ನಮ್ಮ ತಾಲ್ಲೂಕಿನ ಕಂಪನಿಗೆ ಬೀಗ ಹಾಕಿಸಿ ನೆರೆ ಜಿಲ್ಲೆಯ ಕಂಪನಿಗಳು ಕಬ್ಬು ಪಡೆಯುತ್ತಿರುವುದು ರೈತರಲ್ಲಿ ಅನುಮಾನ ಹುಟ್ಟುಹಾಕಿದ್ದು, ಸಿದ್ಧಸಿರಿ ಪುನರ್ ಆರಂಭಿಸಿ ತಾಲ್ಲೂಕಿನ ರೈತರ ಕಬ್ಬು ನುರಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ. ಈ ಮಧ್ಯೆ ಕಬ್ಬು ಬೆಳೆಗಳು ಮಂಗಳವಾರ ಪ್ರತಿಭಟನೆ ನಡೆಸಿ ಸ್ಥಳೀಯ ರೈತರ ಕಬ್ಬು ಖರೀದಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದರು.