<p><strong>ಕಲಬುರ್ಗಿ</strong>: ಜಿಲ್ಲೆಯಲ್ಲಿ ಸೋಮವಾರ ನಾಲ್ಕು ತಿಂಗಳ ಹಸುಗೂಸು ಸೇರಿ ಮತ್ತೆ 24 ಮಂದಿಗೆ ಕೋವಿಡ್–19 ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ ಮುನ್ನೂರರ ಗಡಿ (305) ದಾಟಿದೆ. ಬೆಂಗಳೂರನ್ನು ಹೊರತುಪಡಿಸಿದರೆ ತ್ರಿಶತಕ ಬಾರಿಸಿದ ಮೊದಲ ಜಿಲ್ಲೆ ಎಂಬ ಅಪಕೀರ್ತಿ ಕೂಡ ಕಲಬುರ್ಗಿಗೆ ಬಂದಿದೆ.</p>.<p>ಹೊಸದಾಗಿ ಸೋಂಕಿತರಾದವರೆಲ್ಲ ಮಹಾರಾಷ್ಟ್ರದ ವಿವಿಧ ನಗರಗಳಿಂದ ಮರಳಿದವರು. ಈಚೆಗಷ್ಟೇ ಮನೆ ಸೇರಿದ್ದ ಅವರಲ್ಲಿ ವೈರಾಣು ಕಂಡುಬಂದ ಕಾರಣ ಮತ್ತೆ ಆಸ್ಪತ್ರೆಗೆ ದಾಖಲಾಗಿದೆ. ಇವರಲ್ಲಿ ಎಂಟು ಮಕ್ಕಳೂ ಸೇರಿದ್ದಾರೆ. 25 ವರ್ಷದ ಯುವಕ ಮಾತ್ರ ಕಲಬುರ್ಗಿ ನಗರದವರು.</p>.<p class="Subhead"><strong>ತಾಲ್ಲೂಕು ವಾರು ಸೋಂಕಿತರು: </strong>ಅಫಜಲಪುರ ತಾಲ್ಲೂಕಿನರೇವೂರ ಗ್ರಾಮದ 25 ವರ್ಷದ ಯುವಕ, 4 ವರ್ಷದ ಗಂಡು ಮಗು, ಆಳಂದ ತಾಲ್ಲೂಕಿನ ಹಿರೊಳ್ಳಿ ತಾಂಡಾದ 22 ವರ್ಷದ ಮಹಿಳೆ, 3 ವರ್ಷ ಬಾಲಕಿ, ಸಲಗರ ಗ್ರಾಮದ 7 ವರ್ಷದ ಬಾಲಕ, 8 ವರ್ಷದ ಬಾಲಕಿ, 12 ವರ್ಷದ ಬಾಲಕಿ, 15 ವರ್ಷದ ಇಬ್ಬರು ಬಾಲಕಿಯರು, 35 ವರ್ಷದ ಮಹಿಳೆ ಮತ್ತು 45 ವರ್ಷದ ಪುರುಷ, ನರೋಣಾದ 65 ವರ್ಷದ ವೃದ್ಧ, 34 ವರ್ಷದ ಮಹಿಳೆ.</p>.<p>ಚಿತ್ತಾಪುರ ತಾಲ್ಲೂಕಿನ 16 ವರ್ಷದ ಬಾಲಕ, 35 ವರ್ಷದ ಪುರುಷ, 20 ವರ್ಷದ ಯುವಕ, 32 ವರ್ಷದ ಪುರುಷ, 30 ವರ್ಷದ ಪುರುಷ.</p>.<p>ಚಿಂಚೋಳಿ ತಾಲ್ಲೂಕಿನ ಚಂದನಕೇರಾದ 26 ವರ್ಷದ ಪುರುಷ, 20 ವರ್ಷದ ಇಬ್ಬರು ಯುವಕರು ಹಾಗೂ 19 ವರ್ಷದ ಯುವಕ.</p>.