‘ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಲು ತಾರ್ಕಿಕ ಅಂತ್ಯ’
‘ವೀರಶೈವ ಲಿಂಗಾಯತರ ಸಮುದಾಯದ ಎಲ್ಲ ಪಂಗಡಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಲು ಎಲ್ಲರೂ ಒಗ್ಗೂಡಿ ಹೋರಾಟ ಮಾಡಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು’ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. ‘ಸಮಾಜದಲ್ಲಿ ಬಹಳಷ್ಟು ಸಿರಿವಂತರಿದ್ದು ವೈಯಕ್ತಿಕವಾಗಿ ಪ್ರಬಲರೂ ಆಗಿದ್ದೇವೆ. ಆದರೆ ಸಾಮೂಹಿಕವಾಗಿ ಬಹಳ ದುರ್ಬಲರಾಗಿದ್ದೇವೆ. ನಮ್ಮಲ್ಲಿನ ಕಚ್ಚಾಟ ಭಿನ್ನಾಭಿಪ್ರಾಯ ಹೊಟ್ಟೆ ಕಿಚ್ಚು ಕಾಲೆಳೆಯುವ ಪ್ರವೃತ್ತಿಯನ್ನು ಬಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕಿದೆ’ ಎಂದರು.