿಟ್ಟಾಗಿ ಆದೇಶ ಪಾಲಿಸಲಾಯಿತು. ಪ್ರತಿ ಕೇಂದ್ರಕ್ಕೆ ಒಬ್ಬ ಮುಖ್ಯಸ್ಥ, ಇಬ್ಬರು ಸಿಟಿಂಗ್ ಸ್ಕ್ಯಾಡ್, ಜಿಲ್ಲಾಡಳಿತದಿಂದ ನೇಮಕಗೊಂಡ ಒಬ್ಬ ಪರಿವೀಕ್ಷಕ ಕೂಡ ಕಾರ್ಯನಿರ್ಯಹಿಸಿದರು. ಜತೆಗೆ, ಪ್ರತಿ ನಾಲ್ಕು ಕೇಂದ್ರಗಳಿಗೆ ಒಬ್ಬ ಕ್ಷೇತ್ರಶಿಕ್ಷಣಾಧಿಕಾರಿಯನ್ನು ಪರಿವೀಕ್ಷಣೆಗೆ ನೇಮಿಸಲಾಗಿತ್ತು.</p>.<p class="Subhead">ಎಂಆರ್ಎಂಸಿಯಿಂದ ಸ್ಯಾನಿಟೈಸರ್: ಸಿಇಟಿಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳಿಗೂ ಕಲಬುರ್ಗಿಯ ಮಹಾದೇವಪ್ಪ ರಾಮಪೂರೆ ಮೆಡಿಕಲ್ ಕಾಲೇಜಿನಿಂದ ತಲಾ ಒಂದೊಂದು ಸ್ಯಾನಿಟೈಸರ್ ದೇಣಿಗೆ ನೀಡಲಾಯಿತು.</p>.<p>ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳಿಗೆ ಅಲ್ಲಿ ನಿಯೋಜನೆಗೊಂಡಿದ್ದ ಸಿಬ್ಬಂದಿ ಇವುಗಳನ್ನು ಹಸ್ತಾಂತರ ಮಾಡಿದರು.</p>.<p>ಪಿಯುಸಿಪರೀಕ್ಷೆ ಸಂದರ್ಭದಲ್ಲಿ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳಿಂದಾಗಿ ನಮಗೆ ಸ್ವಲ್ಪ ಧೈರ್ಯ ಬಂತು. ಹೀಗಾಗಿ, ಯಾವುದೇ ಹಿಂಜರಿಕೆ– ಅಳಕು ಇಲ್ಲದೇ ಸಿಇಟಿ ಬರೆದಿದ್ದೇನೆ. ಇಂದಿನ ಪರೀಕ್ಷೆ ಖುಷಿ ತಂದಿದೆ.</p>.<p><strong>–ಸೌಂದರ್ಯ ಎಸ್. ಬಿರಾದಾರ, ಕಲಬುರ್ಗಿ</strong></p>.<p><br />ಈ ಹಿಂದಿನ ಪರೀಕ್ಷೆಗಳಲ್ಲಿ ಹೆಚ್ಚೇನೂ ವಿದ್ಯಾರ್ಥಿಗಳಿಗೆ ಕೋವಿಡ್ ಅಂಟಿಕೊಳ್ಳದಂತೆ ನೋಡಿಕೊಂಡಿದ್ದರಿಂದ ನಮಗೆ ಭಯ ಇರಲಿಲ್ಲ. ಕೇಂದ್ರಗಳ ಸ್ಯಾನಿಟೈಸೇಷನ್ ಬಗ್ಗೆ, ಸುರಕ್ಷತಾ ವ್ಯವಸ್ಥೆ ಬಗ್ಗೆ ಪತ್ರಿಕೆಯಲ್ಲಿ ಓದಿ ತಿಳಿದಿದ್ದೆ. ನಿರಾತಂಕವಾಗಿ ಬರೆದೆ.</p>.<p>–ಆರತಿ ಪುಕಾಳೆ, ಕಲಬುರ್ಗಿ</p>.<p><br />ಜೀವಿವಿಜ್ಞಾನ ನನಗೆ ಹೆಚ್ಚು ಆಪ್ತವಾದ ವಿಷಯ. ಮುಂದೆ ಅಗ್ರಿಕಲ್ಚರಲ್ ಸೈನ್ಸ್ ಓದಬೇಕು ಎಂಬ ಆಸೆ ಇದೆ. ಅದಕ್ಕೆ ತಕ್ಕ ತಯಾರಿ ಮಾಡಿಕೊಂಡಿದ್ದೇನೆ. ಇದು ಸಾಮಾನ್ಯ ಪ್ರವೇಶ ಪರೀಕ್ಷೆ ಎನ್ನುವುದಕ್ಕಿಂತ ನನ್ನ ಅದೃಷ್ಟ ಪ್ರವೇಶ ಪರೀಕ್ಷೆ ಎನ್ನಬೇಕು.</p>.<p>–ರಕ್ಷಿತಾ ಪಾಟೀಲ, ಕಲಬುರ್ಗಿ</p>.<p><br />ಲಾಕ್ಡೌನ್ ಇಲ್ಲದ ಕಾರಣ ಪರೀಕ್ಷೆಗೆ ಬರಲು ಅನುಕೂಲ ಆಯಿತು. ಕೊಠಡಿ ಒಳಗೆ ನಾವು ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಿದ್ದಾರೆ. ಆದರೆ, ಹೊರಗಡೆ ಎಲ್ಲರೂ ಗುಂಪುಗೂಡುತ್ತಾರೆ. ಕೇಂದ್ರದ ಹೊರಗೂ ಅಂತರ ಇರುವಂತೆ ನೋಡಿಕೊಳ್ಳಬೇಕು.