<p>ಸೇಡಂ ತಾಲ್ಲೂಕಿನ 54 ವರ್ಷದ ಪುರುಷ ಮತ್ತು 44 ವರ್ಷದ ಪುರುಷ, ನಾಡೇಪಲ್ಲಿ ಗ್ರಾಮದ 45 ವರ್ಷದ ಮಹಿಳೆ, ಕುರಕುಂಟಾ ಗ್ರಾಮದ 18 ವರ್ಷದ ಯುವಕ, ಕಡಚರ್ಲಾ ಗ್ರಾಮದ 1 ವರ್ಷ ಮತ್ತು 2 ವರ್ಷದ ಮಕ್ಕಳು ಮತ್ತು 14 ವರ್ಷದ ಬಾಲಕನಲ್ಲಿ ಕಾಣಿಸಿಕೊಂಡಿದೆ. ಮೋತಕಪಲ್ಲಿ ಗ್ರಾಮದ 27 ವರ್ಷದ ಪುರುಷ ಮತ್ತು 25 ವರ್ಷದ ಮಹಿಳೆ, ಇಟಕಾಲ್ ಗ್ರಾಮದ 22 ವರ್ಷದ ಪುರುಷ ಮತ್ತು 16 ವರ್ಷದ ಯುವತಿ, ಬುರಗಪಲ್ಲಿ ಗ್ರಾಮದ 6 ವರ್ಷದ ಬಾಲಕ ಮತ್ತು 30 ವರ್ಷದ ಪುರುಷನಲ್ಲಿ ಕಾಣಿಸಿಕೊಂಡಿದೆ.</p>.<p>ಕಾಳಗಿ ಪಟ್ಟಣದ 45 ವರ್ಷದ ವ್ಯಕ್ತಿ, ಮಳಗಾ ಕೆ. ಗ್ರಾಮದ 20 ವರ್ಷದ ಯುವಕ, ಕಲ್ಲಹಿಪ್ಪರಗಾ ಗ್ರಾಮದ 30 ವರ್ಷದ ವ್ಯಕ್ತಿ, ವಟವಟಿ ಗ್ರಾಮದ 30 ವರ್ಷದ ವ್ಯಕ್ತಿ ಹಾಗೂ ಮುಕರಂಬಾ ಗ್ರಾಮದ 22 ವರ್ಷದ ಯುವಕ.</p>.<p>ಆಳಂದದ ಕಮಲಾನಗರದಲ್ಲಿ ಒಂದೇ ಕುಟುಂಬದ 6 ಜನರು, ನರೋಣಾ 2, ಜೀರಹಳ್ಳಿ ತಾಂಡಾದಲ್ಲಿ 2, ಕಿಣ್ಣಿಸುಲ್ತಾನ 1.</p>.<p>ಒಟ್ಟಾರೆ ಜಿಲ್ಲೆಯ 305 ಪ್ರಕರಣಗಳಲ್ಲಿ ಏಳು ಮಂದಿ ಮೃತಪಟ್ಟಿದ್ದು, 128 ಜನ ಗುಣಮುಖರಾಗಿದ್ದಾರೆ. ಇನ್ನೂ 170 ಜನ ಚಿಕಿತ್ಸೆಪಡೆಯುತ್ತಿದ್ದಾರೆ.</p>.<p><strong>‘ಮನೆಗೆ ತೆರಳಿ ಗಂಟಲು ದ್ರವ ಸಂಗ್ರಹ’</strong></p>.<p>ಬೇರೆಡೆಯಿಂದ ಜಿಲ್ಲೆಗೆ ಬಂದು ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ತೆರಳಿದ ಹಲವರ ಕೊರೊನಾ ತಪಾಸಣೆಗಾಗಿ ಗಂಟಲು ದ್ರವ ಸಂಗ್ರಹಿಸಬೇಕಿದೆ. ಅದಕ್ಕಾಗಿ ವೈದ್ಯಕೀಯ ತಂಡಗಳು ಮನೆಗಳಿಗೆ ಭೇಟಿ ನೀಡಿ ಮಾದರಿ ಸಂಗ್ರಹ ನಡೆಸಲಿವೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.</p>.