ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಕೊರೊನಾ ಸೋಂಕು ಹರಡುವುದು ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಘೊಷಿಸಿದ 21 ದಿನ ಇಡಿ ದೇಶವೇ ಲಾಕ್ ಡೌನ್ ಮಾಡಿದರೂ ತಾಲ್ಲೂಕಿನಲ್ಲಿ ಅಲ್ಲಲಿ ಜನರ ಓಡಾಟ ಕಾಣಿಸುತ್ತಿದೆ. ಇದರ ನಿಯಂತ್ರಣಕ್ಕೆ ಸಂಕಲ್ಪ ತೊಟ್ಟಿರುವ ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಅವರು ಸ್ವತ ಲಾಠಿ ಕೈಗೆತ್ತಿಕೊಂಡು ಓಡಾಡಿದರು.