</p>.<p>–ಕಾವೇರಿ ಬಿ.ಬಿ., ಕಲಬುರ್ಗಿ</p>.<p><br />ಕೋವಿಡ್ನಿಂದಾಗಿ ಈಗ ಎಲ್ಲರೂ ತುಸು ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದಾರೆ. ಇಂಥ ವಿಷಮ ಸಂದರ್ಭದಲ್ಲಿ ಸಿಇಟಿ ಪತ್ರಿಕೆ ತುಸು ಸುಲಭ ಇರಬಹುದು ಎಂದು ಅಂದಾಜಿಸಿದ್ದೆ. ಆದರೆ, ಅದು ಸುಳ್ಳಾಯಿತು. ನನ್ನ ಸೀನಿಯರ್ ವಿದ್ಯಾರ್ಥಿಗಳು ಹೇಳುವಂತೆ; ಈ ಬಾರಿ ಹಿಂದಿಗಿಂತಲೂ ಕಠಿಣವಾಗಿತ್ತು.</p>.<p>–ಮುನಾವರ್ ನದಾಫ, ಅಫಜಲಪುರ</p>.<p><br />ಕೋವಿಡ್ ಇರಲಿ– ಬಿಡಲಿ ನಾನೇನೂ ಅದಕ್ಕೆ ತಲೆ ಕೆಡಿಸಿಕೊಂಡಿಲ್ಲ. ಪಿಯು ವಾರ್ಷಿಕ ಪರೀಕ್ಷೆಯಲ್ಲೂ ಹೀಗೇ ನಿರಾಳವಾಗಿದ್ದೆ, ಈಗಲೂ ಅಷ್ಟೇ ನಿರಾಳವಾಗಿ ಬರೆದಿದ್ದೇನೆ. ಪರೀಕ್ಷೆ ಮುಗಿದಾಗಿನಿಂದ ಟಿ.ವಿ ನೋಡುವುದೇ ಬಿಟ್ಟಿದ್ದೇನೆ. ಕೇವಲ ಸಿಇಟಿ ತಯಾರಿ ಮಾಡಿಕೊಂಡಿದ್ದೇನೆ.</p>.<p>–ರಾಜಶೇಖರ ಪಾಟೀಲ, ಕಲಬುರ್ಗಿ</p>.<p><strong>ಆಂಬುಲೆನ್ಸ್ನಲ್ಲಿ ಬಂದು ಸಿಇಟಿಬರೆದ ಇಬ್ಬರು ಸೋಂಕಿತರು</strong></p>.<p><strong>ಕಲಬುರ್ಗಿ:</strong> ಕೋವಿಡ್–19 ಸೋಂಕಿತರಾದ ಒಬ್ಬ ವಿದ್ಯಾರ್ಥಿ ಹಾಗೂ ಒಬ್ಬ ವಿದ್ಯಾರ್ಥಿನಿ ಕೂಡ ಪ್ರತ್ಯೇಕ ಪರೀಕ್ಷಾ ಕೇಂದ್ರದಲ್ಲಿ ಸಿಇಟಿ ಬರೆಯುವ ಮೂಲಕ ಮಾದರಿಯಾದರು.</p>.<p>ಸೋಂಕಿತ ವಿದ್ಯಾರ್ಥಿಗಳಿಗಾಗಿ ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ವಿಶೇಷ ಪರೀಕ್ಷಾ ಕೇಂದ್ರ ತೆರೆಯಲಾಗಿತ್ತು. ಎಲ್ಲ ಕೇಂದ್ರಗಳಂತೆ ಸಿ.ಸಿ.ಟಿ.ವಿ ಕ್ಯಾಮೆರಾ, ಸಿಟಿಂಗ್ ಸ್ಕ್ವಾಡ್, ಪರಿವೀಕ್ಷಕರನ್ನೂ ಇಲ್ಲಿಗೆ ನೇಮಿಸಲಾಯಿತು.</p>.<p>ಈ ವಿದ್ಯಾರ್ಥಿಗಳನ್ನು ಕೋವಿಡ್ ಕೇರ್ ಕೇಂದ್ರಗಳಿಂದ ಆಂಬುಲೆನ್ಸ್ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆತರಲಾಯಿತು. ಒಬ್ಬರು ಎಂಬಿಬಿಎಸ್ ವೈದ್ಯ ಹಾಗೂ ಒಬ್ಬ ಸ್ಟಾಫ್ ನರ್ಸ್ಗಳನ್ನು ಇವರ ಆರೋಗ್ಯ ವಿಚಾರಣೆಗೆ ನಿಯೋಜನೆ ಮಾಡಲಾಗಿತ್ತು.</p>.<p>ಪಿಪಿಇ ಕಿಟ್ ಧರಿಸಿಯೇ ಅವರಿಗೆ ಪ್ರಶ್ನೋತ್ತರ ಪತ್ರಿಕೆ ನೀಡಲಾಯಿತು. ಇಬ್ಬರ ಪತ್ರಿಕೆಗಳನ್ನೂ ಪ್ರತ್ಯೇಕವಾಗಿಯೇ ಪ್ಯಾಕ್ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>