<p>ಈ ಕಾರ್ಯಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ</strong>: ಜಿಲ್ಲೆಯಲ್ಲಿ ಸೋಮವಾರ ನಾಲ್ಕು ತಿಂಗಳ ಹಸುಗೂಸು ಸೇರಿ ಮತ್ತೆ 24 ಮಂದಿಗೆ ಕೋವಿಡ್–19 ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ ಮುನ್ನೂರರ ಗಡಿ (305) ದಾಟಿದೆ. ಬೆಂಗಳೂರನ್ನು ಹೊರತುಪಡಿಸಿದರೆ ತ್ರಿಶತಕ ಬಾರಿಸಿದ ಮೊದಲ ಜಿಲ್ಲೆ ಎಂಬ ಅಪಕೀರ್ತಿ ಕೂಡ ಕಲಬುರ್ಗಿಗೆ ಬಂದಿದೆ.</p>.<p>ಹೊಸದಾಗಿ ಸೋಂಕಿತರಾದವರೆಲ್ಲ ಮಹಾರಾಷ್ಟ್ರದ ವಿವಿಧ ನಗರಗಳಿಂದ ಮರಳಿದವರು. ಈಚೆಗಷ್ಟೇ ಮನೆ ಸೇರಿದ್ದ ಅವರಲ್ಲಿ ವೈರಾಣು ಕಂಡುಬಂದ ಕಾರಣ ಮತ್ತೆ ಆಸ್ಪತ್ರೆಗೆ ದಾಖಲಾಗಿದೆ. ಇವರಲ್ಲಿ ಎಂಟು ಮಕ್ಕಳೂ ಸೇರಿದ್ದಾರೆ. 25 ವರ್ಷದ ಯುವಕ ಮಾತ್ರ ಕಲಬುರ್ಗಿ ನಗರದವರು.</p>.<p class="Subhead"><strong>ತಾಲ್ಲೂಕು ವಾರು ಸೋಂಕಿತರು: </strong>ಅಫಜಲಪುರ ತಾಲ್ಲೂಕಿನರೇವೂರ ಗ್ರಾಮದ 25 ವರ್ಷದ ಯುವಕ, 4 ವರ್ಷದ ಗಂಡು ಮಗು, ಆಳಂದ ತಾಲ್ಲೂಕಿನ ಹಿರೊಳ್ಳಿ ತಾಂಡಾದ 22 ವರ್ಷದ ಮಹಿಳೆ, 3 ವರ್ಷ ಬಾಲಕಿ, ಸಲಗರ ಗ್ರಾಮದ 7 ವರ್ಷದ ಬಾಲಕ, 8 ವರ್ಷದ ಬಾಲಕಿ, 12 ವರ್ಷದ ಬಾಲಕಿ, 15 ವರ್ಷದ ಇಬ್ಬರು ಬಾಲಕಿಯರು, 35 ವರ್ಷದ ಮಹಿಳೆ ಮತ್ತು 45 ವರ್ಷದ ಪುರುಷ, ನರೋಣಾದ 65 ವರ್ಷದ ವೃದ್ಧ, 34 ವರ್ಷದ ಮಹಿಳೆ.</p>.<p>ಚಿತ್ತಾಪುರ ತಾಲ್ಲೂಕಿನ 16 ವರ್ಷದ ಬಾಲಕ, 35 ವರ್ಷದ ಪುರುಷ, 20 ವರ್ಷದ ಯುವಕ, 32 ವರ್ಷದ ಪುರುಷ, 30 ವರ್ಷದ ಪುರುಷ.</p>.<p>ಚಿಂಚೋಳಿ ತಾಲ್ಲೂಕಿನ ಚಂದನಕೇರಾದ 26 ವರ್ಷದ ಪುರುಷ, 20 ವರ್ಷದ ಇಬ್ಬರು ಯುವಕರು ಹಾಗೂ 19 ವರ್ಷದ ಯುವಕ.</p>.<p>ಸೇಡಂ ತಾಲ್ಲೂಕಿನ 54 ವರ್ಷದ ಪುರುಷ ಮತ್ತು 44 ವರ್ಷದ ಪುರುಷ, ನಾಡೇಪಲ್ಲಿ ಗ್ರಾಮದ 45 ವರ್ಷದ ಮಹಿಳೆ, ಕುರಕುಂಟಾ ಗ್ರಾಮದ 18 ವರ್ಷದ ಯುವಕ, ಕಡಚರ್ಲಾ ಗ್ರಾಮದ 1 ವರ್ಷ ಮತ್ತು 2 ವರ್ಷದ ಮಕ್ಕಳು ಮತ್ತು 14 ವರ್ಷದ ಬಾಲಕನಲ್ಲಿ ಕಾಣಿಸಿಕೊಂಡಿದೆ. ಮೋತಕಪಲ್ಲಿ ಗ್ರಾಮದ 27 ವರ್ಷದ ಪುರುಷ ಮತ್ತು 25 ವರ್ಷದ ಮಹಿಳೆ, ಇಟಕಾಲ್ ಗ್ರಾಮದ 22 ವರ್ಷದ ಪುರುಷ ಮತ್ತು 16 ವರ್ಷದ ಯುವತಿ, ಬುರಗಪಲ್ಲಿ ಗ್ರಾಮದ 6 ವರ್ಷದ ಬಾಲಕ ಮತ್ತು 30 ವರ್ಷದ ಪುರುಷನಲ್ಲಿ ಕಾಣಿಸಿಕೊಂಡಿದೆ.</p>.<p>ಕಾಳಗಿ ಪಟ್ಟಣದ 45 ವರ್ಷದ ವ್ಯಕ್ತಿ, ಮಳಗಾ ಕೆ. ಗ್ರಾಮದ 20 ವರ್ಷದ ಯುವಕ, ಕಲ್ಲಹಿಪ್ಪರಗಾ ಗ್ರಾಮದ 30 ವರ್ಷದ ವ್ಯಕ್ತಿ, ವಟವಟಿ ಗ್ರಾಮದ 30 ವರ್ಷದ ವ್ಯಕ್ತಿ ಹಾಗೂ ಮುಕರಂಬಾ ಗ್ರಾಮದ 22 ವರ್ಷದ ಯುವಕ.</p>.<p>ಆಳಂದದ ಕಮಲಾನಗರದಲ್ಲಿ ಒಂದೇ ಕುಟುಂಬದ 6 ಜನರು, ನರೋಣಾ 2, ಜೀರಹಳ್ಳಿ ತಾಂಡಾದಲ್ಲಿ 2, ಕಿಣ್ಣಿಸುಲ್ತಾನ 1.</p>.<p>ಒಟ್ಟಾರೆ ಜಿಲ್ಲೆಯ 305 ಪ್ರಕರಣಗಳಲ್ಲಿ ಏಳು ಮಂದಿ ಮೃತಪಟ್ಟಿದ್ದು, 128 ಜನ ಗುಣಮುಖರಾಗಿದ್ದಾರೆ. ಇನ್ನೂ 170 ಜನ ಚಿಕಿತ್ಸೆಪಡೆಯುತ್ತಿದ್ದಾರೆ.</p>.<p><strong>‘ಮನೆಗೆ ತೆರಳಿ ಗಂಟಲು ದ್ರವ ಸಂಗ್ರಹ’</strong></p>.<p>ಬೇರೆಡೆಯಿಂದ ಜಿಲ್ಲೆಗೆ ಬಂದು ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ತೆರಳಿದ ಹಲವರ ಕೊರೊನಾ ತಪಾಸಣೆಗಾಗಿ ಗಂಟಲು ದ್ರವ ಸಂಗ್ರಹಿಸಬೇಕಿದೆ. ಅದಕ್ಕಾಗಿ ವೈದ್ಯಕೀಯ ತಂಡಗಳು ಮನೆಗಳಿಗೆ ಭೇಟಿ ನೀಡಿ ಮಾದರಿ ಸಂಗ್ರಹ ನಡೆಸಲಿವೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.</p>.<p>ಈ ಕಾರ್ಯಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>